<p><strong>ಲಖನೌ</strong>: ಸನಾತನ ಧರ್ಮ ಪರಿಪಾಲನೆಗೆ ಏನು ಮಾಡಬೇಕು, ಏನು ಮಾಡಬಾರದು ಹಾಗೂ ವೇದಜ್ಞಾನ ಹರಡಲು ಏನು ಮಾಡಬೇಕು ಎಂಬುದೂ ಸೇರಿ ಹಲವು ಅಂಶಗಳನ್ನು ಒಳ ಗೊಂಡಿರುವ ‘ಹಿಂದೂ ನೀತಿ ಸಂಹಿತೆ’ಯು ಕುಂಭಮೇಳದಲ್ಲಿ ಇದೇ 27ರಂದು ಬಿಡುಗಡೆಯಾಗಲಿದೆ.</p><p>ವಾರಾಣಸಿಯಲ್ಲಿನ ಕಾಶಿ ವಿದ್ವತ್ ಪರಿಷತ್ ಇದನ್ನು ಸಿದ್ಧಪಡಿಸಿದೆ. ವಿಶ್ವ ಹಿಂದೂ ಪರಿಷತ್ ಪ್ರಾಯೋಜಿಸಿರುವ, ಮಠಾಧೀಶರ ಸಭೆಯಲ್ಲಿ ಮುನ್ನೂರು ಪುಟಗಳ ‘ಹಿಂದೂ ನೀತಿ ಸಂಹಿತೆ’ಯ ಕುರಿತು ಶನಿವಾರದಿಂದ ಚರ್ಚೆ ನಡೆಯಲಿದೆ ಎನ್ನಲಾಗಿದೆ.</p><p>ದೇಶದ ವಿವಿಧ ಮಠಾಧೀಶರು ಕಳೆದ 15 ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿರುವ ವಿಚಾರಗಳನ್ನು ಒಳಗೊಂಡ ‘ಹಿಂದೂ ನೀತಿ ಸಂಹಿತೆ’ಯಲ್ಲಿನ ಸಾರಾಂಶ ಏನು ಎನ್ನುವುದು ಅಧಿಕೃತವಾಗಿ ಬಹಿರಂಗವಾಗಿಲ್ಲ.</p><p>ಹಿಂದೂಗಳ ಸಾಮಾಜಿಕ ಬದುಕು ಹೇಗಿರಬೇಕು ಹಾಗೂ ರೀತಿ–ರಿವಾಜುಗಳನ್ನು ಹೇಗೆಲ್ಲ ಪಾಲಿಸಬೇಕು ಎನ್ನುವುದನ್ನು ನೀತಿ ಸಂಹಿತೆಯು ಒಳಗೊಳ್ಳಲಿದೆ ಎಂದಷ್ಟೆ ಅಖಿಲ ಭಾರತ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಸರಸ್ವತಿ ಹೇಳಿದರು.</p><p>ಪುರಾಣಗಳ ಉಲ್ಲೇಖಗಳನ್ನು ಆಧರಿಸಿ ನೀತಿ ಸಂಹಿತೆ ರೂಪಿಸಲಾಗಿದೆ ಎನ್ನಲಾಗಿದ್ದು, ಕರ್ಮ ಸಿದ್ಧಾಂತವನ್ನೇ ಹೆಚ್ಚಾಗಿ ಆಧರಿಸಿದೆ ಎಂದೂ ಹೇಳಲಾಗಿದೆ.</p><p>ಕುಂಭಮೇಳದಲ್ಲಿ ಹಿಂದೂ ನೀತಿ ಸಂಹಿತೆಯ ಸಾವಿರಾರು ಪ್ರತಿಗಳನ್ನು ಮುದ್ರಿಸಿ, ಮಾರಾಟ ಮಾಡುವ ಉದ್ದೇಶವೂ ಮಠಾಧೀಶರಿಗೆ ಇದೆ.</p>.<div><blockquote>ಸಾಮರಸ್ಯ ಮತ್ತು ಏಕತೆಗೆ ಸಂಬಂಧಿಸಿದಂತೆ ಮಹಾಕುಂಭ ಮೇಳವು ನೀಡುವಷ್ಟು ಪ್ರಬಲ ಸಂದೇಶವನ್ನು ವಿಶ್ವದ ಯಾವುದೇ ಕಾರ್ಯಕ್ರಮ ನೀಡುವುದಿಲ್ಲ </blockquote><span class="attribution">ಅಮಿತ್ ಶಾ, ಗೃಹ ಸಚಿವ</span></div>.<p><strong>ಸಂಹಿತೆಯಲ್ಲಿ ಇರಲಿವೆ ಎನ್ನಲಾದ ಅಂಶಗಳು...</strong></p><ul><li><p>ರಾತ್ರಿ ಹೊತ್ತು ಹಿಂದೂ ವಿವಾಹಗಳನ್ನು ನಡೆಸಕೂಡದು. ಸೂರ್ಯರಶ್ಮಿಯಲ್ಲಿ ವಿವಾಹ ನಡೆಸುವುದೇ ಸನಾತನ ಧರ್ಮದ ಪ್ರಕಾರ ಶ್ರೇಷ್ಠ</p></li><li><p>ಹೆಣ್ಣುಭ್ರೂಣ ಹತ್ಯೆ ಕೂಡದು. ಮಹಿಳೆ, ಪುರುಷರು ಸಮಾನರು. ಮಹಿಳೆಯರು ಯಜ್ಞವನ್ನೂ ಮಾಡಬಹುದು</p></li><li><p>ಪರಿಶಿಷ್ಟ ಜಾತಿಯವರಿಗೆ ದೇವಸ್ಥಾನ ಪ್ರವೇಶಿಸದಂತೆ ನಿರ್ಬಂಧಿಸ<br>ಕೂಡದು. ವೇದಗಳಲ್ಲಿ ಜಾತಿಯ ಕಾರಣದಿಂದಾಗಿ ಅಸ್ಪೃಶ್ಯತೆಯ ಪ್ರತಿಪಾದನೆ ಇಲ್ಲ. ಅದು ಗುಲಾಮಗಿರಿಯ ವ್ಯವಸ್ಥೆಯ ಫಲ</p></li><li><p>ಬೇರೆ ಧರ್ಮಗಳಿಗೆ ಮತಾಂತರ ಹೊಂದಿದ ಹಿಂದೂಗಳು ತಮ್ಮ ಧರ್ಮಕ್ಕೆ ಇಚ್ಛಾನುಸಾರ ಮರಳುವ ‘ಘರ್ ವಾಪಸಿ’ಯನ್ನು (ವಿಎಚ್ಪಿ ಹೇಳುವ ಪದಪುಂಜ) ಸರಳಗೊಳಿಸಲಾಗುವುದು</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಸನಾತನ ಧರ್ಮ ಪರಿಪಾಲನೆಗೆ ಏನು ಮಾಡಬೇಕು, ಏನು ಮಾಡಬಾರದು ಹಾಗೂ ವೇದಜ್ಞಾನ ಹರಡಲು ಏನು ಮಾಡಬೇಕು ಎಂಬುದೂ ಸೇರಿ ಹಲವು ಅಂಶಗಳನ್ನು ಒಳ ಗೊಂಡಿರುವ ‘ಹಿಂದೂ ನೀತಿ ಸಂಹಿತೆ’ಯು ಕುಂಭಮೇಳದಲ್ಲಿ ಇದೇ 27ರಂದು ಬಿಡುಗಡೆಯಾಗಲಿದೆ.</p><p>ವಾರಾಣಸಿಯಲ್ಲಿನ ಕಾಶಿ ವಿದ್ವತ್ ಪರಿಷತ್ ಇದನ್ನು ಸಿದ್ಧಪಡಿಸಿದೆ. ವಿಶ್ವ ಹಿಂದೂ ಪರಿಷತ್ ಪ್ರಾಯೋಜಿಸಿರುವ, ಮಠಾಧೀಶರ ಸಭೆಯಲ್ಲಿ ಮುನ್ನೂರು ಪುಟಗಳ ‘ಹಿಂದೂ ನೀತಿ ಸಂಹಿತೆ’ಯ ಕುರಿತು ಶನಿವಾರದಿಂದ ಚರ್ಚೆ ನಡೆಯಲಿದೆ ಎನ್ನಲಾಗಿದೆ.</p><p>ದೇಶದ ವಿವಿಧ ಮಠಾಧೀಶರು ಕಳೆದ 15 ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿರುವ ವಿಚಾರಗಳನ್ನು ಒಳಗೊಂಡ ‘ಹಿಂದೂ ನೀತಿ ಸಂಹಿತೆ’ಯಲ್ಲಿನ ಸಾರಾಂಶ ಏನು ಎನ್ನುವುದು ಅಧಿಕೃತವಾಗಿ ಬಹಿರಂಗವಾಗಿಲ್ಲ.</p><p>ಹಿಂದೂಗಳ ಸಾಮಾಜಿಕ ಬದುಕು ಹೇಗಿರಬೇಕು ಹಾಗೂ ರೀತಿ–ರಿವಾಜುಗಳನ್ನು ಹೇಗೆಲ್ಲ ಪಾಲಿಸಬೇಕು ಎನ್ನುವುದನ್ನು ನೀತಿ ಸಂಹಿತೆಯು ಒಳಗೊಳ್ಳಲಿದೆ ಎಂದಷ್ಟೆ ಅಖಿಲ ಭಾರತ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಸರಸ್ವತಿ ಹೇಳಿದರು.</p><p>ಪುರಾಣಗಳ ಉಲ್ಲೇಖಗಳನ್ನು ಆಧರಿಸಿ ನೀತಿ ಸಂಹಿತೆ ರೂಪಿಸಲಾಗಿದೆ ಎನ್ನಲಾಗಿದ್ದು, ಕರ್ಮ ಸಿದ್ಧಾಂತವನ್ನೇ ಹೆಚ್ಚಾಗಿ ಆಧರಿಸಿದೆ ಎಂದೂ ಹೇಳಲಾಗಿದೆ.</p><p>ಕುಂಭಮೇಳದಲ್ಲಿ ಹಿಂದೂ ನೀತಿ ಸಂಹಿತೆಯ ಸಾವಿರಾರು ಪ್ರತಿಗಳನ್ನು ಮುದ್ರಿಸಿ, ಮಾರಾಟ ಮಾಡುವ ಉದ್ದೇಶವೂ ಮಠಾಧೀಶರಿಗೆ ಇದೆ.</p>.<div><blockquote>ಸಾಮರಸ್ಯ ಮತ್ತು ಏಕತೆಗೆ ಸಂಬಂಧಿಸಿದಂತೆ ಮಹಾಕುಂಭ ಮೇಳವು ನೀಡುವಷ್ಟು ಪ್ರಬಲ ಸಂದೇಶವನ್ನು ವಿಶ್ವದ ಯಾವುದೇ ಕಾರ್ಯಕ್ರಮ ನೀಡುವುದಿಲ್ಲ </blockquote><span class="attribution">ಅಮಿತ್ ಶಾ, ಗೃಹ ಸಚಿವ</span></div>.<p><strong>ಸಂಹಿತೆಯಲ್ಲಿ ಇರಲಿವೆ ಎನ್ನಲಾದ ಅಂಶಗಳು...</strong></p><ul><li><p>ರಾತ್ರಿ ಹೊತ್ತು ಹಿಂದೂ ವಿವಾಹಗಳನ್ನು ನಡೆಸಕೂಡದು. ಸೂರ್ಯರಶ್ಮಿಯಲ್ಲಿ ವಿವಾಹ ನಡೆಸುವುದೇ ಸನಾತನ ಧರ್ಮದ ಪ್ರಕಾರ ಶ್ರೇಷ್ಠ</p></li><li><p>ಹೆಣ್ಣುಭ್ರೂಣ ಹತ್ಯೆ ಕೂಡದು. ಮಹಿಳೆ, ಪುರುಷರು ಸಮಾನರು. ಮಹಿಳೆಯರು ಯಜ್ಞವನ್ನೂ ಮಾಡಬಹುದು</p></li><li><p>ಪರಿಶಿಷ್ಟ ಜಾತಿಯವರಿಗೆ ದೇವಸ್ಥಾನ ಪ್ರವೇಶಿಸದಂತೆ ನಿರ್ಬಂಧಿಸ<br>ಕೂಡದು. ವೇದಗಳಲ್ಲಿ ಜಾತಿಯ ಕಾರಣದಿಂದಾಗಿ ಅಸ್ಪೃಶ್ಯತೆಯ ಪ್ರತಿಪಾದನೆ ಇಲ್ಲ. ಅದು ಗುಲಾಮಗಿರಿಯ ವ್ಯವಸ್ಥೆಯ ಫಲ</p></li><li><p>ಬೇರೆ ಧರ್ಮಗಳಿಗೆ ಮತಾಂತರ ಹೊಂದಿದ ಹಿಂದೂಗಳು ತಮ್ಮ ಧರ್ಮಕ್ಕೆ ಇಚ್ಛಾನುಸಾರ ಮರಳುವ ‘ಘರ್ ವಾಪಸಿ’ಯನ್ನು (ವಿಎಚ್ಪಿ ಹೇಳುವ ಪದಪುಂಜ) ಸರಳಗೊಳಿಸಲಾಗುವುದು</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>