‘ಛತ್ತೀಸಗಢದಲ್ಲಿ 2014 ಮತ್ತು 2018ರಲ್ಲಿ ಡಬಲ್ ಎಂಜಿನ್ (ರಮಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ) ಸರ್ಕಾರವಿತ್ತು. ಈ ಸಮಯದಲ್ಲಿ ನಕ್ಸಲ್ ಸಂಬಂಧಿತ ಘಟನೆಗಳು ಹೆಚ್ಚಾದವು. 2018ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ, ನಂಬಿಕೆ ಮತ್ತು ಭದ್ರತೆಯ ಕಾರ್ಯತಂತ್ರ ಜಾರಿಗೆ ತಂದ ಪರಿಣಾಮ ನಕ್ಸಲರು ಹಿಮ್ಮೆಟ್ಟಿದರು. ಇದರಲ್ಲಿ ಬಿಜೆಪಿಯ ಪಾತ್ರವೇನೂ ಇಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.