<p><strong>ನವದೆಹಲಿ</strong>: ರಾಜಸ್ಥಾನ ವಿಧಾನಸಭಾ ಚುನಾವಣೆಗೆ 22 ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಶನಿವಾರ ತಡರಾತ್ರಿ ಕಾಂಗ್ರೆಸ್ ಬಿಡುಗಡೆ ಮಾಡಿದೆ.</p><p>ಜೈಪುರದ ಹವಾ ಮಹಲ್ ಕ್ಷೇತ್ರದಿಂದ ಆರ್. ಆರ್. ತಿವಾರಿ ಅವರನ್ನು ಕಣಕ್ಕಿಳಿಸಿದ್ದು, ಈ ಕ್ಷೇತ್ರದಿಂದ ಟಿಕೆಟ್ ನಿರೀಕ್ಷಿಸಿದ್ದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ ಸಚಿವ ಮಹೇಶ್ ಜೋಶಿ (ಗೆಹಲೋತ್ ವಿರುದ್ಧ ಬಂಡಾಯವೆದಿದ್ದ ಕಾರಣಕ್ಕೆ ಇವರಿಗೆ ಪಕ್ಷ ನೋಟಿಸ್ ನೀಡಿತ್ತು) ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ.</p><p>ಸಂಗರಿಯಾ ಕ್ಷೇತ್ರದಿಂದ ಅಭಿಮನ್ಯು ಪೂನಿಯಾ, ಸೂರ್ಸಾಗರ್ನಿಂದ ಶಹಜದ್ ಖಾನ್, ಭಿಲ್ವಾರಾ ಕ್ಷೇತ್ರದಿಂದ ಓಂ ನಾರಾಯಣಿವಾಲ್ ಮತ್ತು ಲಾಡ್ಪುರ ಕ್ಷೇತ್ರದಿಂದ ನೈಮುದ್ದೀನ್ ಗುಡ್ಡು ಅವರನ್ನು ಕಣಕ್ಕಿಳಿಸಿದೆ.</p><p>ಆ ಮೂಲಕ ಕಾಂಗ್ರೆಸ್ ಇಲ್ಲಿಯವರೆಗೆ 200 ಕ್ಷೇತ್ರಗಳ ಪೈಕಿ 178 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದೆ. ಭರತ್ಪುರ ಕ್ಷೇತ್ರವನ್ನು ರಾಷ್ಟ್ರೀಯ ಲೋಕದಳಕ್ಕೆ ಬಿಟ್ಟುಕೊಟ್ಟಿದೆ.</p><p>ರಾಜ್ಯ ವಿಧಾನಸಭೆಗೆ ನವೆಂಬರ್ 25ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ರಾಜಸ್ಥಾನ ವಿಧಾನಸಭಾ ಚುನಾವಣೆಗೆ 22 ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಶನಿವಾರ ತಡರಾತ್ರಿ ಕಾಂಗ್ರೆಸ್ ಬಿಡುಗಡೆ ಮಾಡಿದೆ.</p><p>ಜೈಪುರದ ಹವಾ ಮಹಲ್ ಕ್ಷೇತ್ರದಿಂದ ಆರ್. ಆರ್. ತಿವಾರಿ ಅವರನ್ನು ಕಣಕ್ಕಿಳಿಸಿದ್ದು, ಈ ಕ್ಷೇತ್ರದಿಂದ ಟಿಕೆಟ್ ನಿರೀಕ್ಷಿಸಿದ್ದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ ಸಚಿವ ಮಹೇಶ್ ಜೋಶಿ (ಗೆಹಲೋತ್ ವಿರುದ್ಧ ಬಂಡಾಯವೆದಿದ್ದ ಕಾರಣಕ್ಕೆ ಇವರಿಗೆ ಪಕ್ಷ ನೋಟಿಸ್ ನೀಡಿತ್ತು) ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ.</p><p>ಸಂಗರಿಯಾ ಕ್ಷೇತ್ರದಿಂದ ಅಭಿಮನ್ಯು ಪೂನಿಯಾ, ಸೂರ್ಸಾಗರ್ನಿಂದ ಶಹಜದ್ ಖಾನ್, ಭಿಲ್ವಾರಾ ಕ್ಷೇತ್ರದಿಂದ ಓಂ ನಾರಾಯಣಿವಾಲ್ ಮತ್ತು ಲಾಡ್ಪುರ ಕ್ಷೇತ್ರದಿಂದ ನೈಮುದ್ದೀನ್ ಗುಡ್ಡು ಅವರನ್ನು ಕಣಕ್ಕಿಳಿಸಿದೆ.</p><p>ಆ ಮೂಲಕ ಕಾಂಗ್ರೆಸ್ ಇಲ್ಲಿಯವರೆಗೆ 200 ಕ್ಷೇತ್ರಗಳ ಪೈಕಿ 178 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದೆ. ಭರತ್ಪುರ ಕ್ಷೇತ್ರವನ್ನು ರಾಷ್ಟ್ರೀಯ ಲೋಕದಳಕ್ಕೆ ಬಿಟ್ಟುಕೊಟ್ಟಿದೆ.</p><p>ರಾಜ್ಯ ವಿಧಾನಸಭೆಗೆ ನವೆಂಬರ್ 25ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>