ಆತಿಶಿ ಹೇಳಿಕೆ ಸಂಬಂಧ ಬಿಜೆಪಿ ಘಟಕವು ಇದೀಗ ಮಾನನಷ್ಟ ಸಂಬಂಧಿಸಿದ ನೋಟಿಸ್ ಕಳುಹಿಸಿದ್ದು, ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ.
‘ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಸಚ್ದೇವ, ಆಧಾರರಹಿತ ಆರೋಪಗಳನ್ನು ಮಾಡಿ, ದಾಖಲೆ ಒದಗಿಸಲು ವಿಫಲರಾಗಿರುವ ಆತಿಶಿ ಅವರು, ಕ್ಷಮೆಯಾಚಿಸಬೇಕು. ದೆಹಲಿಯಲ್ಲಿ ಎಎಪಿ ಬಿಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ಅವರು ಹತಾಶೆಯಿಂದಾಗಿ ಈ ರೀತಿ ಸುಳ್ಳು ಆರೋಪ ಮಾಡಿದ್ದಾರೆ ಎಂದರು.