ಕೋಲ್ಕತ್ತ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಬುಧವಾರ ರಾತ್ರಿ 9 ಗಂಟೆಗೆ ಅಂಪನ್ ಚಂಡಮಾರುತ ಅಬ್ಬರಿಸಿತ್ತು.ಇಲ್ಲಿನ ಬೈನಾರ ಗ್ರಾಮದಲ್ಲಿ ಗುಡಿಸಲೊಂದರಲ್ಲಿ ವಾಸವಾಗಿದ್ದ ಹಿರಿಯ ನಾಗರಿಕರಾದಅಂಜಲಿ ಬೈದ್ಯ ಮತ್ತು ನಿರಂಜನ್ ಬೈದ್ಯ ಅಪಾಯ ಅರಿತು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಹೋಗಲು ನಿರ್ಧರಿಸಿದರು. ಗುಡಿಸಲ ಪಕ್ಕದಲ್ಲಿ ದಸ ನದಿ ಉಕ್ಕಿ ಹರಿಯುತ್ತಿತ್ತು. ಕ್ಷಣ ಕ್ಷಣಕ್ಕೂ ಚಂಡಮಾರುತದ ವೇಗ ಬದಲಾಗುತ್ತಲೇ ಇತ್ತು.