<p class="title"><strong>ನವದೆಹಲಿ: </strong>ಕೋವಿಡ್ ಕಾರಣದಿಂದ ತಮ್ಮ ಊರುಗಳಿಗೆ ಮರಳಿ, ಉದ್ಯೋಗದ ಹುಡುಕಾಟದಲ್ಲಿರುವ ಸುಮಾರು 8 ಕೋಟಿ ಕಾರ್ಮಿಕರ ಕೆಲಸದ ಬೇಡಿಕೆಯನ್ನು ಈಡೇರಿಸಲು ‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ’ಯ (ಮನರೇಗಾ) ವ್ಯಾಪ್ತಿ ವಿಸ್ತರಿಸುವಂತೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಆಗ್ರಹಿಸಿದೆ.</p>.<p class="bodytext">ಮನರೇಗಾ ಯೋಜನೆಯನ್ನು ನಂಬಿಕೊಂಡು ಕುಳಿತಿರುವವರು ಬಿಜೆಪಿ ವಿರೋಧಿಗಳಲ್ಲ ಎಂಬ ದೃಷ್ಟಿಕೋನದಲ್ಲಿ ಕೇಂದ್ರ ಸರ್ಕಾರ ನೋಡಬೇಕು ಎಂದಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಯೋಜನೆಯ ಪ್ರಯೋಜನವನ್ನು ವಲಸೆ ಕಾರ್ಮಿಕರಿಗೂ ಮುಟ್ಟಿಸಬೇಕು ಎಂದು ಆಗ್ರಹಿಸಿದ್ದಾರೆ.</p>.<p class="bodytext">‘ಕೋವಿಡ್ ಬಂದೆರಗಿರುವ ಈ ಸಂಕಷ್ಟದ ಸಮಯದಲ್ಲಿ ನರೇಗಾದಂತಹ ಜನಕೇಂದ್ರಿತ ಯೋಜನೆಗಳು ಎಷ್ಟು ಮುಖ್ಯ ಎಂದು ತೋರಿಸಿಕೊಟ್ಟಿವೆ. ಮೋದಿ ನೇತೃತ್ವದ ಸರ್ಕಾರವು ಈ ಯೋಜನೆಗೆ ಹೆಚ್ಚುವರಿಯಾಗಿ ₹40 ಸಾವಿರ ಕೋಟಿ ವಿನಿಯೋಗಿಸಬೇಕು’ ಎಂದು ಸಿಂಗ್ವಿ ಮನವಿ ಮಾಡಿದ್ದಾರೆ.</p>.<p class="bodytext">‘ಮನರೇಗಾ ಕಾಂಗ್ರೆಸ್ನ ಮಹತ್ವದ ಯೋಜನೆ. ಇದು ವಿಶ್ವದ ಅತಿದೊಡ್ಡ ಸಮಾಜ ಕಲ್ಯಾಣ ಯೋಜನೆ ಮತ್ತು ಅತ್ಯಂತ ಪರಿಣಾಮಕಾರಿ ಸರ್ಕಾರಿ ಯೋಜನೆ ಎಂದು ಸಾಬೀತಾಗಿದೆ. ಈ ಯೋಜನೆ ಮೂಲಕ ನೀವು ದೇಶಕ್ಕೆ ಎಷ್ಟು ಒಳ್ಳೆಯದನ್ನು ಮಾಡಬಹುದು ಎಂಬುದನ್ನು ಯೋಚಿಸಿ. ನಮ್ಮ ಸಲಹೆಗಳನ್ನು ವಿರೋಧಾತ್ಮಕವಾಗಿ ಪರಿಗಣಿಸಬೇಡಿ’ ಎಂದು ಮೋದಿ ಅವರಿಗೆ ಸಿಂಗ್ವಿ ಸಲಹೆ ನೀಡಿದ್ದಾರೆ.</p>.<p class="bodytext">ಕಳೆದ ಮೇ ತಿಂಗಳಲ್ಲಿ 2.19 ಕೋಟಿ ಕುಟುಂಬಗಳು ಯೋಜನೆಯ ಲಾಭ ಪಡೆದುಕೊಂಡಿವೆ. ಕಳೆದ ಎಂಟು ವರ್ಷಗಳಲ್ಲೇ ಇದು ಅಧಿಕ. ಯೋಜನೆ ಪ್ರಾರಂಭಗೊಂಡ ದಿನದಿಂದ ಈವರೆಗೆ ಸುಮಾರು 12 ಕೋಟಿ ಜನರಿಗೆ ಯೋಜನೆ ಅನುಕೂಲ ಕಲ್ಪಿಸಿದೆ ಎಂದು ಅವರು ಹೇಳಿದ್ದಾರೆ.</p>.<p class="bodytext">ಕೆಲಸದ ಸ್ವರೂಪ ನಿರ್ಧರಿಸುವ ಅಧಿಕಾರವನ್ನು ಗ್ರಾಮಸಭೆಗಳಿಗೆ ನೀಡಬೇಕು. ಸ್ಥಳೀಯ ಚುನಾಯಿತ ಸಂಸ್ಥೆಗಳಿಗೆ ಸ್ಥಳೀಯ ಬೇಡಿಕೆ, ಕಾರ್ಮಿಕರ ಸ್ಥಿತಿ ಮತ್ತು ಅವರ ಅಗತ್ಯಗಳ ಅರಿವು ಇರುತ್ತದೆ ಎಂದಿದ್ದಾರೆ.</p>.<p class="bodytext">ಪತ್ರಿಕೆಯೊಂದಕ್ಕೆ ಲೇಖನ ಬರೆದಿರುವಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು,‘ಇದು ಬಿಜೆಪಿ ವರ್ಸಸ್ ಕಾಂಗ್ರೆಸ್ ಅಲ್ಲ. ಮನರೇಗಾ ಯೋಜನೆಯು ದೇಶದ ಜನರಿಗೆ ಉಪಯುಕ್ತ ಆಗಬೇಕು’ ಎಂದುಉಲ್ಲೇಖಿಸಿದ್ದರು.</p>.<p>‘ಮೋದಿ ಸರ್ಕಾರಕ್ಕೆ ಯೋಜನೆ ಮಹತ್ವವು ನಿಧಾನವಾಗಿ ಅರಿವಾಗುತ್ತಿದೆ. ಇದು ರಾಜಕೀಯ ಮಾಡುವ ಹೊತ್ತಲ್ಲ. ನಿಮ್ಮ ಕೈಯಲ್ಲಿ ದೊಡ್ಡ ಅಸ್ತ್ರವೊಂದಿದೆ. ಅಗತ್ಯದ ಸಮಯದಲ್ಲಿ ಅದನ್ನು ಜನರಿಗೆ ಉಪಯೋಗಕ್ಕಾಗಿ ಬಳಸಿ’ ಎಂದು ಸೋನಿಯಾ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ: </strong>ಕೋವಿಡ್ ಕಾರಣದಿಂದ ತಮ್ಮ ಊರುಗಳಿಗೆ ಮರಳಿ, ಉದ್ಯೋಗದ ಹುಡುಕಾಟದಲ್ಲಿರುವ ಸುಮಾರು 8 ಕೋಟಿ ಕಾರ್ಮಿಕರ ಕೆಲಸದ ಬೇಡಿಕೆಯನ್ನು ಈಡೇರಿಸಲು ‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ’ಯ (ಮನರೇಗಾ) ವ್ಯಾಪ್ತಿ ವಿಸ್ತರಿಸುವಂತೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಆಗ್ರಹಿಸಿದೆ.</p>.<p class="bodytext">ಮನರೇಗಾ ಯೋಜನೆಯನ್ನು ನಂಬಿಕೊಂಡು ಕುಳಿತಿರುವವರು ಬಿಜೆಪಿ ವಿರೋಧಿಗಳಲ್ಲ ಎಂಬ ದೃಷ್ಟಿಕೋನದಲ್ಲಿ ಕೇಂದ್ರ ಸರ್ಕಾರ ನೋಡಬೇಕು ಎಂದಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಯೋಜನೆಯ ಪ್ರಯೋಜನವನ್ನು ವಲಸೆ ಕಾರ್ಮಿಕರಿಗೂ ಮುಟ್ಟಿಸಬೇಕು ಎಂದು ಆಗ್ರಹಿಸಿದ್ದಾರೆ.</p>.<p class="bodytext">‘ಕೋವಿಡ್ ಬಂದೆರಗಿರುವ ಈ ಸಂಕಷ್ಟದ ಸಮಯದಲ್ಲಿ ನರೇಗಾದಂತಹ ಜನಕೇಂದ್ರಿತ ಯೋಜನೆಗಳು ಎಷ್ಟು ಮುಖ್ಯ ಎಂದು ತೋರಿಸಿಕೊಟ್ಟಿವೆ. ಮೋದಿ ನೇತೃತ್ವದ ಸರ್ಕಾರವು ಈ ಯೋಜನೆಗೆ ಹೆಚ್ಚುವರಿಯಾಗಿ ₹40 ಸಾವಿರ ಕೋಟಿ ವಿನಿಯೋಗಿಸಬೇಕು’ ಎಂದು ಸಿಂಗ್ವಿ ಮನವಿ ಮಾಡಿದ್ದಾರೆ.</p>.<p class="bodytext">‘ಮನರೇಗಾ ಕಾಂಗ್ರೆಸ್ನ ಮಹತ್ವದ ಯೋಜನೆ. ಇದು ವಿಶ್ವದ ಅತಿದೊಡ್ಡ ಸಮಾಜ ಕಲ್ಯಾಣ ಯೋಜನೆ ಮತ್ತು ಅತ್ಯಂತ ಪರಿಣಾಮಕಾರಿ ಸರ್ಕಾರಿ ಯೋಜನೆ ಎಂದು ಸಾಬೀತಾಗಿದೆ. ಈ ಯೋಜನೆ ಮೂಲಕ ನೀವು ದೇಶಕ್ಕೆ ಎಷ್ಟು ಒಳ್ಳೆಯದನ್ನು ಮಾಡಬಹುದು ಎಂಬುದನ್ನು ಯೋಚಿಸಿ. ನಮ್ಮ ಸಲಹೆಗಳನ್ನು ವಿರೋಧಾತ್ಮಕವಾಗಿ ಪರಿಗಣಿಸಬೇಡಿ’ ಎಂದು ಮೋದಿ ಅವರಿಗೆ ಸಿಂಗ್ವಿ ಸಲಹೆ ನೀಡಿದ್ದಾರೆ.</p>.<p class="bodytext">ಕಳೆದ ಮೇ ತಿಂಗಳಲ್ಲಿ 2.19 ಕೋಟಿ ಕುಟುಂಬಗಳು ಯೋಜನೆಯ ಲಾಭ ಪಡೆದುಕೊಂಡಿವೆ. ಕಳೆದ ಎಂಟು ವರ್ಷಗಳಲ್ಲೇ ಇದು ಅಧಿಕ. ಯೋಜನೆ ಪ್ರಾರಂಭಗೊಂಡ ದಿನದಿಂದ ಈವರೆಗೆ ಸುಮಾರು 12 ಕೋಟಿ ಜನರಿಗೆ ಯೋಜನೆ ಅನುಕೂಲ ಕಲ್ಪಿಸಿದೆ ಎಂದು ಅವರು ಹೇಳಿದ್ದಾರೆ.</p>.<p class="bodytext">ಕೆಲಸದ ಸ್ವರೂಪ ನಿರ್ಧರಿಸುವ ಅಧಿಕಾರವನ್ನು ಗ್ರಾಮಸಭೆಗಳಿಗೆ ನೀಡಬೇಕು. ಸ್ಥಳೀಯ ಚುನಾಯಿತ ಸಂಸ್ಥೆಗಳಿಗೆ ಸ್ಥಳೀಯ ಬೇಡಿಕೆ, ಕಾರ್ಮಿಕರ ಸ್ಥಿತಿ ಮತ್ತು ಅವರ ಅಗತ್ಯಗಳ ಅರಿವು ಇರುತ್ತದೆ ಎಂದಿದ್ದಾರೆ.</p>.<p class="bodytext">ಪತ್ರಿಕೆಯೊಂದಕ್ಕೆ ಲೇಖನ ಬರೆದಿರುವಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು,‘ಇದು ಬಿಜೆಪಿ ವರ್ಸಸ್ ಕಾಂಗ್ರೆಸ್ ಅಲ್ಲ. ಮನರೇಗಾ ಯೋಜನೆಯು ದೇಶದ ಜನರಿಗೆ ಉಪಯುಕ್ತ ಆಗಬೇಕು’ ಎಂದುಉಲ್ಲೇಖಿಸಿದ್ದರು.</p>.<p>‘ಮೋದಿ ಸರ್ಕಾರಕ್ಕೆ ಯೋಜನೆ ಮಹತ್ವವು ನಿಧಾನವಾಗಿ ಅರಿವಾಗುತ್ತಿದೆ. ಇದು ರಾಜಕೀಯ ಮಾಡುವ ಹೊತ್ತಲ್ಲ. ನಿಮ್ಮ ಕೈಯಲ್ಲಿ ದೊಡ್ಡ ಅಸ್ತ್ರವೊಂದಿದೆ. ಅಗತ್ಯದ ಸಮಯದಲ್ಲಿ ಅದನ್ನು ಜನರಿಗೆ ಉಪಯೋಗಕ್ಕಾಗಿ ಬಳಸಿ’ ಎಂದು ಸೋನಿಯಾ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>