<p><strong>ನವದೆಹಲಿ:</strong> ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧಿಕೃತ ನಿವಾಸವಾದ ರಾಜ್ ನಿವಾಸ ಮಾರ್ಗದಲ್ಲಿರುವ ಬಂಗಲೆ ಸಂಖ್ಯೆ 1ರ ನವೀಕರಣ ಇದೇ ತಿಂಗಳು ನಡೆಯಲಿದ್ದು, ಇದಕ್ಕಾಗಿ ಲೋಕೋಪಯೋಗಿ ಇಲಾಖೆ ಟೆಂಡರ್ ಕರೆದಿದೆ.</p><p>ನವೀಕರಣದಲ್ಲಿ ವಿದ್ಯುತ್ ಉಪಕರಣಗಳ ಬದಲಾವಣೆ ಮುಖ್ಯವಾಗಿ ಇರಲಿದೆ. ಇದಕ್ಕೆ ಜುಲೈ 4ರಂದು ಬಿಡ್ ಆರಂಭವಾಗಲಿದೆ. ಟೆಂಡರ್ ಘೋಷಣೆಯಾಗುತ್ತಿದ್ದಂತೆ 60 ದಿನಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p><p>ಮುಖ್ಯಮಂತ್ರಿ ರೇಖಾ ಅವರಿಗೆ ಎರಡು ಬಂಗಲೆಗಳು ಮಂಜೂರಾಗಿವೆ. ಇದರಲ್ಲಿ ಬಂಗಲೆ ಸಂಖ್ಯೆ 1ರಲ್ಲಿ ಅವರು ಉಳಿಯಲಿದ್ದಾರೆ. ಆದರೆ ಬಂಗಲೆ ಸಂಖ್ಯೆ 2 ಅನ್ನು ಅವರು ಗೃಹ ಕಚೇರಿಯಾಗಿ ಬಳಸಿಕೊಳ್ಳಲಿದ್ದಾರೆ ಎಂದೆನ್ನಲಾಗಿದೆ.</p><p>ಜೂನ್ 28ರಂದು ಟೆಂಡರ್ ಕರೆಯಲಾಗಿತ್ತು. ಒಟ್ಟು ₹60 ಲಕ್ಷದ ಈ ಟೆಂಡರ್ನಲ್ಲಿ ₹9.3 ಲಕ್ಷದ ಐದು ಟಿ.ವಿ.ಗಳನ್ನು ಅಳವಡಿಸಬೇಕಿದೆ. ₹7.7 ಲಕ್ಷದಲ್ಲಿ 14 ಹವಾನಿಯಂತ್ರಿತ ಸಾಧನಗಳು, ₹5.74 ಲಕ್ಷದ 14 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕಿದೆ. ₹2ಲಕ್ಷ ಮೌಲ್ಯದ ಯುಪಿಎಸ್ ಅಳವಡಿಸಬೇಕು ಎಂದೂ ಹೇಳಲಾಗಿದೆ.</p><p>ಇದಲ್ಲದೇ, ರಿಮೋಟ್ ಇರುವ 23 ಫ್ಯಾನ್ಗಳಿಗೆ ₹1.8 ಲಕ್ಷ, ಟೋಸ್ಟ್ ತಯಾರಿಸುವ ಗ್ರಿಲ್ (₹85 ಸಾವಿರ), ಆಟೊಮ್ಯಾಟಿಕ್ ವಾಷಿಂಗ್ ಮಷಿನ್ (₹77 ಸಾವಿರ), ಪಾತ್ರೆ ತೊಳೆಯುವ ಯಂತ್ರ (₹60 ಸಾವಿರ); ಅಡುಗೆ ಅನಿಲ ಒಲೆ (₹63 ಸಾವಿರ), ಮೈಕ್ರೊವೇವ್ ಅವನ್ ₹32ಸಾವಿರ ಮತ್ತು ಆರು ಗೀಸರ್ (₹91 ಸಾವಿರ) ಅಳವಡಿಸಬೇಕು ಎಂದು ಹೇಳಲಾಗಿದೆ.</p><p>ಒಟ್ಟು 115 ದೀಪಗಳನ್ನು ಅಳವಡಿಸಬೇಕಿದೆ. ಇದರಲ್ಲಿ ಗೋಡೆಗೆ ಅಳವಡಿಸುವ, ತೂಗುಹಾಕುವ ದೀಪಗಳು ಮತ್ತು ಮೂರು ದೊಡ್ಡ ಝೂಮರ್ಗಳನ್ನು ಅಳವಡಿಸಬೇಕಿದೆ. ಇದಕ್ಕಾಗಿ ₹6.03 ಲಕ್ಷವನ್ನು ಇಲಾಖೆ ಮೀಸಲಿಟ್ಟಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.</p>.<h3>ಕೇಜ್ರಿವಾಲ್ ಇದ್ದ ಬಂಗಲೆ ನಿರಾಕರಿಸಿದ ರೇಖಾ ಗುಪ್ತಾ</h3><p>ಕಳೆದ ಫೆಬ್ರುವರಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ರೇಖಾ ಅವರು ಸದ್ಯ ಶಾಲಿಮಾರ್ ಬಾಗ್ ಮನೆಯಲ್ಲಿದ್ದಾರೆ. </p><p>ಆದರೆ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿದ್ದ ರಾಷ್ಟ್ರ ರಾಜಧಾನಿಯ ಫ್ಲಾಗ್ ಸ್ಟಾಫ್ ರಸ್ತೆಯ ನಂ. 6ನೇ ಬಂಗಲೆಯಲ್ಲಿ ಇರಲು ನಿರಾಕರಿಸಿದರು. ಈ ಬಂಗಲೆಯೂ ನವೀಕರಣಗೊಂಡಿದ್ದು, ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರು ಆರೋಪಿಸಿದ್ದರು. ಜತೆಗೆ ‘ಶೀಶಮಹಲ್’ ಎಂದೂ ಕರೆದಿದ್ದರು. ಈ ಬಂಗಲೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಲು ರೇಖಾ ಗುಪ್ತಾ ಅವರು ಶಪತ ಮಾಡಿದ್ದರು.</p><p>3.60 ಲಕ್ಷ ಚದರಡಿಯಲ್ಲಿರುವ ಈ ಬಂಗಲೆಯಲ್ಲಿ 2015ರಿಂದ 2024ರ ಅಕ್ಟೋಬರ್ವರೆಗೂ ಕೇಜ್ರಿವಾಲ್ ಅವರಿದ್ದರು. ಆದರೆ ಅವರ ವಿರುದ್ಧ ವ್ಯಾಪಕ ಆರೋಪ ಮತ್ತು ರಾಜಕೀಯ ಸಂಘರ್ಷದಿಂದಾಗಿ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣ ಬಂಗಲೆ ತೊರೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧಿಕೃತ ನಿವಾಸವಾದ ರಾಜ್ ನಿವಾಸ ಮಾರ್ಗದಲ್ಲಿರುವ ಬಂಗಲೆ ಸಂಖ್ಯೆ 1ರ ನವೀಕರಣ ಇದೇ ತಿಂಗಳು ನಡೆಯಲಿದ್ದು, ಇದಕ್ಕಾಗಿ ಲೋಕೋಪಯೋಗಿ ಇಲಾಖೆ ಟೆಂಡರ್ ಕರೆದಿದೆ.</p><p>ನವೀಕರಣದಲ್ಲಿ ವಿದ್ಯುತ್ ಉಪಕರಣಗಳ ಬದಲಾವಣೆ ಮುಖ್ಯವಾಗಿ ಇರಲಿದೆ. ಇದಕ್ಕೆ ಜುಲೈ 4ರಂದು ಬಿಡ್ ಆರಂಭವಾಗಲಿದೆ. ಟೆಂಡರ್ ಘೋಷಣೆಯಾಗುತ್ತಿದ್ದಂತೆ 60 ದಿನಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p><p>ಮುಖ್ಯಮಂತ್ರಿ ರೇಖಾ ಅವರಿಗೆ ಎರಡು ಬಂಗಲೆಗಳು ಮಂಜೂರಾಗಿವೆ. ಇದರಲ್ಲಿ ಬಂಗಲೆ ಸಂಖ್ಯೆ 1ರಲ್ಲಿ ಅವರು ಉಳಿಯಲಿದ್ದಾರೆ. ಆದರೆ ಬಂಗಲೆ ಸಂಖ್ಯೆ 2 ಅನ್ನು ಅವರು ಗೃಹ ಕಚೇರಿಯಾಗಿ ಬಳಸಿಕೊಳ್ಳಲಿದ್ದಾರೆ ಎಂದೆನ್ನಲಾಗಿದೆ.</p><p>ಜೂನ್ 28ರಂದು ಟೆಂಡರ್ ಕರೆಯಲಾಗಿತ್ತು. ಒಟ್ಟು ₹60 ಲಕ್ಷದ ಈ ಟೆಂಡರ್ನಲ್ಲಿ ₹9.3 ಲಕ್ಷದ ಐದು ಟಿ.ವಿ.ಗಳನ್ನು ಅಳವಡಿಸಬೇಕಿದೆ. ₹7.7 ಲಕ್ಷದಲ್ಲಿ 14 ಹವಾನಿಯಂತ್ರಿತ ಸಾಧನಗಳು, ₹5.74 ಲಕ್ಷದ 14 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕಿದೆ. ₹2ಲಕ್ಷ ಮೌಲ್ಯದ ಯುಪಿಎಸ್ ಅಳವಡಿಸಬೇಕು ಎಂದೂ ಹೇಳಲಾಗಿದೆ.</p><p>ಇದಲ್ಲದೇ, ರಿಮೋಟ್ ಇರುವ 23 ಫ್ಯಾನ್ಗಳಿಗೆ ₹1.8 ಲಕ್ಷ, ಟೋಸ್ಟ್ ತಯಾರಿಸುವ ಗ್ರಿಲ್ (₹85 ಸಾವಿರ), ಆಟೊಮ್ಯಾಟಿಕ್ ವಾಷಿಂಗ್ ಮಷಿನ್ (₹77 ಸಾವಿರ), ಪಾತ್ರೆ ತೊಳೆಯುವ ಯಂತ್ರ (₹60 ಸಾವಿರ); ಅಡುಗೆ ಅನಿಲ ಒಲೆ (₹63 ಸಾವಿರ), ಮೈಕ್ರೊವೇವ್ ಅವನ್ ₹32ಸಾವಿರ ಮತ್ತು ಆರು ಗೀಸರ್ (₹91 ಸಾವಿರ) ಅಳವಡಿಸಬೇಕು ಎಂದು ಹೇಳಲಾಗಿದೆ.</p><p>ಒಟ್ಟು 115 ದೀಪಗಳನ್ನು ಅಳವಡಿಸಬೇಕಿದೆ. ಇದರಲ್ಲಿ ಗೋಡೆಗೆ ಅಳವಡಿಸುವ, ತೂಗುಹಾಕುವ ದೀಪಗಳು ಮತ್ತು ಮೂರು ದೊಡ್ಡ ಝೂಮರ್ಗಳನ್ನು ಅಳವಡಿಸಬೇಕಿದೆ. ಇದಕ್ಕಾಗಿ ₹6.03 ಲಕ್ಷವನ್ನು ಇಲಾಖೆ ಮೀಸಲಿಟ್ಟಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.</p>.<h3>ಕೇಜ್ರಿವಾಲ್ ಇದ್ದ ಬಂಗಲೆ ನಿರಾಕರಿಸಿದ ರೇಖಾ ಗುಪ್ತಾ</h3><p>ಕಳೆದ ಫೆಬ್ರುವರಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ರೇಖಾ ಅವರು ಸದ್ಯ ಶಾಲಿಮಾರ್ ಬಾಗ್ ಮನೆಯಲ್ಲಿದ್ದಾರೆ. </p><p>ಆದರೆ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿದ್ದ ರಾಷ್ಟ್ರ ರಾಜಧಾನಿಯ ಫ್ಲಾಗ್ ಸ್ಟಾಫ್ ರಸ್ತೆಯ ನಂ. 6ನೇ ಬಂಗಲೆಯಲ್ಲಿ ಇರಲು ನಿರಾಕರಿಸಿದರು. ಈ ಬಂಗಲೆಯೂ ನವೀಕರಣಗೊಂಡಿದ್ದು, ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರು ಆರೋಪಿಸಿದ್ದರು. ಜತೆಗೆ ‘ಶೀಶಮಹಲ್’ ಎಂದೂ ಕರೆದಿದ್ದರು. ಈ ಬಂಗಲೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಲು ರೇಖಾ ಗುಪ್ತಾ ಅವರು ಶಪತ ಮಾಡಿದ್ದರು.</p><p>3.60 ಲಕ್ಷ ಚದರಡಿಯಲ್ಲಿರುವ ಈ ಬಂಗಲೆಯಲ್ಲಿ 2015ರಿಂದ 2024ರ ಅಕ್ಟೋಬರ್ವರೆಗೂ ಕೇಜ್ರಿವಾಲ್ ಅವರಿದ್ದರು. ಆದರೆ ಅವರ ವಿರುದ್ಧ ವ್ಯಾಪಕ ಆರೋಪ ಮತ್ತು ರಾಜಕೀಯ ಸಂಘರ್ಷದಿಂದಾಗಿ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣ ಬಂಗಲೆ ತೊರೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>