ಗುಜರಾತ್ನ ದ್ವಾರಕಾದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶವನ್ನು ದೀರ್ಘಕಾಲ ಆಳಿದದವರಿಗೆ ದೇಶದ ಜನರಿಗೆ ಸೌಲಭ್ಯ ಒದಗಿಸುವ ಶಕ್ತಿ, ಉದ್ದೇಶ ಹಾಗೂ ಸಮರ್ಪಣಾ ಮನೋಭಾವ ಇರಲಿಲ್ಲ’ ಎಂದು ಅವರು ದೂರಿದರು.
‘ಎಲ್ಲವನ್ನೂ ಒಂದು ಕುಟುಂಬಕ್ಕಾಗಿ ಮಾಡಿದರು. ಅವರಿಗೆ ದೇಶ ನೆನಪಿರಲು ಹೇಗೆ ಸಾಧ್ಯ? ಐದು ವರ್ಷ ಸರ್ಕಾರ ಹೇಗೆ ನಡೆಸಬೇಕು? ಹಗರಣಗಳನ್ನು ಹೇಗೆ ಮುಚ್ಚಿಡಬೇಕು ಎನ್ನುವುದಕ್ಕೇ ಇಡೀ ಶಕ್ತಿಯನ್ನು ಕಾಂಗ್ರೆಸ್ ಪೋಲು ಮಾಡಿದೆ’ ಎಂದರು.