ಜೈಪುರ ಸಾಹಿತ್ಯೋತ್ಸವದಲ್ಲಿ ವಿಗ್ರಹಗಳ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾಸ ಮತ್ತು ಕಾಳಿದಾಸ ಮಹಾಕವಿಯ ಕಾಲದಲ್ಲಿ ಎಷ್ಟೊಂದು ಉತ್ತಮ ಸಾಹಿತ್ಯಗಳು ಸೃಷ್ಟಿಯಾಗಿದ್ದವು. ಜಗತ್ತಿನ ಇತರ ರಾಷ್ಟ್ರಗಳೂ ಅಂದಿನ ಕಾಲದಲ್ಲಿ ಜ್ಞಾನಕ್ಕಾಗಿ ಭಾರತದತ್ತ ಮುಖಮಾಡಿದ್ದವು. ಯಾವಾಗ ಒಂದು ದೇಶವು ಆತ್ಮವಿಶ್ವಾಸದಿಂದ ಎದ್ದು ನಿಲ್ಲುತ್ತದೋ, ಆಗ ಇಂತಹ ಉತ್ತಮ ಸಾಹಿತ್ಯಕೃತಿಗಳು ಮೂಡುತ್ತವೆ. ಆದರೆ, ಶತಮಾನಗಳ ಕಾಲ ಭಾರತವು ನಿರಂತರ ದಾಳಿಯನ್ನು ಎದುರಿಸಿದ ಫಲವಾಗಿ ಆತ್ಮವಿಶ್ವಾಸವನ್ನು ಕಳೆದುಕೊಂಡಿತ್ತು. ಈಗ ಮತ್ತೆ ಅಂತಹ ಆತ್ಮವಿಶ್ವಾಸದಿಂದ ಎದ್ದು ನಿಲ್ಲಲಿದೆ’ ಎಂದರು.