<p><strong>ನವದೆಹಲಿ:</strong> ಕಸ್ಟಡಿಯಲ್ಲಿರುವಾಗ ಸಂಸತ್ ಅಧಿವೇಶನಗಳಿಗೆ ಹಾಜರಾಗಲು ಸುಮಾರು ₹ 4 ಲಕ್ಷ ಹಣ ಠೇವಣಿ ಇಡಬೇಕು ಎನ್ನುವ ಆದೇಶವನ್ನು ಮರುಪರಿಶೀಲಿಸಲು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದ ಸಂಸದ ಅಬ್ದುಲ್ ರಶೀದ್ ಸಲ್ಲಿಸಿದ್ದ ಅರ್ಜಿಗೆ ದೆಹಲಿ ಹೈಕೋರ್ಟ್ ಭಿನ್ನಮತದ ತೀರ್ಪು ನೀಡಿದೆ.</p>.ಸಂಸತ್ತಿಗೆ ತೆರಳಲು ಅನುಮತಿ ಕೋರಿದ MP ರಶೀದ್: NIA ನಿಲುವು ಪ್ರಶ್ನಿಸಿದ ದೆಹಲಿ HC.<p>ನ್ಯಾಯಮೂರ್ತಿ ವಿವೇಕ್ ಚೌಧರಿ ಅರ್ಜಿಯನ್ನು ತಿರಸ್ಕರಿಸಿದರೆ, ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅರ್ಜಿಯನ್ನು ಪುರಸ್ಕರಿಸಿದ್ದಾರೆ.</p><p>‘ನಾಬಿಬ್ಬರು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ನಾಬಿಬ್ಬರು ಪ್ರತ್ಯೇಕ ತೀರ್ಪು ನೀಡಿದ್ದೇವೆ. ಸೂಕ್ತ ಆದೇಶಕ್ಕಾಗಿ ನಾವು ಇದನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇಡುತ್ತೇವೆ’ ಎಂದು ಉಭಯ ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಹೇಳಿದ್ದಾರೆ.</p><p>‘ನನ್ನ ಸಹೋದರ ಈ (ಜೆ ಭಂಭಾನಿ) ಅರ್ಜಿಯನ್ನು ಪುರಸ್ಕರಿಸಿದ್ದಾರೆ, ನಾನು ತಿರಸ್ಕರಿಸಿದ್ದೇನೆ’ ಎಂದು ನ್ಯಾಯಮೂರ್ತಿ ಚೌಧರಿ ಹೇಳಿದ್ದಾರೆ.</p>.ಶೆಹ್ಲಾ ರಶೀದ್ ಮೇಲಿನ ದೇಶದ್ರೋಹ ಪ್ರಕರಣ ಹಿಂಪಡೆಯಲು ಕೋರ್ಟ್ ಅನುಮತಿ .<p>ಕಸ್ಟಡಿಯಲ್ಲಿದ್ದುಕೊಂಡು ಸಂಸತ್ ಕಲಾಪಗಳಿಗೆ ಹಾಜರಾಗಬೇಕಾದರೆ ಸುಮಾರು ₹ 4 ಲಕ್ಷ ಠೇವಣಿ ಇಡಬೇಕು ಎಂದು ಮಾರ್ಚ್ 25 ರಂದು ಕೋರ್ಟ್ ತೀರ್ಪು ನೀಡಿತ್ತು.</p><p>ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣದಲ್ಲಿ ಎನ್ಐಎಯಿಂದ ಬಂಧಿರಾಗಿರುವ ಅವರು, 2019ರಿಂದ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಲು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಅವರಿಗೆ ಒಂದು ತಿಂಗಳ ಮಧ್ಯಂತರ ಜಾಮೀನು ನೀಡಲಾಗಿತ್ತು.</p><p>2024 ರ ಲೋಕಸಭಾ ಚುನಾವಣೆಯಲ್ಲಿ ಒಮರ್ ಅಬ್ದುಲ್ಲಾ ಅವರನ್ನು ಸೋಲಿಸಿದ್ದರು.</p> .ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ರಶೀದ್ ಎಂಜಿನಿಯರ್ಗೆ 2 ದಿನ ಕಸ್ಟಡಿ ಪೆರೋಲ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕಸ್ಟಡಿಯಲ್ಲಿರುವಾಗ ಸಂಸತ್ ಅಧಿವೇಶನಗಳಿಗೆ ಹಾಜರಾಗಲು ಸುಮಾರು ₹ 4 ಲಕ್ಷ ಹಣ ಠೇವಣಿ ಇಡಬೇಕು ಎನ್ನುವ ಆದೇಶವನ್ನು ಮರುಪರಿಶೀಲಿಸಲು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದ ಸಂಸದ ಅಬ್ದುಲ್ ರಶೀದ್ ಸಲ್ಲಿಸಿದ್ದ ಅರ್ಜಿಗೆ ದೆಹಲಿ ಹೈಕೋರ್ಟ್ ಭಿನ್ನಮತದ ತೀರ್ಪು ನೀಡಿದೆ.</p>.ಸಂಸತ್ತಿಗೆ ತೆರಳಲು ಅನುಮತಿ ಕೋರಿದ MP ರಶೀದ್: NIA ನಿಲುವು ಪ್ರಶ್ನಿಸಿದ ದೆಹಲಿ HC.<p>ನ್ಯಾಯಮೂರ್ತಿ ವಿವೇಕ್ ಚೌಧರಿ ಅರ್ಜಿಯನ್ನು ತಿರಸ್ಕರಿಸಿದರೆ, ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅರ್ಜಿಯನ್ನು ಪುರಸ್ಕರಿಸಿದ್ದಾರೆ.</p><p>‘ನಾಬಿಬ್ಬರು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ನಾಬಿಬ್ಬರು ಪ್ರತ್ಯೇಕ ತೀರ್ಪು ನೀಡಿದ್ದೇವೆ. ಸೂಕ್ತ ಆದೇಶಕ್ಕಾಗಿ ನಾವು ಇದನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇಡುತ್ತೇವೆ’ ಎಂದು ಉಭಯ ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಹೇಳಿದ್ದಾರೆ.</p><p>‘ನನ್ನ ಸಹೋದರ ಈ (ಜೆ ಭಂಭಾನಿ) ಅರ್ಜಿಯನ್ನು ಪುರಸ್ಕರಿಸಿದ್ದಾರೆ, ನಾನು ತಿರಸ್ಕರಿಸಿದ್ದೇನೆ’ ಎಂದು ನ್ಯಾಯಮೂರ್ತಿ ಚೌಧರಿ ಹೇಳಿದ್ದಾರೆ.</p>.ಶೆಹ್ಲಾ ರಶೀದ್ ಮೇಲಿನ ದೇಶದ್ರೋಹ ಪ್ರಕರಣ ಹಿಂಪಡೆಯಲು ಕೋರ್ಟ್ ಅನುಮತಿ .<p>ಕಸ್ಟಡಿಯಲ್ಲಿದ್ದುಕೊಂಡು ಸಂಸತ್ ಕಲಾಪಗಳಿಗೆ ಹಾಜರಾಗಬೇಕಾದರೆ ಸುಮಾರು ₹ 4 ಲಕ್ಷ ಠೇವಣಿ ಇಡಬೇಕು ಎಂದು ಮಾರ್ಚ್ 25 ರಂದು ಕೋರ್ಟ್ ತೀರ್ಪು ನೀಡಿತ್ತು.</p><p>ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣದಲ್ಲಿ ಎನ್ಐಎಯಿಂದ ಬಂಧಿರಾಗಿರುವ ಅವರು, 2019ರಿಂದ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಲು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಅವರಿಗೆ ಒಂದು ತಿಂಗಳ ಮಧ್ಯಂತರ ಜಾಮೀನು ನೀಡಲಾಗಿತ್ತು.</p><p>2024 ರ ಲೋಕಸಭಾ ಚುನಾವಣೆಯಲ್ಲಿ ಒಮರ್ ಅಬ್ದುಲ್ಲಾ ಅವರನ್ನು ಸೋಲಿಸಿದ್ದರು.</p> .ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ರಶೀದ್ ಎಂಜಿನಿಯರ್ಗೆ 2 ದಿನ ಕಸ್ಟಡಿ ಪೆರೋಲ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>