<p><strong>ಬಹ್ರೈಚ್ :</strong> ಉತ್ತರ ಪ್ರದೇಶದ ಖೈರಿಘಾಟ್ ಧಾಕಿಯಾ ಗ್ರಾಮ ಹಾಗೂ ಮೋತಿಪುರದ ಮಾಧವಪುರದಲ್ಲಿ ಮಹಿಳೆಯರು ಮೊಸಳೆಯೊಂದಿಗೆ ಹೋರಾಡಿದ್ದಾರೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಒಬ್ಬರು ಐದು ವರ್ಷದ ಮಗನನ್ನು ರಕ್ಷಿಸಿದರೆ, ಇನ್ನೊಬ್ಬರು ತಮ್ಮ ಗಂಡನನ್ನು ರಕ್ಷಿಸಿದ್ದಾರೆ. </p><p>ಖೈರಿಘಾಟ್ ನ ಧಾಕಿಯಾ ಗ್ರಾಮದಲ್ಲಿ ಮೊದಲ ಘಟನೆ ಸಂಭವಿಸಿದೆ. ಘಾಗ್ರಾ ನದಿ ಸಮೀಪ ಏಳು ಅಡಿ ಉದ್ದದ ಮೊಸಳೆ ವೀರು ಎಂಬ ಬಾಲಕನನ್ನು ಎಳೆದೊಯುತ್ತಿತ್ತು. </p><p>ಬಾಲಕ ವೀರು ಕೂಗು ಕೇಳಿ ಅವನ ತಾಯಿ ಮಾಯಾ ಕಬ್ಬಿಣದ ಸರಳುಗಳಿಂದ ಮೊಸಳೆಗೆ ಹೊಡೆದು ತನ್ನ ಮಗನನ್ನು ರಕ್ಷಿಸಿದ್ದಾಳೆ. ಮಗುವಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದೆ ಎಂದು ಬಹ್ರೈಚ್ನ ವಿಭಾಗೀಯ ಅರಣ್ಯ ಅಧಿಕಾರಿ ರಾಮ್ ಸಿಂಗ್ ಯಾದವ್ ಹೇಳಿದ್ದಾರೆ. </p><p><strong>ಮೋತಿಪುರದ ಮಾಧವಪುರ ಗ್ರಾಮದಲ್ಲಿ ಮೊಸಳೆ ದಾಳಿಯ ಎರಡನೇ ಘಟನೆ</strong></p><p>45 ವರ್ಷದ ಸೈಫು ತನ್ನ ಪತ್ನಿ ಸುರ್ಜನಾ ಹಾಗೂ ಅತ್ತಿಗೆಯೊಂದಿಗೆ ರಾಮತಾಲಿಯಾ ಕಾಲುವೆಯನ್ನು ದಾಟುತ್ತಿದ್ದಾಗ ಮೊಸಳೆ ದಾಳಿ ನಡೆಸಿದೆ.</p>.ಮೊಸಳೆ ದಾಳಿ: ಕೃಷಿ ಕಾರ್ಮಿಕ ನಾಪತ್ತೆ.<p>ಕಾಲುವೆ ದಾಟುವಾಗ ಸೈಫು ಕಾಲಿಗೆ ಮೊಸಳೆ ಬಾಯಿ ಹಾಕಿ ಕಚ್ಚಿ ಹಿಡಿದಿದೆ. ತನ್ನ ಪತಿ ದಡ ಸೇರಲು ಸುರ್ಜನಾ ತನ್ನ ಸೀರೆಯನ್ನೇ ನೀರಿಗೆ ಹಾಕಿದ್ದಾಳೆ. </p><p>ಅವನ ಕಿರುಚಾಟಕ್ಕೆ ಓಡಿ ಬಂದ ಗ್ರಾಮಸ್ಥರು ಮೊಸಳೆಯನ್ನು ಕೋಲುಗಳಿಂದ ಹೊಡೆದು ಸೈಫನ್ನು ಕಾಪಾಡಿದ್ದಾರೆ. ಆತನ ಕಾಲಿಗೆ ಗಾಯವಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. </p>.ಮೊಸಳೆ ದಾಳಿ: ಗಾಯ.<p>ಭಾರೀ ಮಳೆಯಿಂದಾಗಿ ನದಿಗಳು ಮತ್ತು ಕಾಲುವೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ, ಮೊಸಳೆಗಳು ಜನವಸತಿ ಪ್ರದೇಶಗಳಿಗೆ ಬರುತ್ತವೆ. ನದಿ – ಹೊಳೆ ಪಕ್ಕ ಎಚ್ಚರದಿಂದಿರಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. </p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಹ್ರೈಚ್ :</strong> ಉತ್ತರ ಪ್ರದೇಶದ ಖೈರಿಘಾಟ್ ಧಾಕಿಯಾ ಗ್ರಾಮ ಹಾಗೂ ಮೋತಿಪುರದ ಮಾಧವಪುರದಲ್ಲಿ ಮಹಿಳೆಯರು ಮೊಸಳೆಯೊಂದಿಗೆ ಹೋರಾಡಿದ್ದಾರೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಒಬ್ಬರು ಐದು ವರ್ಷದ ಮಗನನ್ನು ರಕ್ಷಿಸಿದರೆ, ಇನ್ನೊಬ್ಬರು ತಮ್ಮ ಗಂಡನನ್ನು ರಕ್ಷಿಸಿದ್ದಾರೆ. </p><p>ಖೈರಿಘಾಟ್ ನ ಧಾಕಿಯಾ ಗ್ರಾಮದಲ್ಲಿ ಮೊದಲ ಘಟನೆ ಸಂಭವಿಸಿದೆ. ಘಾಗ್ರಾ ನದಿ ಸಮೀಪ ಏಳು ಅಡಿ ಉದ್ದದ ಮೊಸಳೆ ವೀರು ಎಂಬ ಬಾಲಕನನ್ನು ಎಳೆದೊಯುತ್ತಿತ್ತು. </p><p>ಬಾಲಕ ವೀರು ಕೂಗು ಕೇಳಿ ಅವನ ತಾಯಿ ಮಾಯಾ ಕಬ್ಬಿಣದ ಸರಳುಗಳಿಂದ ಮೊಸಳೆಗೆ ಹೊಡೆದು ತನ್ನ ಮಗನನ್ನು ರಕ್ಷಿಸಿದ್ದಾಳೆ. ಮಗುವಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದೆ ಎಂದು ಬಹ್ರೈಚ್ನ ವಿಭಾಗೀಯ ಅರಣ್ಯ ಅಧಿಕಾರಿ ರಾಮ್ ಸಿಂಗ್ ಯಾದವ್ ಹೇಳಿದ್ದಾರೆ. </p><p><strong>ಮೋತಿಪುರದ ಮಾಧವಪುರ ಗ್ರಾಮದಲ್ಲಿ ಮೊಸಳೆ ದಾಳಿಯ ಎರಡನೇ ಘಟನೆ</strong></p><p>45 ವರ್ಷದ ಸೈಫು ತನ್ನ ಪತ್ನಿ ಸುರ್ಜನಾ ಹಾಗೂ ಅತ್ತಿಗೆಯೊಂದಿಗೆ ರಾಮತಾಲಿಯಾ ಕಾಲುವೆಯನ್ನು ದಾಟುತ್ತಿದ್ದಾಗ ಮೊಸಳೆ ದಾಳಿ ನಡೆಸಿದೆ.</p>.ಮೊಸಳೆ ದಾಳಿ: ಕೃಷಿ ಕಾರ್ಮಿಕ ನಾಪತ್ತೆ.<p>ಕಾಲುವೆ ದಾಟುವಾಗ ಸೈಫು ಕಾಲಿಗೆ ಮೊಸಳೆ ಬಾಯಿ ಹಾಕಿ ಕಚ್ಚಿ ಹಿಡಿದಿದೆ. ತನ್ನ ಪತಿ ದಡ ಸೇರಲು ಸುರ್ಜನಾ ತನ್ನ ಸೀರೆಯನ್ನೇ ನೀರಿಗೆ ಹಾಕಿದ್ದಾಳೆ. </p><p>ಅವನ ಕಿರುಚಾಟಕ್ಕೆ ಓಡಿ ಬಂದ ಗ್ರಾಮಸ್ಥರು ಮೊಸಳೆಯನ್ನು ಕೋಲುಗಳಿಂದ ಹೊಡೆದು ಸೈಫನ್ನು ಕಾಪಾಡಿದ್ದಾರೆ. ಆತನ ಕಾಲಿಗೆ ಗಾಯವಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. </p>.ಮೊಸಳೆ ದಾಳಿ: ಗಾಯ.<p>ಭಾರೀ ಮಳೆಯಿಂದಾಗಿ ನದಿಗಳು ಮತ್ತು ಕಾಲುವೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ, ಮೊಸಳೆಗಳು ಜನವಸತಿ ಪ್ರದೇಶಗಳಿಗೆ ಬರುತ್ತವೆ. ನದಿ – ಹೊಳೆ ಪಕ್ಕ ಎಚ್ಚರದಿಂದಿರಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. </p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>