<p><strong>ನವದೆಹಲಿ:</strong> ‘ದೇಶದಲ್ಲಿಯೇ ಭಯೋತ್ಪಾದಕರು ತಯಾರಾಗುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಹಂಚಿಕೊಂಡ ಪೋಸ್ಟ್ಗೆ ಬಿಜೆಪಿ ನಾಯಕರು ಗುರುವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ಚಿದಂಬರಂ ಅವರು ಭಯೋತ್ಪಾದಕರ ಪರವಾಗಿ ಮಾತನಾಡುತ್ತಿದ್ದಾರೆ’ ಎಂದೂ ದೂರಿದ್ದಾರೆ.</p>.<p>ಚಿದಂಬರಂ ಅವರು ದೆಹಲಿ ಸ್ಫೋಟದ ಕುರಿತು ತಮ್ಮ ಪೋಸ್ಟ್ನಲ್ಲಿ ಪ್ರಸ್ತಾಪಿಸಿರಲಿಲ್ಲ. ಆದರೆ, ‘ಯಾವ ಕಾರಣಕ್ಕಾಗಿ ಭಾರತೀಯರು ಭಯೋತ್ಪಾದಕರಾಗುತ್ತಿದ್ದಾರೆ. ಭಯೋತ್ಪಾದಕರು ಯಾರು ಎಂದು ಭಾರತ ಸರ್ಕಾರಕ್ಕೆ ತಿಳಿದಿರುವುದರಿಂದಲೇ, ಸರ್ಕಾರವು ದಿವ್ಯ ಮೌನವಹಿಸಿದೆ’ ಎಂದು ಬುಧವಾರ ಪೋಸ್ಟ್ ಹಂಚಿಕೊಂಡಿದ್ದರು.</p>.<p>‘ಅವರು ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದಾರೆ. ಛೀ..ಛೀ.. ನೀವು (ಚಿದಂಬರಂ) ಎಲ್ಲ ಮಿತಿಗಳನ್ನೂ ಮೀರಿದ್ದೀರಿ. ಮನಮೋಹನ್ ಸಿಂಗ್ ಅವರ ನಾಟಕವನ್ನೂ ಮೀರಿಸಿದಿರಿ. ನೀವೇ ಯಾಸಿನ್ ಮಲ್ಲಿಕ್ ಅವರನ್ನು ಮನಮೋಹನ್ ಸಿಂಗ್ ಅವರ ಜೊತೆ ಕುಳ್ಳಿರಿಸಿದ್ದು’ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದರು.</p>.<p>‘ನೆಹರೂ ಅವರಿಂದ ಮನಮೋಹನ್ ಸಿಂಗ್ ಅವರವರೆಗೂ ನಿಮ್ಮ ಕೊಡುಗೆಯನ್ನು ನೀವು ನೆನಪಿಸಿಕೊಳ್ಳಬೇಕು. ನಿಮ್ಮ ಪಕ್ಷದ ಓಲೈಕೆ ರಾಜಕಾರಣವೇ ಇದಕ್ಕೆಲ್ಲ ಕಾರಣ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ದೇಶದಲ್ಲಿಯೇ ಭಯೋತ್ಪಾದಕರು ತಯಾರಾಗುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಹಂಚಿಕೊಂಡ ಪೋಸ್ಟ್ಗೆ ಬಿಜೆಪಿ ನಾಯಕರು ಗುರುವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ಚಿದಂಬರಂ ಅವರು ಭಯೋತ್ಪಾದಕರ ಪರವಾಗಿ ಮಾತನಾಡುತ್ತಿದ್ದಾರೆ’ ಎಂದೂ ದೂರಿದ್ದಾರೆ.</p>.<p>ಚಿದಂಬರಂ ಅವರು ದೆಹಲಿ ಸ್ಫೋಟದ ಕುರಿತು ತಮ್ಮ ಪೋಸ್ಟ್ನಲ್ಲಿ ಪ್ರಸ್ತಾಪಿಸಿರಲಿಲ್ಲ. ಆದರೆ, ‘ಯಾವ ಕಾರಣಕ್ಕಾಗಿ ಭಾರತೀಯರು ಭಯೋತ್ಪಾದಕರಾಗುತ್ತಿದ್ದಾರೆ. ಭಯೋತ್ಪಾದಕರು ಯಾರು ಎಂದು ಭಾರತ ಸರ್ಕಾರಕ್ಕೆ ತಿಳಿದಿರುವುದರಿಂದಲೇ, ಸರ್ಕಾರವು ದಿವ್ಯ ಮೌನವಹಿಸಿದೆ’ ಎಂದು ಬುಧವಾರ ಪೋಸ್ಟ್ ಹಂಚಿಕೊಂಡಿದ್ದರು.</p>.<p>‘ಅವರು ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದಾರೆ. ಛೀ..ಛೀ.. ನೀವು (ಚಿದಂಬರಂ) ಎಲ್ಲ ಮಿತಿಗಳನ್ನೂ ಮೀರಿದ್ದೀರಿ. ಮನಮೋಹನ್ ಸಿಂಗ್ ಅವರ ನಾಟಕವನ್ನೂ ಮೀರಿಸಿದಿರಿ. ನೀವೇ ಯಾಸಿನ್ ಮಲ್ಲಿಕ್ ಅವರನ್ನು ಮನಮೋಹನ್ ಸಿಂಗ್ ಅವರ ಜೊತೆ ಕುಳ್ಳಿರಿಸಿದ್ದು’ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದರು.</p>.<p>‘ನೆಹರೂ ಅವರಿಂದ ಮನಮೋಹನ್ ಸಿಂಗ್ ಅವರವರೆಗೂ ನಿಮ್ಮ ಕೊಡುಗೆಯನ್ನು ನೀವು ನೆನಪಿಸಿಕೊಳ್ಳಬೇಕು. ನಿಮ್ಮ ಪಕ್ಷದ ಓಲೈಕೆ ರಾಜಕಾರಣವೇ ಇದಕ್ಕೆಲ್ಲ ಕಾರಣ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>