‘ತೌತೆ ಚಂಡಮಾರುತದಿಂದ ಜಾಫರಾಬಾದ್, ರಜುಲಾ, ಸೈಯದ್ ರಾಜ್ಪಾರಾ, ಶಹಿಯಾಲ್ ಬೆಟ್ ಮತ್ತು ನವಾ ಬಂದರ್ಗಳ ಮೂಲಸೌಕರ್ಯಗಳು, ಆ್ಯಂಕರ್ ಬೋಟ್ಗಳು, ಮೀನು ಹಿಡಿಯುವ ಬಲೆ, ಟ್ರಾಲರ್ಗಳಿಗೆ ಹಾನಿಗಳಾಗಿವೆ. ಈ ಪರಿಹಾರ ಪ್ಯಾಕೆಜ್ ಭಾಗವಾಗಿ ಹಾನಿಗೊಳಗಾಗಿರುವ 100 ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ದೋಣಿಗಳ ಮೀನುಗಾರರಿಗೆ ಒಟ್ಟು ₹25 ಕೋಟಿ ಪರಿಹಾರ ನೀಡಲಾಗುವುದು’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.