<p><strong>ನವದೆಹಲಿ</strong>: ಡಾರ್ಕ್ ವೆಬ್, ಕ್ರಿಪ್ಟೋಕರೆನ್ಸಿ, ಆನ್ಲೈನ್ ಮಾರುಕಟ್ಟೆ ಮತ್ತು ಡ್ರೋನ್ಗಳು ದೇಶಕ್ಕೆ ಸವಾಲಾಗಿವೆ. ಕಠಿಣ ಕ್ರಮಗಳ ಮೂಲಕ ಇವುಗಳನ್ನು ನಿಗ್ರಹಿಸಬೇಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.</p><p>ನಗರದಲ್ಲಿ ನಡೆದ 'ಮಾದಕವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ' ಕುರಿತ ಪ್ರಾದೇಶಿಕ ಸಮಾವೇಶದಲ್ಲಿ ಮಾತನಾಡಿರುವ ಅಮಿತ್ ಶಾ, 'ದೇಶದ ಒಳಕ್ಕೆ ಅಥವಾ ಹೊರಕ್ಕೆ ಒಂದು ಕೆ.ಜಿ.ಯಷ್ಟೂ ಮಾದಕ ದ್ರವ್ಯ ಕಳ್ಳಸಾಗಣೆಯಾಗಲು ಬಿಡುವುದಿಲ್ಲ' ಎಂದು ಭರವಸೆ ನೀಡಿದ್ದಾರೆ.</p><p>'ಕೇಂದ್ರ ಸರ್ಕಾರವು ಮಾದಕವಸ್ತು ಜಾಲಗಳನ್ನು ನಿರ್ಮೂಲನೆ ಮಾಡುವುದಷ್ಟೇ ಅಲ್ಲದೆ, ಅವುಗಳೊಂದಿಗಿನ ಭಯೋತ್ಪಾದನೆ ನಂಟನ್ನೂ ಇಲ್ಲವಾಗಿಸುತ್ತಿದೆ. ಹಾಗೆಯೇ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಡ್ರಗ್ಸ್ – ಭಯೋತ್ಪಾದನೆ ಜಾಲಗಳನ್ನು ಬೇಧಿಸಲಾಗಿದೆ. ಇವೆಲ್ಲವೂ ಪ್ರಮುಖ ಸಾಧನೆಗಳಾಗಿವೆ' ಎಂದು ಪ್ರತಿಪಾದಿಸಿದ್ದಾರೆ.</p><p>'ಡಾರ್ಕ್ ವೆಬ್, ಕ್ರಿಪ್ಟೋಕರೆನ್ಸಿ, ಆನ್ಲೈನ್ ಮಾರಾಟ ತಾಣಗಳು, ಡ್ರೋನ್ಗಳ ಬಳಕೆಯು ಇಂದಿಗೂ ಸವಾಲಾಗಿವೆ' ಎಂದು ಕಳವಳ ವ್ಯಕ್ತಪಡಿಸಿರುವ ಗೃಹ ಸಚಿವ, 'ದೇಶದ ಭದ್ರತೆ ಮತ್ತು ಅಭಿವೃದ್ಧಿಯ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ತಂತ್ರಜ್ಞರು ಜಂಟಿಯಾಗಿ ಈ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕಿದೆ' ಎಂದು ಹೇಳಿದ್ದಾರೆ.</p><p>ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಾದಕವಸ್ತು ವಿರುದ್ಧದ ಹೋರಾಟಕ್ಕೆ ಹೊಸ ಶಕ್ತಿ ಬಂದಿದೆ ಎಂದು ಶ್ಲಾಘಿಸಿದ್ದಾರೆ.</p><p>'ಮಾದಕವಸ್ತುಗಳನ್ನು ವಶಕ್ಕೆ ಪಡೆದಿರುವ ಪ್ರಮಾಣವು ಕಳೆದ 10 ವರ್ಷಗಳಲ್ಲಿ ಏಳು ಪಟ್ಟು ಹೆಚ್ಚಾಗಿದೆ. ಇದು ಅತಿ ದೊಡ್ಡ ಸಾಧನೆಯಾಗಿದೆ. ಮೋದಿ ಸರ್ಕಾರವು, ಕಠಿಣ ಕ್ರಮಗಳ ಮೂಲಕ ಇಡೀ ಮಾದಕವಸ್ತು ಜಾಲವನ್ನೇ ನಾಶ ಮಾಡುವ ಕಠಿಣ ಸಂದೇಶ ರವಾನಿಸಿದೆ' ಎಂದಿದ್ದಾರೆ.</p><p>ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕವು (ಎನ್ಸಿಬಿ) 2024ರಲ್ಲಿ ಬರೋಬ್ಬರಿ ₹ 16,914 ಕೋಟಿ ಮೊತ್ತದ ಮಾದಕವಸ್ತುಗಳನ್ನು ವಶಕ್ಕೆ ಪಡೆದಿದೆ ಎಂದು ಶಾ ಮಾಹಿತಿ ನೀಡಿದ್ದಾರೆ.</p><p>'ಯುವ ಜನಾಂಗವು ಮಾದಕವಸ್ತುವಿನ ಚಟ ಅಂಟಿಸಿಕೊಂಡಿರುವ ಯಾವುದೇ ರಾಷ್ಟ್ರವೂ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯವಿಲ್ಲ. ಇದರ ವಿರುದ್ಧ ಒಂದಾಗಿ ಹೋರಾಟ ಮಾಡಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ' ಎಂದು ಕರೆ ನೀಡಿದ್ದಾರೆ.</p><p>'2004–14ರ ಯುಪಿಎ ಸರ್ಕಾರದ ಅವಧಿಯಲ್ಲಿ, ರಾಷ್ಟ್ರದಾದ್ಯಂತ 3.63 ಲಕ್ಷ ಕೆ.ಜಿ.ಯಷ್ಟು ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ, 2014–24ರವರೆಗೆ (ಎನ್ಡಿಎ ಅವಧಿಯಲ್ಲಿ) 24 ಲಕ್ಷ ಕೆ.ಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಯುಪಿಎ ಅವಧಿಯಲ್ಲಿ ₹ 8,150 ಕೋಟಿಯಷ್ಟು ಹಾಗೂ ಎನ್ಡಿಎ ಅವಧಿಯಲ್ಲಿ ₹ 54,851 ಬೆಲೆಯ ಮಾದಕವಸ್ತುವನ್ನು ನಾಶ ಮಾಡಲಾಗಿದೆ' ಎಂದು ಲೆಕ್ಕ ನೀಡಿದ್ದಾರೆ.</p>.ಕರ್ನಾಟಕದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲೂ ಮುಂದುವರಿದ ಬಾಣಂತಿಯರ ಸಾವು: ಆತಂಕ .ಮೆಲೋಡಿ ಮೀಮ್ ಹರಿದಾಟ: ಅದು ನಡೆಯುತ್ತಿರುತ್ತೆ, ತಲೆ ಕೆಡಿಸಿಕೊಳ್ಳಲ್ಲ– PM ಮೋದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಡಾರ್ಕ್ ವೆಬ್, ಕ್ರಿಪ್ಟೋಕರೆನ್ಸಿ, ಆನ್ಲೈನ್ ಮಾರುಕಟ್ಟೆ ಮತ್ತು ಡ್ರೋನ್ಗಳು ದೇಶಕ್ಕೆ ಸವಾಲಾಗಿವೆ. ಕಠಿಣ ಕ್ರಮಗಳ ಮೂಲಕ ಇವುಗಳನ್ನು ನಿಗ್ರಹಿಸಬೇಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.</p><p>ನಗರದಲ್ಲಿ ನಡೆದ 'ಮಾದಕವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ' ಕುರಿತ ಪ್ರಾದೇಶಿಕ ಸಮಾವೇಶದಲ್ಲಿ ಮಾತನಾಡಿರುವ ಅಮಿತ್ ಶಾ, 'ದೇಶದ ಒಳಕ್ಕೆ ಅಥವಾ ಹೊರಕ್ಕೆ ಒಂದು ಕೆ.ಜಿ.ಯಷ್ಟೂ ಮಾದಕ ದ್ರವ್ಯ ಕಳ್ಳಸಾಗಣೆಯಾಗಲು ಬಿಡುವುದಿಲ್ಲ' ಎಂದು ಭರವಸೆ ನೀಡಿದ್ದಾರೆ.</p><p>'ಕೇಂದ್ರ ಸರ್ಕಾರವು ಮಾದಕವಸ್ತು ಜಾಲಗಳನ್ನು ನಿರ್ಮೂಲನೆ ಮಾಡುವುದಷ್ಟೇ ಅಲ್ಲದೆ, ಅವುಗಳೊಂದಿಗಿನ ಭಯೋತ್ಪಾದನೆ ನಂಟನ್ನೂ ಇಲ್ಲವಾಗಿಸುತ್ತಿದೆ. ಹಾಗೆಯೇ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಡ್ರಗ್ಸ್ – ಭಯೋತ್ಪಾದನೆ ಜಾಲಗಳನ್ನು ಬೇಧಿಸಲಾಗಿದೆ. ಇವೆಲ್ಲವೂ ಪ್ರಮುಖ ಸಾಧನೆಗಳಾಗಿವೆ' ಎಂದು ಪ್ರತಿಪಾದಿಸಿದ್ದಾರೆ.</p><p>'ಡಾರ್ಕ್ ವೆಬ್, ಕ್ರಿಪ್ಟೋಕರೆನ್ಸಿ, ಆನ್ಲೈನ್ ಮಾರಾಟ ತಾಣಗಳು, ಡ್ರೋನ್ಗಳ ಬಳಕೆಯು ಇಂದಿಗೂ ಸವಾಲಾಗಿವೆ' ಎಂದು ಕಳವಳ ವ್ಯಕ್ತಪಡಿಸಿರುವ ಗೃಹ ಸಚಿವ, 'ದೇಶದ ಭದ್ರತೆ ಮತ್ತು ಅಭಿವೃದ್ಧಿಯ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ತಂತ್ರಜ್ಞರು ಜಂಟಿಯಾಗಿ ಈ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕಿದೆ' ಎಂದು ಹೇಳಿದ್ದಾರೆ.</p><p>ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಾದಕವಸ್ತು ವಿರುದ್ಧದ ಹೋರಾಟಕ್ಕೆ ಹೊಸ ಶಕ್ತಿ ಬಂದಿದೆ ಎಂದು ಶ್ಲಾಘಿಸಿದ್ದಾರೆ.</p><p>'ಮಾದಕವಸ್ತುಗಳನ್ನು ವಶಕ್ಕೆ ಪಡೆದಿರುವ ಪ್ರಮಾಣವು ಕಳೆದ 10 ವರ್ಷಗಳಲ್ಲಿ ಏಳು ಪಟ್ಟು ಹೆಚ್ಚಾಗಿದೆ. ಇದು ಅತಿ ದೊಡ್ಡ ಸಾಧನೆಯಾಗಿದೆ. ಮೋದಿ ಸರ್ಕಾರವು, ಕಠಿಣ ಕ್ರಮಗಳ ಮೂಲಕ ಇಡೀ ಮಾದಕವಸ್ತು ಜಾಲವನ್ನೇ ನಾಶ ಮಾಡುವ ಕಠಿಣ ಸಂದೇಶ ರವಾನಿಸಿದೆ' ಎಂದಿದ್ದಾರೆ.</p><p>ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕವು (ಎನ್ಸಿಬಿ) 2024ರಲ್ಲಿ ಬರೋಬ್ಬರಿ ₹ 16,914 ಕೋಟಿ ಮೊತ್ತದ ಮಾದಕವಸ್ತುಗಳನ್ನು ವಶಕ್ಕೆ ಪಡೆದಿದೆ ಎಂದು ಶಾ ಮಾಹಿತಿ ನೀಡಿದ್ದಾರೆ.</p><p>'ಯುವ ಜನಾಂಗವು ಮಾದಕವಸ್ತುವಿನ ಚಟ ಅಂಟಿಸಿಕೊಂಡಿರುವ ಯಾವುದೇ ರಾಷ್ಟ್ರವೂ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯವಿಲ್ಲ. ಇದರ ವಿರುದ್ಧ ಒಂದಾಗಿ ಹೋರಾಟ ಮಾಡಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ' ಎಂದು ಕರೆ ನೀಡಿದ್ದಾರೆ.</p><p>'2004–14ರ ಯುಪಿಎ ಸರ್ಕಾರದ ಅವಧಿಯಲ್ಲಿ, ರಾಷ್ಟ್ರದಾದ್ಯಂತ 3.63 ಲಕ್ಷ ಕೆ.ಜಿ.ಯಷ್ಟು ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ, 2014–24ರವರೆಗೆ (ಎನ್ಡಿಎ ಅವಧಿಯಲ್ಲಿ) 24 ಲಕ್ಷ ಕೆ.ಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಯುಪಿಎ ಅವಧಿಯಲ್ಲಿ ₹ 8,150 ಕೋಟಿಯಷ್ಟು ಹಾಗೂ ಎನ್ಡಿಎ ಅವಧಿಯಲ್ಲಿ ₹ 54,851 ಬೆಲೆಯ ಮಾದಕವಸ್ತುವನ್ನು ನಾಶ ಮಾಡಲಾಗಿದೆ' ಎಂದು ಲೆಕ್ಕ ನೀಡಿದ್ದಾರೆ.</p>.ಕರ್ನಾಟಕದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲೂ ಮುಂದುವರಿದ ಬಾಣಂತಿಯರ ಸಾವು: ಆತಂಕ .ಮೆಲೋಡಿ ಮೀಮ್ ಹರಿದಾಟ: ಅದು ನಡೆಯುತ್ತಿರುತ್ತೆ, ತಲೆ ಕೆಡಿಸಿಕೊಳ್ಳಲ್ಲ– PM ಮೋದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>