ಎಐಸಿಸಿ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ‘ನೋಟು ರದ್ದತಿಯ ತೀರ್ಮಾನ ಹಾಗೂ ಕೆಟ್ಟದ್ದಾಗಿ ರೂಪಿಸಿದ್ದ ಜಿಎಸ್ಟಿ ವ್ಯವಸ್ಥೆಯು ದೇಶದಲ್ಲಿ ಉದ್ಯೋಗ ಸೃಷ್ಟಿಸುತ್ತಿದ್ದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳನ್ನು ಇಲ್ಲವಾಗಿಸಿತು’ ಎಂದು ದೂರಿದ್ದಾರೆ. 2013ರಲ್ಲಿ ಶುರುವಾಗಿದ್ದ ಆರ್ಥಿಕ ಪುನಶ್ಚೇತನವನ್ನು ಕೊನೆಗೊಳಿಸಿತು, 45 ವರ್ಷಗಳ ಗರಿಷ್ಠ ಪ್ರಮಾಣದ ನಿರುದ್ಯೋಗಕ್ಕೆ ಕಾರಣವಾಯಿತು ಎಂದು ಕೂಡ ರಮೇಶ್ ದೂರಿದ್ದಾರೆ.