‘ಎಎಪಿ ತುಳಿಯುವ ಹುನ್ನಾರ’: ‘ದೇಶದ ಜನತೆಗೆ ಎಎಪಿ ಆಶಾಕಿರಣವಾಗಿ ಹೊರಹೊಮ್ಮಿದೆ. ಪಕ್ಷವು, ಬಡತನವನ್ನು ಹೋಗಲಾಡಿಸುವ ಜೊತೆಗೆ ತಮ್ಮನ್ನು ಸುಶಿಕ್ಷಿತರನ್ನಾಗಿ ಮಾಡುತ್ತದೆ ಎಂಬ ಭರವಸೆ ಜನರಲ್ಲಿ ಮೂಡಿದೆ. ಆದರೆ, ಪಕ್ಷವನ್ನು ಗುರಿಯಾಗಿಸುವ ಮೂಲಕ ಜನರಲ್ಲಿನ ಆಶಾಭಾವನೆಯನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ’ ಎಂದು ಕೇಜ್ರಿವಾಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.