<p><strong>ತಿರುವನಂತಪುರ: </strong>ಕೇರಳದ ತ್ರಿಶ್ಯೂರ್ ಜಿಲ್ಲೆಯ ತಳಿಕುಳಂನ ದೇವಾಂಗ್ ಸುಬಿನ್ ಈಗ ರಾಜ್ಯದ ಜನರ ದೃಷ್ಟಿಯಲ್ಲಿ ಹೀರೊ ಆಗಿದ್ದಾರೆ!</p>.<p>ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರನ್ನು ಡ್ರೋನ್ ನೆರವಿನಿಂದ ಪತ್ತೆ ಹಚ್ಚಿ, ಅವರನ್ನು ರಕ್ಷಿಸಲು ಸಹಾಯ ಮಾಡಿದ್ದಕ್ಕಾಗಿ ದೇವಾಂಗ್ ಅವರು ಈ ಅಭಿನಂದನೆ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ.</p>.<p>ಅವರು ಬೆಂಗಳೂರಿನ ಕೆಂಗೇರಿಯಲ್ಲಿರುವ ಕ್ರೈಸ್ಟ್ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಕಂಪ್ಯೂಟರ್ ವಿಜ್ಞಾನ ಪದವಿ ಕೋರ್ಸ್ನ ಎರಡನೇ ವರ್ಷದ ವಿದ್ಯಾರ್ಥಿ.</p>.<p>ಛಾಯಾಗ್ರಹಣ ಅವರ ನೆಚ್ಚಿನ ಹವ್ಯಾಸ. ಡ್ರೋನ್ ಬಳಸಿ ಚಿತ್ರಗಳನ್ನು ಸೆರೆ ಹಿಡಿಯುವುದೆಂದರೆ ಅವರಿಗೆ ಅಚ್ಚುಮೆಚ್ಚು. ಸಮುದ್ರ ತೀರಕ್ಕೆ ಸನಿಹದ ತಮ್ಮ ಊರು ತಳಿಕುಳಂನ ಮನೆಯಿಂದಲೇ ಡ್ರೋನ್ ಕ್ಯಾಮೆರಾ ಬಳಸಿ ಪ್ರಕೃತಿಯ ಚಿತ್ರ ಹಿಡಿಯುತ್ತಾರೆ.</p>.<p>ನಾಲ್ಕು ಜನ ಮೀನುಗಾರರು ಆಳಸಮುದ್ರದಲ್ಲಿ ಮೀನು ಹಿಡಿಯಲು ಹೋದಾಗ ನಾಪತ್ತೆಯಾದ ಬಗ್ಗೆ ತಂದೆ ಸುಬಿನ್ ಅವರು ದೇವಾಂಗ್ಗೆಮಂಗಳವಾರ ಬೆಳಿಗ್ಗೆ ತಿಳಿಸಿದರು. ಪ್ರತಿಕೂಲ ಹವಾಮಾನ ಕಾರಣದಿಂದಾಗಿಯೇ ದೋಣಿ ಮುಗುಚಿ ಈ ಅವಘಡ ಸಂಭವಿಸಿರುವುದಾಗಿ ವಿವರಿಸಿದರು.</p>.<p>ತಕ್ಷಣ, ಡ್ರೋನ್ ಕ್ಯಾಮೆರಾ ಸಮೇತ ಕಡಲ ತೀರಕ್ಕೆ ತೆರಳಿದ ದೇವಾಂಗ್, ನಾಪತ್ತೆಯಾಗಿದ್ದ ಮೀನುಗಾರರನ್ನು ಪತ್ತೆ ಮಾಡುವ ಕಾರ್ಯ ಆರಂಭಿಸಿದರು.</p>.<p>‘ಪ್ರತಿಕೂಲ ಹವಾಮಾನ, ಜೋರಾಗಿ ಗಾಳಿ ಬೀಸುತ್ತಿದ್ದ ಕಾರಣ ಡ್ರೋನ್ ನಿಯಂತ್ರಣ ಸಹ ಕಷ್ಟವಾಗಿತ್ತು. 10 ನಾಟಿಕಲ್ ಮೈಲಿಗಿಂತ ಹೆಚ್ಚು ದೂರ ಕ್ರಮಿಸಿದ ನಂತರ ಡ್ರೋನ್ ಕ್ಯಾಮೆರಾ ಮೀನುಗಾರರನ್ನು ಪತ್ತೆ ಹಚ್ಚಿತು’ ಎಂದು ದೇವಾಂಗ್ ‘ಪ್ರಜಾವಾಣಿ’ಗೆ ವಿವರಿಸಿದರು.</p>.<p>ರಾಜ್ಯ ಕೃಷಿ ಸಚಿವ ವಿ.ಎಸ್.ಸುನೀಲ್ಕುಮಾರ್ ಅವರು ದೇವಾಂಗ್ ಮಾಡಿದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಮೀನುಗಾರರು ಹಾಗೂ ಗ್ರಾಮಸ್ಥರಲ್ಲದೇ, ಇಡೀ ರಾಜ್ಯದ ಜನರೇ ಈಗ ದೇವಾಂಗ್ ಅವರನ್ನು ಕೊಂಡಾಡುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ: </strong>ಕೇರಳದ ತ್ರಿಶ್ಯೂರ್ ಜಿಲ್ಲೆಯ ತಳಿಕುಳಂನ ದೇವಾಂಗ್ ಸುಬಿನ್ ಈಗ ರಾಜ್ಯದ ಜನರ ದೃಷ್ಟಿಯಲ್ಲಿ ಹೀರೊ ಆಗಿದ್ದಾರೆ!</p>.<p>ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರನ್ನು ಡ್ರೋನ್ ನೆರವಿನಿಂದ ಪತ್ತೆ ಹಚ್ಚಿ, ಅವರನ್ನು ರಕ್ಷಿಸಲು ಸಹಾಯ ಮಾಡಿದ್ದಕ್ಕಾಗಿ ದೇವಾಂಗ್ ಅವರು ಈ ಅಭಿನಂದನೆ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ.</p>.<p>ಅವರು ಬೆಂಗಳೂರಿನ ಕೆಂಗೇರಿಯಲ್ಲಿರುವ ಕ್ರೈಸ್ಟ್ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಕಂಪ್ಯೂಟರ್ ವಿಜ್ಞಾನ ಪದವಿ ಕೋರ್ಸ್ನ ಎರಡನೇ ವರ್ಷದ ವಿದ್ಯಾರ್ಥಿ.</p>.<p>ಛಾಯಾಗ್ರಹಣ ಅವರ ನೆಚ್ಚಿನ ಹವ್ಯಾಸ. ಡ್ರೋನ್ ಬಳಸಿ ಚಿತ್ರಗಳನ್ನು ಸೆರೆ ಹಿಡಿಯುವುದೆಂದರೆ ಅವರಿಗೆ ಅಚ್ಚುಮೆಚ್ಚು. ಸಮುದ್ರ ತೀರಕ್ಕೆ ಸನಿಹದ ತಮ್ಮ ಊರು ತಳಿಕುಳಂನ ಮನೆಯಿಂದಲೇ ಡ್ರೋನ್ ಕ್ಯಾಮೆರಾ ಬಳಸಿ ಪ್ರಕೃತಿಯ ಚಿತ್ರ ಹಿಡಿಯುತ್ತಾರೆ.</p>.<p>ನಾಲ್ಕು ಜನ ಮೀನುಗಾರರು ಆಳಸಮುದ್ರದಲ್ಲಿ ಮೀನು ಹಿಡಿಯಲು ಹೋದಾಗ ನಾಪತ್ತೆಯಾದ ಬಗ್ಗೆ ತಂದೆ ಸುಬಿನ್ ಅವರು ದೇವಾಂಗ್ಗೆಮಂಗಳವಾರ ಬೆಳಿಗ್ಗೆ ತಿಳಿಸಿದರು. ಪ್ರತಿಕೂಲ ಹವಾಮಾನ ಕಾರಣದಿಂದಾಗಿಯೇ ದೋಣಿ ಮುಗುಚಿ ಈ ಅವಘಡ ಸಂಭವಿಸಿರುವುದಾಗಿ ವಿವರಿಸಿದರು.</p>.<p>ತಕ್ಷಣ, ಡ್ರೋನ್ ಕ್ಯಾಮೆರಾ ಸಮೇತ ಕಡಲ ತೀರಕ್ಕೆ ತೆರಳಿದ ದೇವಾಂಗ್, ನಾಪತ್ತೆಯಾಗಿದ್ದ ಮೀನುಗಾರರನ್ನು ಪತ್ತೆ ಮಾಡುವ ಕಾರ್ಯ ಆರಂಭಿಸಿದರು.</p>.<p>‘ಪ್ರತಿಕೂಲ ಹವಾಮಾನ, ಜೋರಾಗಿ ಗಾಳಿ ಬೀಸುತ್ತಿದ್ದ ಕಾರಣ ಡ್ರೋನ್ ನಿಯಂತ್ರಣ ಸಹ ಕಷ್ಟವಾಗಿತ್ತು. 10 ನಾಟಿಕಲ್ ಮೈಲಿಗಿಂತ ಹೆಚ್ಚು ದೂರ ಕ್ರಮಿಸಿದ ನಂತರ ಡ್ರೋನ್ ಕ್ಯಾಮೆರಾ ಮೀನುಗಾರರನ್ನು ಪತ್ತೆ ಹಚ್ಚಿತು’ ಎಂದು ದೇವಾಂಗ್ ‘ಪ್ರಜಾವಾಣಿ’ಗೆ ವಿವರಿಸಿದರು.</p>.<p>ರಾಜ್ಯ ಕೃಷಿ ಸಚಿವ ವಿ.ಎಸ್.ಸುನೀಲ್ಕುಮಾರ್ ಅವರು ದೇವಾಂಗ್ ಮಾಡಿದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಮೀನುಗಾರರು ಹಾಗೂ ಗ್ರಾಮಸ್ಥರಲ್ಲದೇ, ಇಡೀ ರಾಜ್ಯದ ಜನರೇ ಈಗ ದೇವಾಂಗ್ ಅವರನ್ನು ಕೊಂಡಾಡುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>