ಸಭೆ ನಡೆದ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆ ಜೊತೆ ದೂರವಾಣಿ ಮೂಲಕ ಮಾತನಾಡಿದ ದಿಲೀಪ್ ಸಿಂಗ್ ಅವರು, ‘ಈ ಕ್ಷೇತ್ರದಿಂದ ನನ್ನ ಮಗ ಹಾಗೂ ಅವರ ಮಗ ಸ್ಪರ್ಧೆ ನಡೆಸಲಿರುವ ಸಂಬಂಧ ಮಾತುಕತೆ ನಡೆಸಿದ್ದೇವೆ. ಅವರು(ರಾಧಾಕೃಷ್ಣ ವಿಖೆ ಪಾಟೀಲ್) ತಮ್ಮ ಮಗನ ವಿರುದ್ಧ ನನ್ನ ಮಗನನ್ನು ಕಣಕ್ಕಿಳಿಸದಂತೆ ಮನವಿ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ನಾನು ಯಾವುದೇ ಭರವಸೆ ನೀಡಿಲ್ಲ. ತೀರ್ಮಾನ ತೆಗೆದುಕೊಳ್ಳುವುದಕ್ಕೆ ಸಮಯಾವಕಾಶ ಬೇಕಿದೆ’ ಎಂದು ತಿಳಿಸಿದ್ದಾರೆ.