<p><strong>ಚೆನ್ನೈ:</strong> ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ–2 ಬಾಹ್ಯಾಕಾಶ ಯೋಜನೆ ಕಾರ್ಯಾರಂಭಕ್ಕೆ ಮುನ್ನ ಕೊನೆ ಕ್ಷಣದ ಸಿದ್ಧತೆಗಳು ಭಾನುವಾರ ಪೂರ್ಣಗೊಂಡವು. ಸೋಮವಾರ ಬೆಳಗಿನ ಜಾವ 2.51ಕ್ಕೆ ನೌಕೆ ಉಡ್ಡಯನ ಸಮಯ ನಿಗದಿಯಾಗಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದತ್ತ ಇಡೀ ಜಗತ್ತಿನ ಚಿತ್ತ ನೆಟ್ಟಿದೆ.</p>.<p>ಉಡ್ಡಯನಕ್ಕೆ ಸಾಕ್ಷಿಯಾಗಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾನುವಾರವೇ ಶ್ರೀಹರಿಕೋಟಾಗೆ ಬಂದಿಳಿದರು.<br />ಕೇಂದ್ರ ಹಾಗೂ ಆಂಧ್ರಪ್ರದೇಶ ಸರ್ಕಾರಗಳ ಭದ್ರತಾ ಪಡೆಗಳು ಬಿಗಿ ಬಂದೋಬಸ್ತ್ ಕಲ್ಪಿಸಿದ್ದು,ಬಾಹ್ಯಾಕಾಶ ಕೇಂದ್ರದಿಂದ 11 ಕಿಲೋಮೀಟರ್ ದೂರದಲ್ಲೇ ಚೆಕ್ಪೋಸ್ಟ್ ನಿರ್ಮಿಸಲಾಗಿದೆ.</p>.<p>ಕಾರ್ಯಾಚರಣೆಯನ್ನು ವೀಕ್ಷಿಸಲು ಉಡ್ಡಯನ ಸ್ಥಳದಿಂದ 8 ಕಿಲೋಮೀಟರ್ ದೂರದಲ್ಲಿಸಾರ್ವಜನಿಕರಿಗಾಗಿ ಗ್ಯಾಲರಿ<br />ನಿರ್ಮಿಸಲಾಗಿದೆ. ‘ಸುರಕ್ಷತೆ ಕಾರಣಕ್ಕೆ ಉಡ್ಡಯನ ಸ್ಥಳದ ಸಮೀಪಕ್ಕೆ ಹೋಗದಂತೆ ನಿರ್ಬಂಧಿಸಲಾಗಿದೆ. ಇಸ್ರೊ ಅಧ್ಯಕ್ಷರೇ 6 ಕಿಲೋಮೀಟರ್ ದೂರದಲ್ಲಿ ಇರಲಿದ್ದಾರೆ’ ಎಂದು ಇಸ್ರೊ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</p>.<p>ರಾಕೆಟ್ ಹಾಗೂ ಉಪಕರಣಗಳ ಪರಿಶೀಲನೆ ನಿಗದಿತ ಸಮಯದಲ್ಲಿಯೇ ಮುಕ್ತಾಯವಾಗಿದೆ. </p>.<p>ದೂರದ ಸ್ಥಳವನ್ನು ಕರಾರುವಕ್ಕಾಗಿ ತಲುಪುವುದು, ಚಂದ್ರನ ಕಕ್ಷೆಗೆ ನಿಗದಿತ ಸಮಯದಲ್ಲಿ ಸೇರುವುದು, ದೂಳಿನಿಂದಾಗಬಹುದಾದ ಹಾನಿ ತಡೆಗಟ್ಟುವುದು, ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ನೌಕೆ ಇಳಿಸುವುದು– ಇವು ಚಂದ್ರಯಾನದ ಅಪಾಯಕಾರಿ ಸವಾಲುಗಳು. ಇವೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದರೆ, ಭಾರತವು ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ದೇಶ ಎನಿಸಿಕೊಳ್ಳಲಿದೆ.</p>.<p><strong>ದೂಳಿನ ಆತಂಕ</strong></p>.<p>ಚಂದ್ರನ ಅಂಗಳವು ಕುಳಿ, ಬಂಡೆಗಲ್ಲು ಹಾಗೂ ದೂಳಿನಿಂದ ಕೂಡಿದೆ. ಉಪಕರಣಗಳು ಚಂದ್ರನ ಮೇಲ್ಮೈ ಸಮೀಪಿಸಿದಾಗ ದೂಳಿನಿಂದ ಕೂಡಿದ ಬಿಸಿ ಅನಿಲಗಳ ಪ್ರಭಾವ ಎದುರಿಸಬೇಕಿದೆ.</p>.<p>ದೂಳಿನ ಕಣಗಳು ಗಾತ್ರದಲ್ಲಿಚಿಕ್ಕವಿದ್ದರೂ ಗಟ್ಟಿಯಾಗಿವೆ. ಹೀಗಾಗಿ ಯೋಜನೆಯ ನಿಯೋಜಿತ ಕಾರ್ಯವಿಧಾನಗಳು, ಸೌರಫಲಕಗಳ ಕೆಲಸ ಮತ್ತು ಲ್ಯಾಂಡರ್–ರೋವರ್ಗಳ ಸಂವೇದಿ ಕೆಲಸಗಳಿಗೆ ತೊಂದರೆಯಾಗುವ ಆತಂಕ ಇದೆ.</p>.<p>ಚಂದ್ರನ ಮೇಲ್ಮೈನಲ್ಲಿ ತಾಪಮಾನದ ಏರಿಳಿತವಿದೆ. ಜೊತೆಗೆ ನಿರ್ವಾತದ ಒತ್ತಡವೂ ಇದೆ. ಇದು ಲ್ಯಾಂಡರ್ ಮತ್ತು ರೋವರ್ ಕಾರ್ಯಾಚರಣೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನುತ್ತಾರೆ ಇಸ್ರೊ ಅಧಿಕಾರಿ. ಹೀಗಾಗಿ ಚಂದ್ರಯಾನ ಬಹಳ ಸವಾಲಿನಿಂದ ಕೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ–2 ಬಾಹ್ಯಾಕಾಶ ಯೋಜನೆ ಕಾರ್ಯಾರಂಭಕ್ಕೆ ಮುನ್ನ ಕೊನೆ ಕ್ಷಣದ ಸಿದ್ಧತೆಗಳು ಭಾನುವಾರ ಪೂರ್ಣಗೊಂಡವು. ಸೋಮವಾರ ಬೆಳಗಿನ ಜಾವ 2.51ಕ್ಕೆ ನೌಕೆ ಉಡ್ಡಯನ ಸಮಯ ನಿಗದಿಯಾಗಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದತ್ತ ಇಡೀ ಜಗತ್ತಿನ ಚಿತ್ತ ನೆಟ್ಟಿದೆ.</p>.<p>ಉಡ್ಡಯನಕ್ಕೆ ಸಾಕ್ಷಿಯಾಗಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾನುವಾರವೇ ಶ್ರೀಹರಿಕೋಟಾಗೆ ಬಂದಿಳಿದರು.<br />ಕೇಂದ್ರ ಹಾಗೂ ಆಂಧ್ರಪ್ರದೇಶ ಸರ್ಕಾರಗಳ ಭದ್ರತಾ ಪಡೆಗಳು ಬಿಗಿ ಬಂದೋಬಸ್ತ್ ಕಲ್ಪಿಸಿದ್ದು,ಬಾಹ್ಯಾಕಾಶ ಕೇಂದ್ರದಿಂದ 11 ಕಿಲೋಮೀಟರ್ ದೂರದಲ್ಲೇ ಚೆಕ್ಪೋಸ್ಟ್ ನಿರ್ಮಿಸಲಾಗಿದೆ.</p>.<p>ಕಾರ್ಯಾಚರಣೆಯನ್ನು ವೀಕ್ಷಿಸಲು ಉಡ್ಡಯನ ಸ್ಥಳದಿಂದ 8 ಕಿಲೋಮೀಟರ್ ದೂರದಲ್ಲಿಸಾರ್ವಜನಿಕರಿಗಾಗಿ ಗ್ಯಾಲರಿ<br />ನಿರ್ಮಿಸಲಾಗಿದೆ. ‘ಸುರಕ್ಷತೆ ಕಾರಣಕ್ಕೆ ಉಡ್ಡಯನ ಸ್ಥಳದ ಸಮೀಪಕ್ಕೆ ಹೋಗದಂತೆ ನಿರ್ಬಂಧಿಸಲಾಗಿದೆ. ಇಸ್ರೊ ಅಧ್ಯಕ್ಷರೇ 6 ಕಿಲೋಮೀಟರ್ ದೂರದಲ್ಲಿ ಇರಲಿದ್ದಾರೆ’ ಎಂದು ಇಸ್ರೊ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</p>.<p>ರಾಕೆಟ್ ಹಾಗೂ ಉಪಕರಣಗಳ ಪರಿಶೀಲನೆ ನಿಗದಿತ ಸಮಯದಲ್ಲಿಯೇ ಮುಕ್ತಾಯವಾಗಿದೆ. </p>.<p>ದೂರದ ಸ್ಥಳವನ್ನು ಕರಾರುವಕ್ಕಾಗಿ ತಲುಪುವುದು, ಚಂದ್ರನ ಕಕ್ಷೆಗೆ ನಿಗದಿತ ಸಮಯದಲ್ಲಿ ಸೇರುವುದು, ದೂಳಿನಿಂದಾಗಬಹುದಾದ ಹಾನಿ ತಡೆಗಟ್ಟುವುದು, ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ನೌಕೆ ಇಳಿಸುವುದು– ಇವು ಚಂದ್ರಯಾನದ ಅಪಾಯಕಾರಿ ಸವಾಲುಗಳು. ಇವೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದರೆ, ಭಾರತವು ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ದೇಶ ಎನಿಸಿಕೊಳ್ಳಲಿದೆ.</p>.<p><strong>ದೂಳಿನ ಆತಂಕ</strong></p>.<p>ಚಂದ್ರನ ಅಂಗಳವು ಕುಳಿ, ಬಂಡೆಗಲ್ಲು ಹಾಗೂ ದೂಳಿನಿಂದ ಕೂಡಿದೆ. ಉಪಕರಣಗಳು ಚಂದ್ರನ ಮೇಲ್ಮೈ ಸಮೀಪಿಸಿದಾಗ ದೂಳಿನಿಂದ ಕೂಡಿದ ಬಿಸಿ ಅನಿಲಗಳ ಪ್ರಭಾವ ಎದುರಿಸಬೇಕಿದೆ.</p>.<p>ದೂಳಿನ ಕಣಗಳು ಗಾತ್ರದಲ್ಲಿಚಿಕ್ಕವಿದ್ದರೂ ಗಟ್ಟಿಯಾಗಿವೆ. ಹೀಗಾಗಿ ಯೋಜನೆಯ ನಿಯೋಜಿತ ಕಾರ್ಯವಿಧಾನಗಳು, ಸೌರಫಲಕಗಳ ಕೆಲಸ ಮತ್ತು ಲ್ಯಾಂಡರ್–ರೋವರ್ಗಳ ಸಂವೇದಿ ಕೆಲಸಗಳಿಗೆ ತೊಂದರೆಯಾಗುವ ಆತಂಕ ಇದೆ.</p>.<p>ಚಂದ್ರನ ಮೇಲ್ಮೈನಲ್ಲಿ ತಾಪಮಾನದ ಏರಿಳಿತವಿದೆ. ಜೊತೆಗೆ ನಿರ್ವಾತದ ಒತ್ತಡವೂ ಇದೆ. ಇದು ಲ್ಯಾಂಡರ್ ಮತ್ತು ರೋವರ್ ಕಾರ್ಯಾಚರಣೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನುತ್ತಾರೆ ಇಸ್ರೊ ಅಧಿಕಾರಿ. ಹೀಗಾಗಿ ಚಂದ್ರಯಾನ ಬಹಳ ಸವಾಲಿನಿಂದ ಕೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>