<p><strong>ಚೆನ್ನೈ:</strong> ಮದ್ರಾಸ್ ವಿಧಾನ ಪರಿಷತ್ನ (ಎಂಎಲ್ಸಿ) ಶತಮಾನೋತ್ಸವ ಕಾರ್ಯಕ್ರಮ ಸೋಮವಾರ (ಆಗಸ್ಟ್ 2) ಇಲ್ಲಿನ ವಿಧಾನಸಭೆಯಲ್ಲಿ ನಡೆಯಲಿದೆ.</p>.<p>ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಇದೇ ವೇಳೆ ಅವರು ಡಿಎಂಕೆ ವರಿಷ್ಠ ಹಾಗೂ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ.ಕರುಣಾನಿಧಿಯವರ ಭಾವಚಿತ್ರವನ್ನು ವಿಧಾನಸಭೆಯ ಸಭಾಭವನದಲ್ಲಿ ಅನಾವರಣಗೊಳಿಸುವರು.</p>.<p>1921ರ ಜನವರಿ 12ರಂದು ಮದ್ರಾಸ್ ವಿಧಾನಪರಿಷತ್ ಅಸ್ತಿತ್ವಕ್ಕೆ ಬಂತು. ಬ್ರಿಟಿಷ್ ಆಳ್ವಿಕೆಯ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಜಸ್ಟಿಸ್ ಪಾರ್ಟಿ ಆಗ ಮೊದಲ ಸರ್ಕಾರ ರಚಿಸಿತ್ತು. ಇದೇ ನಂತರದ ದಿನಗಳಲ್ಲಿ ಡಿಎಂಕೆ ಪಕ್ಷವಾಯಿತು.</p>.<p>ಕೆಲ ವರ್ಷಗಳ ನಂತರ ಆಗಿನ ಮದ್ರಾಸ್ ರಾಜ್ಯದ ವಿಧಾನಸಭೆ ಎಂದು ಕರೆಯಲಾದ ಮದ್ರಾಸ್ ವಿಧಾನ ಪರಿಷತ್, ಭಾಷಾವಾರು ಪ್ರಾಂತ್ಯಗಳ ರಚನೆ ನಂತರ ತಮಿಳುನಾಡು ವಿಧಾನಸಭೆಯಾಯಿತು.</p>.<p>ಕೋವಿಂದ್ ಅವರು ಮಂಗಳವಾರ ನೀಲಗಿರಿಗೆ ತೆರಳಿ, ನಾಲ್ಕು ದಿನಗಳ ಕಾಲ ಅಲ್ಲಿಯೇ ತಂಗುವರು. ಈ ಅವಧಿಯಲ್ಲಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು ಎಂದು ಮೂಲಗಳು ತಿಳಿಸಿವೆ.</p>.<p>ಐತಿಹಾಸಿಕ ಮಹತ್ವ: ಮದ್ರಾಸ್ ವಿಧಾನ ಪರಿಷತ್ನಲ್ಲಿ ಹಲವು ಮಹತ್ವದ ಶಾಸನಗಳನ್ನು ಅಂಗೀಕರಿಸಲಾಗಿದೆ. ಹಿಂದೂ ಧಾರ್ಮಿಕ ದತ್ತಿ ಕಾಯ್ದೆ (1926), ದೇವದಾಸಿ ಪದ್ಧತಿ ನಿರ್ಮೂಲನೆ ಕಾಯ್ದೆ, ಬಡವರಿಗೆ ನಿವೇಶನಗಳನ್ನು ಉಚಿತವಾಗಿ ಹಂಚಿಕೆ ಮಾಡುವ ಕಾಯ್ದೆಗಳನ್ನು ಅಂಗೀಕರಿಸಿದ್ದು ಇದರ ಹೆಗ್ಗಳಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಮದ್ರಾಸ್ ವಿಧಾನ ಪರಿಷತ್ನ (ಎಂಎಲ್ಸಿ) ಶತಮಾನೋತ್ಸವ ಕಾರ್ಯಕ್ರಮ ಸೋಮವಾರ (ಆಗಸ್ಟ್ 2) ಇಲ್ಲಿನ ವಿಧಾನಸಭೆಯಲ್ಲಿ ನಡೆಯಲಿದೆ.</p>.<p>ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಇದೇ ವೇಳೆ ಅವರು ಡಿಎಂಕೆ ವರಿಷ್ಠ ಹಾಗೂ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ.ಕರುಣಾನಿಧಿಯವರ ಭಾವಚಿತ್ರವನ್ನು ವಿಧಾನಸಭೆಯ ಸಭಾಭವನದಲ್ಲಿ ಅನಾವರಣಗೊಳಿಸುವರು.</p>.<p>1921ರ ಜನವರಿ 12ರಂದು ಮದ್ರಾಸ್ ವಿಧಾನಪರಿಷತ್ ಅಸ್ತಿತ್ವಕ್ಕೆ ಬಂತು. ಬ್ರಿಟಿಷ್ ಆಳ್ವಿಕೆಯ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಜಸ್ಟಿಸ್ ಪಾರ್ಟಿ ಆಗ ಮೊದಲ ಸರ್ಕಾರ ರಚಿಸಿತ್ತು. ಇದೇ ನಂತರದ ದಿನಗಳಲ್ಲಿ ಡಿಎಂಕೆ ಪಕ್ಷವಾಯಿತು.</p>.<p>ಕೆಲ ವರ್ಷಗಳ ನಂತರ ಆಗಿನ ಮದ್ರಾಸ್ ರಾಜ್ಯದ ವಿಧಾನಸಭೆ ಎಂದು ಕರೆಯಲಾದ ಮದ್ರಾಸ್ ವಿಧಾನ ಪರಿಷತ್, ಭಾಷಾವಾರು ಪ್ರಾಂತ್ಯಗಳ ರಚನೆ ನಂತರ ತಮಿಳುನಾಡು ವಿಧಾನಸಭೆಯಾಯಿತು.</p>.<p>ಕೋವಿಂದ್ ಅವರು ಮಂಗಳವಾರ ನೀಲಗಿರಿಗೆ ತೆರಳಿ, ನಾಲ್ಕು ದಿನಗಳ ಕಾಲ ಅಲ್ಲಿಯೇ ತಂಗುವರು. ಈ ಅವಧಿಯಲ್ಲಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು ಎಂದು ಮೂಲಗಳು ತಿಳಿಸಿವೆ.</p>.<p>ಐತಿಹಾಸಿಕ ಮಹತ್ವ: ಮದ್ರಾಸ್ ವಿಧಾನ ಪರಿಷತ್ನಲ್ಲಿ ಹಲವು ಮಹತ್ವದ ಶಾಸನಗಳನ್ನು ಅಂಗೀಕರಿಸಲಾಗಿದೆ. ಹಿಂದೂ ಧಾರ್ಮಿಕ ದತ್ತಿ ಕಾಯ್ದೆ (1926), ದೇವದಾಸಿ ಪದ್ಧತಿ ನಿರ್ಮೂಲನೆ ಕಾಯ್ದೆ, ಬಡವರಿಗೆ ನಿವೇಶನಗಳನ್ನು ಉಚಿತವಾಗಿ ಹಂಚಿಕೆ ಮಾಡುವ ಕಾಯ್ದೆಗಳನ್ನು ಅಂಗೀಕರಿಸಿದ್ದು ಇದರ ಹೆಗ್ಗಳಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>