<p><strong>ನವದೆಹಲಿ</strong>: ಛತ್ತೀಸ್ಗಢದಲ್ಲಿ ಪಾದ್ರಿಯೊಬ್ಬರು ಮೃತಪಟ್ಟು 11 ದಿನಗಳೇ ಕಳೆದರೂ ಅವರ ಅಂತ್ಯಸಂಸ್ಕಾರ ಸಾಧ್ಯವಾಗಿಲ್ಲ. ಇದರಿಂದ ರೋಸಿಹೋಗಿರುವ ಮೃತ ಪಾದ್ರಿಯ ಮಗ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.</p><p>ಈ ಕುರಿತ ಇಂದು ಅರ್ಜಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್, ಛತ್ತೀಸ್ಗಢ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ ಮತ್ತು ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.</p><p><strong>ಪ್ರಕರಣವೇನು?</strong></p><p>ಬುಡಕಟ್ಟು ಜಿಲ್ಲೆಯಾಗಿರುವ ಜಗದಾಲ್ಪುರ ಜಿಲ್ಲೆಯ ಚಿಂದವಾಡ್ ಎಂಬ ಗ್ರಾಮದಲ್ಲಿ ಜನವರಿ 7 ರಂದು ಪಾದ್ರಿ ದಿಲೀಪ್ ಬಘೇಲ್ ಎನ್ನುವರು ಅನಾರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದರು. ಅಂತ್ಯಸಂಸ್ಕಾರ ನೆರವೇರಿಸಲು ದಿಲೀಪ್ ಅವರ ಮಗ ರಮೇಶ್ ಬಘೇಲ್ ಅವರು ತಂದೆಯ ಶವವನ್ನು ಗ್ರಾಮದ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ, ಗ್ರಾಮಸ್ಥರು ಅವಕಾಶ ಕೊಟ್ಟಿರಲಿಲ್ಲ.</p><p>ಗ್ರಾಮದ ಸ್ಮಶಾನದಲ್ಲಿ ಮೇಲ್ವರ್ಗದ ಹಿಂದೂಗಳಿಗೆ, ದಲಿತರಿಗೆ ಹಾಗೂ ಕ್ರಿಶ್ಚಿಯನ್ರಿಗೆ ಶವ ಸಂಸ್ಕಾರ ನೆರವೇರಿಸಲು ಸರಪಂಚರು ಪ್ರತ್ಯೇಕ ಸ್ಥಳಗಳನ್ನು ನಿಗದಿ ಮಾಡಿದ್ದಾರೆ.</p><p>ಅದಾಗ್ಯೂ ಪಾದ್ರಿಯ ಶವವನ್ನು ಗ್ರಾಮದ ಸ್ಮಶಾನದಲ್ಲಿ ಅಥವಾ ಗ್ರಾಮದ ಯಾವುದೇ ಸರ್ಕಾರಿ, ಸ್ವಂತ ಜಮೀನಿನಲ್ಲಿ ಹೂಳಲು ಅವಕಾಶ ಕೊಡುವುದಿಲ್ಲ ಎಂದು ಸರಪಂಚರು ಆದೇಶ ಮಾಡಿದ್ದರು.</p><p>ಇದರಿಂದ ರೋಸಿಹೋದ ಮಾಹಾರ್ ಜಾತಿಗೆ ಸೇರಿದ್ದ ರಮೇಶ್ ಬಘೇಲ್, ಪೊಲೀಸರಿಗೆ ದೂರು ನೀಡಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಛತ್ತೀಸ್ಗಢ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಜನವರಿ 15ರಂದು ಆದೇಶ ನೀಡಿದ್ದ ಹೈಕೋರ್ಟ್, ಶವಸಂಸ್ಕಾರಕ್ಕೆ ಅನುಮತಿ ನೀಡಿದರೆ ಗ್ರಾಮದಲ್ಲಿ ಗಲಭೆಯ ವಾತಾವರಣಕ್ಕೆ ಕಾರಣವಾಗಬಹುದು ಎಂದು ಅರ್ಜಿಯನ್ನು ವಜಾ ಮಾಡಿತ್ತು.</p><p>ಬಳಿಕ ಗ್ರಾಮದಲ್ಲಿ 30ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ರಮೇಶ್ ಎಷ್ಟೇ ಮನವಿ ಮಾಡಿದರೂ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಿರಲಿಲ್ಲ. ಇದರಿಂದ ಅವರ ತಂದೆಯ ಶವ ಜಗದಾಲ್ಪುರ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿಯೇ ಇದೆ.</p><p>ಬಳಿಕ ರಮೇಶ್ ಬಘೇಲ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇವರ ಅರ್ಜಿ ಆಲಿಸಿರುವ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠ, ಛತ್ತೀಸ್ಗಢ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ‘ಪಂಚಾಯಿತಿ ಆದೇಶವನ್ನು ಬಿಟ್ಟು ಹಾಕಿ, ಹೈಕೋರ್ಟ್ ಸಹ ಈ ಕೇಸ್ನಲ್ಲಿ ವಿಲಕ್ಷಣ ಆದೇಶ ನೀಡಿರುವುದು ನಮಗೆ ಆಶ್ಚರ್ಯ ತರಿಸಿದೆ. ರಾಜ್ಯ ಸರ್ಕಾರ ಏನು ಮಾಡುತ್ತಿದೆ? ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಿ’ ಎಂದು ತಾಕೀತು ಮಾಡಿದೆ.</p><p>ಈ ಪ್ರಕರಣದ ವಿಚಾರಣೆ ಜನವರಿ 20 ರಂದು ಮರು ನಿಗದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಛತ್ತೀಸ್ಗಢದಲ್ಲಿ ಪಾದ್ರಿಯೊಬ್ಬರು ಮೃತಪಟ್ಟು 11 ದಿನಗಳೇ ಕಳೆದರೂ ಅವರ ಅಂತ್ಯಸಂಸ್ಕಾರ ಸಾಧ್ಯವಾಗಿಲ್ಲ. ಇದರಿಂದ ರೋಸಿಹೋಗಿರುವ ಮೃತ ಪಾದ್ರಿಯ ಮಗ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.</p><p>ಈ ಕುರಿತ ಇಂದು ಅರ್ಜಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್, ಛತ್ತೀಸ್ಗಢ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ ಮತ್ತು ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.</p><p><strong>ಪ್ರಕರಣವೇನು?</strong></p><p>ಬುಡಕಟ್ಟು ಜಿಲ್ಲೆಯಾಗಿರುವ ಜಗದಾಲ್ಪುರ ಜಿಲ್ಲೆಯ ಚಿಂದವಾಡ್ ಎಂಬ ಗ್ರಾಮದಲ್ಲಿ ಜನವರಿ 7 ರಂದು ಪಾದ್ರಿ ದಿಲೀಪ್ ಬಘೇಲ್ ಎನ್ನುವರು ಅನಾರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದರು. ಅಂತ್ಯಸಂಸ್ಕಾರ ನೆರವೇರಿಸಲು ದಿಲೀಪ್ ಅವರ ಮಗ ರಮೇಶ್ ಬಘೇಲ್ ಅವರು ತಂದೆಯ ಶವವನ್ನು ಗ್ರಾಮದ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ, ಗ್ರಾಮಸ್ಥರು ಅವಕಾಶ ಕೊಟ್ಟಿರಲಿಲ್ಲ.</p><p>ಗ್ರಾಮದ ಸ್ಮಶಾನದಲ್ಲಿ ಮೇಲ್ವರ್ಗದ ಹಿಂದೂಗಳಿಗೆ, ದಲಿತರಿಗೆ ಹಾಗೂ ಕ್ರಿಶ್ಚಿಯನ್ರಿಗೆ ಶವ ಸಂಸ್ಕಾರ ನೆರವೇರಿಸಲು ಸರಪಂಚರು ಪ್ರತ್ಯೇಕ ಸ್ಥಳಗಳನ್ನು ನಿಗದಿ ಮಾಡಿದ್ದಾರೆ.</p><p>ಅದಾಗ್ಯೂ ಪಾದ್ರಿಯ ಶವವನ್ನು ಗ್ರಾಮದ ಸ್ಮಶಾನದಲ್ಲಿ ಅಥವಾ ಗ್ರಾಮದ ಯಾವುದೇ ಸರ್ಕಾರಿ, ಸ್ವಂತ ಜಮೀನಿನಲ್ಲಿ ಹೂಳಲು ಅವಕಾಶ ಕೊಡುವುದಿಲ್ಲ ಎಂದು ಸರಪಂಚರು ಆದೇಶ ಮಾಡಿದ್ದರು.</p><p>ಇದರಿಂದ ರೋಸಿಹೋದ ಮಾಹಾರ್ ಜಾತಿಗೆ ಸೇರಿದ್ದ ರಮೇಶ್ ಬಘೇಲ್, ಪೊಲೀಸರಿಗೆ ದೂರು ನೀಡಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಛತ್ತೀಸ್ಗಢ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಜನವರಿ 15ರಂದು ಆದೇಶ ನೀಡಿದ್ದ ಹೈಕೋರ್ಟ್, ಶವಸಂಸ್ಕಾರಕ್ಕೆ ಅನುಮತಿ ನೀಡಿದರೆ ಗ್ರಾಮದಲ್ಲಿ ಗಲಭೆಯ ವಾತಾವರಣಕ್ಕೆ ಕಾರಣವಾಗಬಹುದು ಎಂದು ಅರ್ಜಿಯನ್ನು ವಜಾ ಮಾಡಿತ್ತು.</p><p>ಬಳಿಕ ಗ್ರಾಮದಲ್ಲಿ 30ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ರಮೇಶ್ ಎಷ್ಟೇ ಮನವಿ ಮಾಡಿದರೂ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಿರಲಿಲ್ಲ. ಇದರಿಂದ ಅವರ ತಂದೆಯ ಶವ ಜಗದಾಲ್ಪುರ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿಯೇ ಇದೆ.</p><p>ಬಳಿಕ ರಮೇಶ್ ಬಘೇಲ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇವರ ಅರ್ಜಿ ಆಲಿಸಿರುವ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠ, ಛತ್ತೀಸ್ಗಢ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ‘ಪಂಚಾಯಿತಿ ಆದೇಶವನ್ನು ಬಿಟ್ಟು ಹಾಕಿ, ಹೈಕೋರ್ಟ್ ಸಹ ಈ ಕೇಸ್ನಲ್ಲಿ ವಿಲಕ್ಷಣ ಆದೇಶ ನೀಡಿರುವುದು ನಮಗೆ ಆಶ್ಚರ್ಯ ತರಿಸಿದೆ. ರಾಜ್ಯ ಸರ್ಕಾರ ಏನು ಮಾಡುತ್ತಿದೆ? ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಿ’ ಎಂದು ತಾಕೀತು ಮಾಡಿದೆ.</p><p>ಈ ಪ್ರಕರಣದ ವಿಚಾರಣೆ ಜನವರಿ 20 ರಂದು ಮರು ನಿಗದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>