<p><strong>ಗುವಾಹಟಿ :</strong> ‘ಶಿಲಾನ್ಯಾಸ ನಡೆದ ಯೋಜನೆಗಳನ್ನು ಪೂರ್ಣಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಾದರಿಯ ಹೆಗ್ಗುರುತು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.</p>.<p>ಐಐಟಿ ಗುಜರಾತ್ ಗುರುವಾರ ಆಯೋಜಿಸಿದ್ದ ‘ವಿಕಸಿತ ಭಾರತ ರಾಯಭಾರ ಕ್ಯಾಂಪಸ್ ಚರ್ಚೆ’ಯಲ್ಲಿ ಭಾಗವಹಿಸಿದ್ದ ಅವರು, ‘2014ಕ್ಕೆ ಮುನ್ನ ಶಿಲಾನ್ಯಾಸ ನಂತರವು ಹಲವು ಯೋಜನೆಗಳು ಪೂರ್ಣವಾಗುತ್ತಿರಲಿಲ್ಲ’ ಎಂದರು.</p>.<p>‘ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿದ್ದ ವಿಳಂಬವು ದೇಶದ ವರ್ಚಸ್ಸಿನ ಮೇಲೂ ನಕಾರಾತ್ಮಕವಾದ ಪರಿಣಾಮ ಬೀರುತ್ತಿತ್ತು. ಈಗ ಪ್ರಧಾನಿ ಅವರಿಗೆ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸುವುದಷ್ಟೇ ಅಲ್ಲ, ಪೂರ್ಣಗೊಳಿಸುವುದರಲ್ಲಿ ವಿಶ್ವಾಸವಿದೆ. ಈಶಾನ್ಯ ರಾಜ್ಯಗಳಿಗೂ ಈ ಚಿಂತನೆಯಿಂದ ನೆರವಾಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯ ರಾಜ್ಯಗಳಿಗೆ 65 ಬಾರಿ, ಇತರೆ ಕೇಂದ್ರ ಸಚಿವರು 850 ಬಾರಿ ಭೇಟಿ ನೀಡಿದ್ದಾರೆ. ಇದು, ಈ ವಲಯಕ್ಕೆ ಸರ್ಕಾರ ನೀಡಿರುವ ಆದ್ಯತೆಯನ್ನು ಬಿಂಬಿಸಲಿದೆ’ ಎಂದು ತಿಳಿಸಿದರು.</p>.<p>ಈಶಾನ್ಯ ವಲಯವನ್ನು ಅಭಿವೃದ್ಧಿ ಹಾಗೂ ಪ್ರಗತಿಯ ಎಂಜಿನ್ ಆಗಿ ರೂಪಿಸಲು ಕಳೆದ ಒಂದು ದಶಕದಲ್ಲಿ ಬಿಜೆಪಿಯು ಕೈಗೊಂಡಿರುವ ಹಲವು ಕಾರ್ಯಕ್ರಮಗಳನ್ನು ಸಚಿವೆ ಉಲ್ಲೇಖಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುವಾಹಟಿ :</strong> ‘ಶಿಲಾನ್ಯಾಸ ನಡೆದ ಯೋಜನೆಗಳನ್ನು ಪೂರ್ಣಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಾದರಿಯ ಹೆಗ್ಗುರುತು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.</p>.<p>ಐಐಟಿ ಗುಜರಾತ್ ಗುರುವಾರ ಆಯೋಜಿಸಿದ್ದ ‘ವಿಕಸಿತ ಭಾರತ ರಾಯಭಾರ ಕ್ಯಾಂಪಸ್ ಚರ್ಚೆ’ಯಲ್ಲಿ ಭಾಗವಹಿಸಿದ್ದ ಅವರು, ‘2014ಕ್ಕೆ ಮುನ್ನ ಶಿಲಾನ್ಯಾಸ ನಂತರವು ಹಲವು ಯೋಜನೆಗಳು ಪೂರ್ಣವಾಗುತ್ತಿರಲಿಲ್ಲ’ ಎಂದರು.</p>.<p>‘ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿದ್ದ ವಿಳಂಬವು ದೇಶದ ವರ್ಚಸ್ಸಿನ ಮೇಲೂ ನಕಾರಾತ್ಮಕವಾದ ಪರಿಣಾಮ ಬೀರುತ್ತಿತ್ತು. ಈಗ ಪ್ರಧಾನಿ ಅವರಿಗೆ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸುವುದಷ್ಟೇ ಅಲ್ಲ, ಪೂರ್ಣಗೊಳಿಸುವುದರಲ್ಲಿ ವಿಶ್ವಾಸವಿದೆ. ಈಶಾನ್ಯ ರಾಜ್ಯಗಳಿಗೂ ಈ ಚಿಂತನೆಯಿಂದ ನೆರವಾಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯ ರಾಜ್ಯಗಳಿಗೆ 65 ಬಾರಿ, ಇತರೆ ಕೇಂದ್ರ ಸಚಿವರು 850 ಬಾರಿ ಭೇಟಿ ನೀಡಿದ್ದಾರೆ. ಇದು, ಈ ವಲಯಕ್ಕೆ ಸರ್ಕಾರ ನೀಡಿರುವ ಆದ್ಯತೆಯನ್ನು ಬಿಂಬಿಸಲಿದೆ’ ಎಂದು ತಿಳಿಸಿದರು.</p>.<p>ಈಶಾನ್ಯ ವಲಯವನ್ನು ಅಭಿವೃದ್ಧಿ ಹಾಗೂ ಪ್ರಗತಿಯ ಎಂಜಿನ್ ಆಗಿ ರೂಪಿಸಲು ಕಳೆದ ಒಂದು ದಶಕದಲ್ಲಿ ಬಿಜೆಪಿಯು ಕೈಗೊಂಡಿರುವ ಹಲವು ಕಾರ್ಯಕ್ರಮಗಳನ್ನು ಸಚಿವೆ ಉಲ್ಲೇಖಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>