<p><strong>ಚೆನ್ನೈ:</strong> ಆಗಸ್ಟ್15ರಂದು ದೇಶದಾದ್ಯಂತ 74ನೇ ಸ್ವಾತಂತ್ರ್ಯೋತ್ಸವ ಆಚರಣೆ ಆಗಿದ್ದರೂ ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯ ಆತುಪಾಕಂ ಎಂಬ ಗ್ರಾಮ ಪಂಚಾಯತ್ನಲ್ಲಿತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯೋತ್ಸವ ನಡೆದದ್ದು ಗುರುವಾರ. ಅಂದರೆ 5 ದಿನಗಳ ನಂತರ ಇಲ್ಲಿ ಸ್ವಾತಂತ್ರ್ಯೋತ್ಸವ ನಡೆದಿದೆ.</p>.<p>ಪಂಚಾಯತ್ ಅಧ್ಯಕ್ಷೆ ವಿ.ಅಮೃತಂ ಅವರು ಆಗಸ್ಟ್ 15ರಂದು ಧ್ವಜಾರೋಹಣ ಮಾಡಲು ಹೋದಾಗ ಕೆಲವು ಸ್ಥಳೀಯರು ಆಕೆಯನ್ನು ತಡೆದಿದ್ದರು. ಅಮೃತಂ ಪರಿಶಿಷ್ಟಜಾತಿಯವರಾಗಿದ್ದ ಕಾರಣ ಧ್ವಜಾರೋಹಣಕ್ಕೆಸ್ಥಳೀಯರುವಿರೋಧ ಸೂಚಿಸಿದ್ದರು.</p>.<p>ಈ ಸಂಗತಿ ಬೆಳಕಿಗೆ ಬಂದ ಕೂಡಲೇ ಕ್ರಮ ತೆಗೆದುಕೊಂಡ ತಿರುವಲ್ಲೂರ್ ಜಿಲ್ಲಾಡಳಿತ, ಪಂಚಾಯತ್ ಕಾರ್ಯದರ್ಶಿಯನ್ನು ವಜಾ ಮಾಡಿದೆ. ಧ್ವಜಾರೋಣಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪಂಚಾಯತ್ ಉಪಾಧ್ಯಕ್ಷೆಯ ಪತಿ ಮತ್ತು ಪಂಚಾಯತ್ ಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಗುರುವಾರ ಪಂಚಾತ್ ಕಚೇರಿಯ ಆವರಣದಲ್ಲಿ ಅಮೃತಂ ಅವರು ಧ್ವಜಾರೋಹಣ ಮಾಡಿದ್ದು ಜಿಲ್ಲಾಧಿಕಾರಿ ಮಗೇಶ್ವರಿ ರವಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಪಿ. ಅರವಿಂದನ್ ಮತ್ತು ಜಿಲ್ಲಾಡಳಿತದಲ್ಲಿನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.</p>.<p>ಇದೇ ಮೊದಲ ಬಾರಿ ನಾನು ಸ್ವಾತಂತ್ರ್ಯದ ನಿಟ್ಟುಸಿರು ಬಿಟ್ಟಿದ್ದೇನೆ. ಜನರೇ ಆಯ್ಕೆ ಮಾಡಿದ್ದರೂ ನಾನು ಸ್ವಾತಂತ್ರ್ಯದಿನದಂದು ಧ್ವಜಾರೋಹಣ ಮಾಡುವುದಕ್ಕೆ ತಡೆಯೊಡ್ಡಲಾಯಿತು. ಇವತ್ತುನನಗೆ ಹೆಮ್ಮೆ ಮತ್ತು ಖುಷಿಯಾಗುತ್ತಿದೆ. ಈ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದಗಳು ಎಂದು ಡೆಕ್ಕನ್ ಹೆರಾಲ್ಡ್ ಜತೆ ಮಾತನಾಡಿದ ಅಮೃತಂ ಹೇಳಿದ್ದಾರೆ.</p>.<p>ಗ್ರಾಮದಲ್ಲಿನ ಮೇಲ್ಜಾಜಿಯ ಕೆಲವು ಜನರು ನನಗೆ ತಡೆಯೊಡ್ಡಿದ್ದಾರೆ. ಪಂಚಾಯತ್ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷೆಯ ಪತಿ ನಾನು ಕಚೇರಿಗೆ ಬರುವಾಗಲೆಲ್ಲಾ ಅವಮಾನ ಮಾಡುತ್ತಾರೆ. ಟೆಂಡರ್ ಬಗ್ಗೆ ಅವರು ನನ್ನಲ್ಲಿ ಯಾವುದೇ ಮಾಹಿತಿ ಹಂಚಿಕೊಳ್ಳುವುದಿಲ್ಲ.ನಾನು ಜಾತಿ ನಿಂದನೆಗೊಳಗಾಗುತ್ತಲೇ ಇರುತ್ತೇನೆ ಎಂದಿದ್ದಾರೆ ಅಮೃತಂ.</p>.<p>ಇದೀಗ ಜಿಲ್ಲಾಧಿಕಾರಿ ಮಧ್ಯಪ್ರವೇಶ ಮಾಡಿರುವುದರಿಂದ ಯಾವುದೇ ಅಡೆತಡೆಯಿಲ್ಲದೆ ನನ್ನ ಜವಾಬ್ದಾರಿಗಳನ್ನು ನಿರ್ವಹಿಸುವ ಆತ್ಮವಿಶ್ವಾಸ ನನಗಿದೆ ಎಂದು ಅಮೃತಂ ಹೇಳಿದ್ದಾರೆ.</p>.<p>ಅದೇ ವೇಳೆ ಪರಿಶಿಷ್ಟ ಜಾತಿಗೆ ಸೇರಿದ ಅಧ್ಯಕ್ಷರ ವಿರುದ್ಧ ತಾರತಮ್ಯ ಮಾಡಲಾಗಿದೆಯೇ ಮತ್ತು ಅದರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪರಿಶೀಲಿಸುವಂತೆ ಜಿಲ್ಲಾಡಳಿತಕ್ಕೆ ಜಿಲ್ಲಾಧಿಕಾರಿ ಮಾಗೇಶ್ವರಿ ರವಿಕುಮಾರ್ ಸೂಚಿಸಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಆಗಸ್ಟ್15ರಂದು ದೇಶದಾದ್ಯಂತ 74ನೇ ಸ್ವಾತಂತ್ರ್ಯೋತ್ಸವ ಆಚರಣೆ ಆಗಿದ್ದರೂ ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯ ಆತುಪಾಕಂ ಎಂಬ ಗ್ರಾಮ ಪಂಚಾಯತ್ನಲ್ಲಿತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯೋತ್ಸವ ನಡೆದದ್ದು ಗುರುವಾರ. ಅಂದರೆ 5 ದಿನಗಳ ನಂತರ ಇಲ್ಲಿ ಸ್ವಾತಂತ್ರ್ಯೋತ್ಸವ ನಡೆದಿದೆ.</p>.<p>ಪಂಚಾಯತ್ ಅಧ್ಯಕ್ಷೆ ವಿ.ಅಮೃತಂ ಅವರು ಆಗಸ್ಟ್ 15ರಂದು ಧ್ವಜಾರೋಹಣ ಮಾಡಲು ಹೋದಾಗ ಕೆಲವು ಸ್ಥಳೀಯರು ಆಕೆಯನ್ನು ತಡೆದಿದ್ದರು. ಅಮೃತಂ ಪರಿಶಿಷ್ಟಜಾತಿಯವರಾಗಿದ್ದ ಕಾರಣ ಧ್ವಜಾರೋಹಣಕ್ಕೆಸ್ಥಳೀಯರುವಿರೋಧ ಸೂಚಿಸಿದ್ದರು.</p>.<p>ಈ ಸಂಗತಿ ಬೆಳಕಿಗೆ ಬಂದ ಕೂಡಲೇ ಕ್ರಮ ತೆಗೆದುಕೊಂಡ ತಿರುವಲ್ಲೂರ್ ಜಿಲ್ಲಾಡಳಿತ, ಪಂಚಾಯತ್ ಕಾರ್ಯದರ್ಶಿಯನ್ನು ವಜಾ ಮಾಡಿದೆ. ಧ್ವಜಾರೋಣಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪಂಚಾಯತ್ ಉಪಾಧ್ಯಕ್ಷೆಯ ಪತಿ ಮತ್ತು ಪಂಚಾಯತ್ ಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಗುರುವಾರ ಪಂಚಾತ್ ಕಚೇರಿಯ ಆವರಣದಲ್ಲಿ ಅಮೃತಂ ಅವರು ಧ್ವಜಾರೋಹಣ ಮಾಡಿದ್ದು ಜಿಲ್ಲಾಧಿಕಾರಿ ಮಗೇಶ್ವರಿ ರವಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಪಿ. ಅರವಿಂದನ್ ಮತ್ತು ಜಿಲ್ಲಾಡಳಿತದಲ್ಲಿನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.</p>.<p>ಇದೇ ಮೊದಲ ಬಾರಿ ನಾನು ಸ್ವಾತಂತ್ರ್ಯದ ನಿಟ್ಟುಸಿರು ಬಿಟ್ಟಿದ್ದೇನೆ. ಜನರೇ ಆಯ್ಕೆ ಮಾಡಿದ್ದರೂ ನಾನು ಸ್ವಾತಂತ್ರ್ಯದಿನದಂದು ಧ್ವಜಾರೋಹಣ ಮಾಡುವುದಕ್ಕೆ ತಡೆಯೊಡ್ಡಲಾಯಿತು. ಇವತ್ತುನನಗೆ ಹೆಮ್ಮೆ ಮತ್ತು ಖುಷಿಯಾಗುತ್ತಿದೆ. ಈ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದಗಳು ಎಂದು ಡೆಕ್ಕನ್ ಹೆರಾಲ್ಡ್ ಜತೆ ಮಾತನಾಡಿದ ಅಮೃತಂ ಹೇಳಿದ್ದಾರೆ.</p>.<p>ಗ್ರಾಮದಲ್ಲಿನ ಮೇಲ್ಜಾಜಿಯ ಕೆಲವು ಜನರು ನನಗೆ ತಡೆಯೊಡ್ಡಿದ್ದಾರೆ. ಪಂಚಾಯತ್ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷೆಯ ಪತಿ ನಾನು ಕಚೇರಿಗೆ ಬರುವಾಗಲೆಲ್ಲಾ ಅವಮಾನ ಮಾಡುತ್ತಾರೆ. ಟೆಂಡರ್ ಬಗ್ಗೆ ಅವರು ನನ್ನಲ್ಲಿ ಯಾವುದೇ ಮಾಹಿತಿ ಹಂಚಿಕೊಳ್ಳುವುದಿಲ್ಲ.ನಾನು ಜಾತಿ ನಿಂದನೆಗೊಳಗಾಗುತ್ತಲೇ ಇರುತ್ತೇನೆ ಎಂದಿದ್ದಾರೆ ಅಮೃತಂ.</p>.<p>ಇದೀಗ ಜಿಲ್ಲಾಧಿಕಾರಿ ಮಧ್ಯಪ್ರವೇಶ ಮಾಡಿರುವುದರಿಂದ ಯಾವುದೇ ಅಡೆತಡೆಯಿಲ್ಲದೆ ನನ್ನ ಜವಾಬ್ದಾರಿಗಳನ್ನು ನಿರ್ವಹಿಸುವ ಆತ್ಮವಿಶ್ವಾಸ ನನಗಿದೆ ಎಂದು ಅಮೃತಂ ಹೇಳಿದ್ದಾರೆ.</p>.<p>ಅದೇ ವೇಳೆ ಪರಿಶಿಷ್ಟ ಜಾತಿಗೆ ಸೇರಿದ ಅಧ್ಯಕ್ಷರ ವಿರುದ್ಧ ತಾರತಮ್ಯ ಮಾಡಲಾಗಿದೆಯೇ ಮತ್ತು ಅದರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪರಿಶೀಲಿಸುವಂತೆ ಜಿಲ್ಲಾಡಳಿತಕ್ಕೆ ಜಿಲ್ಲಾಧಿಕಾರಿ ಮಾಗೇಶ್ವರಿ ರವಿಕುಮಾರ್ ಸೂಚಿಸಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>