<p><strong>ದೇವಭೂಮಿ ದ್ವಾರಕಾ:</strong> ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಒಂದು ಕುಟುಂಬದ ಉದ್ಧಾರಕ್ಕಾಗಿ ಇಡೀ ಶಕ್ತಿಯನ್ನು ವ್ಯಯಿಸಲಾಗುತ್ತಿದೆ’ ಎಂದು ಹೇಳಿದರು.</p><p>‘ಕಾಂಗ್ರೆಸ್ ಅವಧಿಯಲ್ಲಿ ಏಲ್ಲಾ ರೀತಿಯ ಹಗರಣಗಳು ನಡೆಯುತ್ತಿದ್ದವು. ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಸರ್ಕಾರ ಅವೆಲ್ಲವನ್ನೂ ನಿಲ್ಲಿಸಿದೆ’ ಎಂದು ಹೇಳಿದರು.</p>.ಫೆ. 27ರಂದು ಪ್ರಧಾನಿ ನರೇಂದ್ರ ಮೋದಿ ಕೇರಳ ಪ್ರವಾಸ: ವರ್ಷದಲ್ಲಿ ಮೂರನೇ ಭೇಟಿ.<p>ಗುಜರಾತ್ನ ದ್ವಾರಕಾದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.</p><p>‘ದೇಶವನ್ನು ದೀರ್ಘಕಾಲ ಆಳಿದದವರಿಗೆ ದೇಶದ ಜನರಿಗೆ ಸೌಲಭ್ಯ ಒದಗಿಸುವ ಶಕ್ತಿ, ಉದ್ದೇಶ ಹಾಗೂ ಸಮರ್ಪಣಾ ಮನೋಭಾವ ಇರಲಿಲ್ಲ’ ಎಂದು ಅವರು ದೂರಿದರು.</p><p>‘ಎಲ್ಲವನ್ನೂ ಒಂದು ಕುಟುಂಬಕ್ಕಾಗಿ ಮಾಡಿದರು. ಅವರಿಗೆ ದೇಶ ನೆನಪಿರಲು ಹೇಗೆ ಸಾಧ್ಯ? ಐದು ವರ್ಷ ಸರ್ಕಾರ ಹೇಗೆ ನಡೆಸಬೇಕು? ಹಗರಣಗಳನ್ನು ಹೇಗೆ ಮುಚ್ಚಿಡಬೇಕು ಎನ್ನುವುದಕ್ಕೇ ಇಡೀ ಶಕ್ತಿಯನ್ನು ಕಾಂಗ್ರೆಸ್ ಪೋಲು ಮಾಡಿದೆ’ ಎಂದರು.</p>.ವಾರಾಣಸಿ: ಹೆದ್ದಾರಿ ಪರಿಶೀಲಿಸಿದ ಪ್ರಧಾನಿ ನರೇಂದ್ರ ಮೋದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವಭೂಮಿ ದ್ವಾರಕಾ:</strong> ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಒಂದು ಕುಟುಂಬದ ಉದ್ಧಾರಕ್ಕಾಗಿ ಇಡೀ ಶಕ್ತಿಯನ್ನು ವ್ಯಯಿಸಲಾಗುತ್ತಿದೆ’ ಎಂದು ಹೇಳಿದರು.</p><p>‘ಕಾಂಗ್ರೆಸ್ ಅವಧಿಯಲ್ಲಿ ಏಲ್ಲಾ ರೀತಿಯ ಹಗರಣಗಳು ನಡೆಯುತ್ತಿದ್ದವು. ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಸರ್ಕಾರ ಅವೆಲ್ಲವನ್ನೂ ನಿಲ್ಲಿಸಿದೆ’ ಎಂದು ಹೇಳಿದರು.</p>.ಫೆ. 27ರಂದು ಪ್ರಧಾನಿ ನರೇಂದ್ರ ಮೋದಿ ಕೇರಳ ಪ್ರವಾಸ: ವರ್ಷದಲ್ಲಿ ಮೂರನೇ ಭೇಟಿ.<p>ಗುಜರಾತ್ನ ದ್ವಾರಕಾದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.</p><p>‘ದೇಶವನ್ನು ದೀರ್ಘಕಾಲ ಆಳಿದದವರಿಗೆ ದೇಶದ ಜನರಿಗೆ ಸೌಲಭ್ಯ ಒದಗಿಸುವ ಶಕ್ತಿ, ಉದ್ದೇಶ ಹಾಗೂ ಸಮರ್ಪಣಾ ಮನೋಭಾವ ಇರಲಿಲ್ಲ’ ಎಂದು ಅವರು ದೂರಿದರು.</p><p>‘ಎಲ್ಲವನ್ನೂ ಒಂದು ಕುಟುಂಬಕ್ಕಾಗಿ ಮಾಡಿದರು. ಅವರಿಗೆ ದೇಶ ನೆನಪಿರಲು ಹೇಗೆ ಸಾಧ್ಯ? ಐದು ವರ್ಷ ಸರ್ಕಾರ ಹೇಗೆ ನಡೆಸಬೇಕು? ಹಗರಣಗಳನ್ನು ಹೇಗೆ ಮುಚ್ಚಿಡಬೇಕು ಎನ್ನುವುದಕ್ಕೇ ಇಡೀ ಶಕ್ತಿಯನ್ನು ಕಾಂಗ್ರೆಸ್ ಪೋಲು ಮಾಡಿದೆ’ ಎಂದರು.</p>.ವಾರಾಣಸಿ: ಹೆದ್ದಾರಿ ಪರಿಶೀಲಿಸಿದ ಪ್ರಧಾನಿ ನರೇಂದ್ರ ಮೋದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>