<p><strong>ನವಿ ಮುಂಬೈ:</strong> ಆತಿಥೇಯ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಣ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯ ಭಾನುವಾರ ಮಳೆಯಿಂದಾಗಿ ಅಪೂರ್ಣ ಗೊಂಡಿತು. ಎರಡೂ ತಂಡಗಳು ತಲಾ ಒಂದು ಪಾಯಿಂಟ್ ಪಡೆದವು.</p><p>ಇದಕ್ಕೂ ಮೊದಲು, ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯದ ಇನಿಂಗ್ಸ್ ಅನ್ನು 27 ಓವರ್ಗಳಿಗೆ ನಿಗದಿ ಮಾಡಲಾಯಿತು. ರಾಧಾ ಯಾದವ್ (30ಕ್ಕೆ3) ಮತ್ತು ಶ್ರೀಚರಣಿ (23ಕ್ಕೆ2) ಅವರ ಸ್ಪಿನ್ ಮೋಡಿಯ ಮುಂದೆ ಬಾಂಗ್ಲಾ ತಂಡವು 9 ವಿಕೆಟ್ಗಳಿಗೆ 119 ರನ್ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಹರ್ಮನ್ಪ್ರೀತ್ ಕೌರ್ ಬಳಗವು, ಸ್ಮೃತಿ ಮಂದಾನ (ಔಟಾಗದೇ 35) ಹಾಗೂ ಅಮನ್ಜೋತ್ ಕೌರ್ (ಔಟಾಗದೇ 15) ಅವರ ಬಿರುಸಿನ ಆಟದ ನೆರವಿನಿಂದ 8.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿತ್ತು.</p><p>ಆದರೆ, ಮತ್ತೆ ಮಳೆ ಆರಂಭವಾಗಿ ಬಿಡುವಿಲ್ಲದೆ ಸುರಿದಿದ್ದರಿಂದ ಅಂಪೈರ್ ಗಳು ಪಂದ್ಯ ರದ್ದುಗೊಳಿಸಿದರು. ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡಕ್ಕೆ ಈ ಪಂದ್ಯವು ಔಪಚಾರಿಕವಾಗಿತ್ತು.</p><p>ಈ ಮಧ್ಯೆ, ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಅವರು ಫೀಲ್ಡಿಂಗ್ ವೇಳೆ ಪಾದ ಮತ್ತು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದು, ಭಾರತ ತಂಡವನ್ನು ಚಿಂತೆಗೀಡು ಮಾಡಿದೆ. </p><p><strong>ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ:</strong> 27 ಓವರ್ಗಳಲ್ಲಿ 9 ವಿಕೆಟ್ಗಳಿಗೆ 119 (ಶಮೀನ್ ಅಖ್ತರ್ 36, ಶೋಭನಾ ಮೊಸ್ತಾರಿ 26, ಶ್ರೀಚರಣಿ 23ಕ್ಕೆ2, ರಾಧಾ ಯಾದವ್ 30ಕ್ಕೆ3). <strong>ಭಾರತ:</strong> 8.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 57 (ಸ್ಮೃತಿ ಮಂದಾನ ಔಟಾಗದೇ 35, ಅಮನ್ಜೋತ್ ಕೌರ್ ಔಟಾಗದೇ 15). ಫಲಿತಾಂಶ: ಪಂದ್ಯ ರದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವಿ ಮುಂಬೈ:</strong> ಆತಿಥೇಯ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಣ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯ ಭಾನುವಾರ ಮಳೆಯಿಂದಾಗಿ ಅಪೂರ್ಣ ಗೊಂಡಿತು. ಎರಡೂ ತಂಡಗಳು ತಲಾ ಒಂದು ಪಾಯಿಂಟ್ ಪಡೆದವು.</p><p>ಇದಕ್ಕೂ ಮೊದಲು, ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯದ ಇನಿಂಗ್ಸ್ ಅನ್ನು 27 ಓವರ್ಗಳಿಗೆ ನಿಗದಿ ಮಾಡಲಾಯಿತು. ರಾಧಾ ಯಾದವ್ (30ಕ್ಕೆ3) ಮತ್ತು ಶ್ರೀಚರಣಿ (23ಕ್ಕೆ2) ಅವರ ಸ್ಪಿನ್ ಮೋಡಿಯ ಮುಂದೆ ಬಾಂಗ್ಲಾ ತಂಡವು 9 ವಿಕೆಟ್ಗಳಿಗೆ 119 ರನ್ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಹರ್ಮನ್ಪ್ರೀತ್ ಕೌರ್ ಬಳಗವು, ಸ್ಮೃತಿ ಮಂದಾನ (ಔಟಾಗದೇ 35) ಹಾಗೂ ಅಮನ್ಜೋತ್ ಕೌರ್ (ಔಟಾಗದೇ 15) ಅವರ ಬಿರುಸಿನ ಆಟದ ನೆರವಿನಿಂದ 8.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿತ್ತು.</p><p>ಆದರೆ, ಮತ್ತೆ ಮಳೆ ಆರಂಭವಾಗಿ ಬಿಡುವಿಲ್ಲದೆ ಸುರಿದಿದ್ದರಿಂದ ಅಂಪೈರ್ ಗಳು ಪಂದ್ಯ ರದ್ದುಗೊಳಿಸಿದರು. ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡಕ್ಕೆ ಈ ಪಂದ್ಯವು ಔಪಚಾರಿಕವಾಗಿತ್ತು.</p><p>ಈ ಮಧ್ಯೆ, ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಅವರು ಫೀಲ್ಡಿಂಗ್ ವೇಳೆ ಪಾದ ಮತ್ತು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದು, ಭಾರತ ತಂಡವನ್ನು ಚಿಂತೆಗೀಡು ಮಾಡಿದೆ. </p><p><strong>ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ:</strong> 27 ಓವರ್ಗಳಲ್ಲಿ 9 ವಿಕೆಟ್ಗಳಿಗೆ 119 (ಶಮೀನ್ ಅಖ್ತರ್ 36, ಶೋಭನಾ ಮೊಸ್ತಾರಿ 26, ಶ್ರೀಚರಣಿ 23ಕ್ಕೆ2, ರಾಧಾ ಯಾದವ್ 30ಕ್ಕೆ3). <strong>ಭಾರತ:</strong> 8.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 57 (ಸ್ಮೃತಿ ಮಂದಾನ ಔಟಾಗದೇ 35, ಅಮನ್ಜೋತ್ ಕೌರ್ ಔಟಾಗದೇ 15). ಫಲಿತಾಂಶ: ಪಂದ್ಯ ರದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>