‘ಜೈಲುಗಳಲ್ಲಿ ಕೈದಿಗಳ ಸಂಖ್ಯೆಯು ವಿಪರೀತ ಆಗುತ್ತಿರುವ ಸಮಸ್ಯೆಗೆ ಒಂದು ಪರಿಹಾರ ಮುಕ್ತ ಜೈಲುಗಳನ್ನು ಸ್ಥಾಪಿಸುವುದು. ಈ ವ್ಯವಸ್ಥೆಯು ರಾಜಸ್ಥಾನದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ’ ಎಂದು ಪೀಠವು ಹೇಳಿದೆ. ಆದರೆ, ಜೈಲುಗಳ ಸುಧಾರಣೆಗೆ ಸಂಬಂಧಿಸಿದ ವಿಚಾರವನ್ನು ತಾನು ಆಲಿಸಲು ಮುಂದಾಗುವುದಿಲ್ಲ, ಅದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಬೇರೆ ಪೀಠಗಳು ಈಗಾಗಲೇ ವಿಚಾರಣೆಗೆ ಎತ್ತಿಕೊಂಡಿವೆ ಎಂಬುದನ್ನು ಪೀಠವು ಸ್ಪಷ್ಟಪಡಿಸಿತು.