<p><strong>ಬಿಜಾಪುರ:</strong> ನಕ್ಸಲರು ಅಪಹರಿಸಿರುವ ಯೋಧ ರಾಕೇಶ್ವರ ಸಿಂಗ್ ಮನ್ಹಾಸ್ ಅವರ ಭಾವಚಿತ್ರವನ್ನು ಬುಧವಾರ ಬಿಡುಗಡೆ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.</p>.<p>ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಕೋಬ್ರಾ ಕಮಾಂಡೊ ಪಡೆಗೆ ಸೇರಿರುವ ರಾಕೇಶ್ವರ್ ಸಿಂಗ್ ಅವರನ್ನು ಏಪ್ರಿಲ್ 3ರಂದು ಛತ್ತೀಸಗಡದ ಬಸ್ತಾರ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿ ಸಂದರ್ಭದಲ್ಲಿ ಅಪಹರಿಸಲಾಗಿತ್ತು. ಈ ಗುಂಡಿನ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದರು.</p>.<p>ಗುಡಿಸಲಲ್ಲಿ ಮನ್ಹಾಸ್ ಕುಳಿತಿರುವ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಮನ್ಹಾಸ್ ಮಾತ್ರ ಇದ್ದು, ನಕ್ಸಲರು ಯಾರೂ ಕಾಣಿಸಿಕೊಂಡಿಲ್ಲ.</p>.<p>‘ಪರಿಸ್ಥಿತಿಯ ಬಗ್ಗೆ ನಿಗಾವಹಿಸಲಾಗಿದೆ. ಯೋಧ ಮನ್ಹಾಸ್ ಸುರಕ್ಷಿತವಾಗಿ ಹಿಂತಿರುಗುವಂತೆ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ’ ಎಂದು ಬಸ್ತಾರ್ ವಲಯದ ಐಜಿಪಿ ಸುಂದರ್ರಾಜ್ ತಿಳಿಸಿದ್ದಾರೆ.</p>.<p>‘ಸಂಘಟನೆಯ ಕಾರ್ಯಕರ್ತರು ಮನ್ಹಾಸ್ ಅವರನ್ನು ದಾಳಿ ನಡೆಸಿದ ಸ್ಥಳದಿಂದ ಅಪಹರಿಸಿದ್ದಾರೆ. ಸುರಕ್ಷಿತವಾಗಿ ಅವರನ್ನು ಬಿಡುಗಡೆ ಮಾಡಲು ಛತ್ತೀಸಗಡ ಸರ್ಕಾರ ಸಂಧಾನಕಾರರನ್ನು ನೇಮಿಸಬೇಕು’ ಎಂದುನಿಷೇಧಿತ ಸಿಪಿಐ (ಮಾವೋವಾದಿ) ಮಂಗಳವಾರ ಹಿಂದಿಯಲ್ಲಿ ಹೇಳಿಕೆ ಬಿಡುಗಡೆ ಮಾಡಿತ್ತು.</p>.<p>ದಂಡಕಾರಣ್ಯ ವಿಶೇಷ ವಲಯ ಸಮಿತಿ (ಡಿಕೆಎಸ್ಝಸಿ) ವಕ್ತಾರ ವಿಕಲ್ಪ ಹೆಸರಿನಲ್ಲಿ ಈ ಹೇಳಿಕೆ ಬಿಡುಗಡೆ ಮಾಡಲಾಗಿತ್ತು.</p>.<p>‘ಸರ್ಕಾರ ಸಂಧಾನಕಾರರನ್ನು ನೇಮಿಸಿದ ಬಳಿಕ ಮನ್ಹಾಸ್ ಅವರನ್ನು ಬಿಡುಗಡೆ ಮಾಡಲಾಗುವುದು. ಅಲ್ಲಿಯವರೆಗೂ ಮನ್ಹಾಸ್ ಸುರಕ್ಷಿತವಾಗಿರುತ್ತಾರೆ’ ಎಂದು ಹೇಳಿಕೆಯಲ್ಲಿ ತಿಳಿಸಿಲಾಗಿದೆ.</p>.<p>ಮನ್ಹಾಸ್ ಪತ್ತೆ ಮಾಡಲು ಪೊಲೀಸರು ಹಲವೆಡೆ ಶೋಧ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹಲವು ಸ್ಥಳೀಯರ ವಿಚಾರಣೆ ನಡೆಸಲಾಗಿದೆ.</p>.<p><strong>ಜಮ್ಮು ವರದಿ:</strong> ಯೋಧ ಮನ್ಹಾಸ್ ಅವರ ಸಂಬಂಧಿಕರು ಬುಧವಾರ ಜಮ್ಮು–ಪೂಂಚ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.</p>.<p>ಮನ್ಹಾಸ್ ಅವರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ ಸರ್ಕಾರ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.</p>.<p>‘ಮನ್ಹಾಸ್ ಸುರಕ್ಷತೆಯ ಬಗ್ಗೆ ಆತಂಕವಾಗಿದೆ. ಸರ್ಕಾರ ಸಂಧಾನಕಾರರನ್ನು ಕಳುಹಿಸಿ ವಾಪಸ್ ಕರೆತರಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಮನ್ಹಾಸ್ ಅವರ ಪತ್ನಿ ಮೀನು ಒತ್ತಾಯಿಸಿದ್ದಾರೆ.</p>.<p>ಜಮ್ಮುದಲ್ಲೂ ಸಹ ಮನ್ಹಾಸ್ ಅವರ ಸಂಬಂಧಿಕರು ಮತ್ತು ಆಪ್ತರು, ಸ್ನೇಹಿತರು ಬೀದಿಗಳನ್ನು ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದರು. ‘ನಮ್ಮ ಹೀರೊನನ್ನು ಕರೆತರಬೇಕು. ದ್ರೋಹಿಗಳನ್ನು ಗುಂಡಿಕ್ಕಿ’ ಎಂದು ಘೋಷಣೆಗಳನ್ನು ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಜಾಪುರ:</strong> ನಕ್ಸಲರು ಅಪಹರಿಸಿರುವ ಯೋಧ ರಾಕೇಶ್ವರ ಸಿಂಗ್ ಮನ್ಹಾಸ್ ಅವರ ಭಾವಚಿತ್ರವನ್ನು ಬುಧವಾರ ಬಿಡುಗಡೆ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.</p>.<p>ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಕೋಬ್ರಾ ಕಮಾಂಡೊ ಪಡೆಗೆ ಸೇರಿರುವ ರಾಕೇಶ್ವರ್ ಸಿಂಗ್ ಅವರನ್ನು ಏಪ್ರಿಲ್ 3ರಂದು ಛತ್ತೀಸಗಡದ ಬಸ್ತಾರ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿ ಸಂದರ್ಭದಲ್ಲಿ ಅಪಹರಿಸಲಾಗಿತ್ತು. ಈ ಗುಂಡಿನ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದರು.</p>.<p>ಗುಡಿಸಲಲ್ಲಿ ಮನ್ಹಾಸ್ ಕುಳಿತಿರುವ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಮನ್ಹಾಸ್ ಮಾತ್ರ ಇದ್ದು, ನಕ್ಸಲರು ಯಾರೂ ಕಾಣಿಸಿಕೊಂಡಿಲ್ಲ.</p>.<p>‘ಪರಿಸ್ಥಿತಿಯ ಬಗ್ಗೆ ನಿಗಾವಹಿಸಲಾಗಿದೆ. ಯೋಧ ಮನ್ಹಾಸ್ ಸುರಕ್ಷಿತವಾಗಿ ಹಿಂತಿರುಗುವಂತೆ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ’ ಎಂದು ಬಸ್ತಾರ್ ವಲಯದ ಐಜಿಪಿ ಸುಂದರ್ರಾಜ್ ತಿಳಿಸಿದ್ದಾರೆ.</p>.<p>‘ಸಂಘಟನೆಯ ಕಾರ್ಯಕರ್ತರು ಮನ್ಹಾಸ್ ಅವರನ್ನು ದಾಳಿ ನಡೆಸಿದ ಸ್ಥಳದಿಂದ ಅಪಹರಿಸಿದ್ದಾರೆ. ಸುರಕ್ಷಿತವಾಗಿ ಅವರನ್ನು ಬಿಡುಗಡೆ ಮಾಡಲು ಛತ್ತೀಸಗಡ ಸರ್ಕಾರ ಸಂಧಾನಕಾರರನ್ನು ನೇಮಿಸಬೇಕು’ ಎಂದುನಿಷೇಧಿತ ಸಿಪಿಐ (ಮಾವೋವಾದಿ) ಮಂಗಳವಾರ ಹಿಂದಿಯಲ್ಲಿ ಹೇಳಿಕೆ ಬಿಡುಗಡೆ ಮಾಡಿತ್ತು.</p>.<p>ದಂಡಕಾರಣ್ಯ ವಿಶೇಷ ವಲಯ ಸಮಿತಿ (ಡಿಕೆಎಸ್ಝಸಿ) ವಕ್ತಾರ ವಿಕಲ್ಪ ಹೆಸರಿನಲ್ಲಿ ಈ ಹೇಳಿಕೆ ಬಿಡುಗಡೆ ಮಾಡಲಾಗಿತ್ತು.</p>.<p>‘ಸರ್ಕಾರ ಸಂಧಾನಕಾರರನ್ನು ನೇಮಿಸಿದ ಬಳಿಕ ಮನ್ಹಾಸ್ ಅವರನ್ನು ಬಿಡುಗಡೆ ಮಾಡಲಾಗುವುದು. ಅಲ್ಲಿಯವರೆಗೂ ಮನ್ಹಾಸ್ ಸುರಕ್ಷಿತವಾಗಿರುತ್ತಾರೆ’ ಎಂದು ಹೇಳಿಕೆಯಲ್ಲಿ ತಿಳಿಸಿಲಾಗಿದೆ.</p>.<p>ಮನ್ಹಾಸ್ ಪತ್ತೆ ಮಾಡಲು ಪೊಲೀಸರು ಹಲವೆಡೆ ಶೋಧ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹಲವು ಸ್ಥಳೀಯರ ವಿಚಾರಣೆ ನಡೆಸಲಾಗಿದೆ.</p>.<p><strong>ಜಮ್ಮು ವರದಿ:</strong> ಯೋಧ ಮನ್ಹಾಸ್ ಅವರ ಸಂಬಂಧಿಕರು ಬುಧವಾರ ಜಮ್ಮು–ಪೂಂಚ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.</p>.<p>ಮನ್ಹಾಸ್ ಅವರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ ಸರ್ಕಾರ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.</p>.<p>‘ಮನ್ಹಾಸ್ ಸುರಕ್ಷತೆಯ ಬಗ್ಗೆ ಆತಂಕವಾಗಿದೆ. ಸರ್ಕಾರ ಸಂಧಾನಕಾರರನ್ನು ಕಳುಹಿಸಿ ವಾಪಸ್ ಕರೆತರಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಮನ್ಹಾಸ್ ಅವರ ಪತ್ನಿ ಮೀನು ಒತ್ತಾಯಿಸಿದ್ದಾರೆ.</p>.<p>ಜಮ್ಮುದಲ್ಲೂ ಸಹ ಮನ್ಹಾಸ್ ಅವರ ಸಂಬಂಧಿಕರು ಮತ್ತು ಆಪ್ತರು, ಸ್ನೇಹಿತರು ಬೀದಿಗಳನ್ನು ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದರು. ‘ನಮ್ಮ ಹೀರೊನನ್ನು ಕರೆತರಬೇಕು. ದ್ರೋಹಿಗಳನ್ನು ಗುಂಡಿಕ್ಕಿ’ ಎಂದು ಘೋಷಣೆಗಳನ್ನು ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>