‘ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನ ಶಿಬಿರದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೆಲವು ಬಾರಿ ನನ್ನನ್ನು ಕೋರಲಾಗಿದೆ. ನನ್ನ ದೃಷ್ಟಿಯಲ್ಲಿ, ಯಥಾಸ್ಥಿತಿಯನ್ನು ಮುಂದುವರಿಸುವುದು ಬಿಟ್ಟರೆ ಮತ್ತೇನೂ ಅರ್ಥಪೂರ್ಣ ನಿರ್ಧಾರವನ್ನು ಶಿಬಿರದಲ್ಲಿ ಕೈಗೊಳ್ಳಲಾಗಿಲ್ಲ. ಕನಿಷ್ಠಪಕ್ಷ ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಸೋಲುವ ವರೆಗೆ ಈಗಿನ ನಾಯಕತ್ವಕ್ಕೆ ಅವಕಾಶ ನೀಡಲಾಗಿದೆ!’ ಎಂದು ಪ್ರಶಾಂತ್ ಕಿಶೋರ್ ಮಾರ್ಮಿಕವಾಗಿ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.