<p><strong>ಲಖನೌ:</strong> ‘ಮೊಘಲ್ ದೊರೆ ಔರಂಗಜೇಬ್ನನ್ನು ಹೊಗಳಿದ ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಶಾಸಕ ಅಬೂ ಆಸಿಂ ಆಜ್ಮಿ ಅವರನ್ನು ಪಕ್ಷದಿಂದ ಉಚ್ಛಾಟಿಸಿ, ಉತ್ತರ ಪ್ರದೇಶಕ್ಕೆ ಕರೆತನ್ನಿ. ಇಂಥವರನ್ನು ಹೇಗೆ ‘ಸರಿಪಡಿಸಬೇಕು’ ಎಂಬುದು ನಮಗೆ ಗೊತ್ತಿದೆ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುಡುಗಿದ್ದಾರೆ.</p><p>ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ‘ಇಂಥವರಿಗೆ ಸೂಕ್ತವಾಗುವ ‘ಚಿಕಿತ್ಸೆ’ ಉತ್ತರ ಪ್ರದೇಶದಲ್ಲಿ ಲಭ್ಯ. ಅದನ್ನು ಹೇಗೆ ಕೊಡಬೇಕು ಎಂಬುದೂ ನಮಗೆ ಚೆನ್ನಾಗಿ ಗೊತ್ತಿದೆ’ ಎಂದಿದ್ದಾರೆ.</p><p>‘ಹಿಂದೂಗಳ ಮೇಲೆ ‘ಜಝಿಯಾ’ ಎಂಬ ತೆರಿಗೆ ವಿಧಿಸಿದ್ದ ಹಾಗೂ ತನ್ನ ತಂದೆ ಬಾಯಾರಿದ್ದರೂ ನೀರು ಕೊಡದ ಔರಂಗಜೇಬ್ ಎಂದರೆ ಸಮಾಜವಾದಿ ಪಕ್ಷಕ್ಕೆ ದೇವರಿದ್ದಂತೆ. ಆ ಪಕ್ಷಕ್ಕೆ ತನ್ನ ಶಾಸಕರ ಮೇಲೆ ಹಿಡಿತವೇ ಇಲ್ಲದಂತಾಗಿದೆ. ಅಜೀಂನ ಹೇಳಿಕೆಯನ್ನು ಪಕ್ಷ ಖಂಡಿಸಬೇಕು ಮತ್ತು ಉಚ್ಛಾಟಿಸಬೇಕು’ ಎಂದು ಆಗ್ರಹಿಸಿದ್ದಾರೆ.</p><p>‘ಮೊಘಲ್ ದೊರೆ ಔರಂಗಜೇಬ್ ಒಬ್ಬ ಅದ್ಭುತ ಆಡಳಿತಗಾರ. ಆತ ಮಂದಿರಗಳ ಜತೆಯಲ್ಲಿ ಮಸೀದಿಗಳನ್ನೂ ನೆಲಸಮ ಮಾಡಿದ್ದ. ಮರಾಠಾ ಚಕ್ರವರ್ತಿ ಶಿವಾಜಿ ಮಹಾರಾಜ ಮತ್ತು ಸಾಂಭಾಜಿ ಜೊತೆಗಿನ ಔರಂಗಜೇಬ್ನ ಯುದ್ಧ ರಾಜಕೀಯ ಪ್ರೇರಿತವಾದದ್ದು’ ಎಂದು ಆಜ್ಮಿ ಹೇಳಿಕೆ ನೀಡಿದ್ದರು.</p><p>ಈ ಹೇಳಿಕೆಗಾಗಿ ಮಹಾರಾಷ್ಟ್ರ ವಿಧಾನಸಭೆಯಿಂದ ಆಜ್ಮಿ ಅವರನ್ನು ಅಮಾನತುಗೊಳಿಸಲಾಗಿದೆ. </p><p>ಹೇಳಿಕೆ ವಿವಾದ ಸ್ವರೂಪ ಪಡೆಯುತ್ತಿದ್ದಂತೆ, ‘ತಮ್ಮ ಹೇಳಿಕೆಯನ್ನು ತಿರುಚಲಾಗಿದೆ. ಶಿವಾಜಿ ಅಥವಾ ಸಾಂಭಾಜಿ ಕುರಿತು ತಾನು ಏನನ್ನೂ ಹೇಳಿಲ್ಲ’ ಎಂದು ಸ್ಪಷ್ಟನೆಯನ್ನೂ ನೀಡಿದ್ದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ‘ಮೊಘಲ್ ದೊರೆ ಔರಂಗಜೇಬ್ನನ್ನು ಹೊಗಳಿದ ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಶಾಸಕ ಅಬೂ ಆಸಿಂ ಆಜ್ಮಿ ಅವರನ್ನು ಪಕ್ಷದಿಂದ ಉಚ್ಛಾಟಿಸಿ, ಉತ್ತರ ಪ್ರದೇಶಕ್ಕೆ ಕರೆತನ್ನಿ. ಇಂಥವರನ್ನು ಹೇಗೆ ‘ಸರಿಪಡಿಸಬೇಕು’ ಎಂಬುದು ನಮಗೆ ಗೊತ್ತಿದೆ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುಡುಗಿದ್ದಾರೆ.</p><p>ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ‘ಇಂಥವರಿಗೆ ಸೂಕ್ತವಾಗುವ ‘ಚಿಕಿತ್ಸೆ’ ಉತ್ತರ ಪ್ರದೇಶದಲ್ಲಿ ಲಭ್ಯ. ಅದನ್ನು ಹೇಗೆ ಕೊಡಬೇಕು ಎಂಬುದೂ ನಮಗೆ ಚೆನ್ನಾಗಿ ಗೊತ್ತಿದೆ’ ಎಂದಿದ್ದಾರೆ.</p><p>‘ಹಿಂದೂಗಳ ಮೇಲೆ ‘ಜಝಿಯಾ’ ಎಂಬ ತೆರಿಗೆ ವಿಧಿಸಿದ್ದ ಹಾಗೂ ತನ್ನ ತಂದೆ ಬಾಯಾರಿದ್ದರೂ ನೀರು ಕೊಡದ ಔರಂಗಜೇಬ್ ಎಂದರೆ ಸಮಾಜವಾದಿ ಪಕ್ಷಕ್ಕೆ ದೇವರಿದ್ದಂತೆ. ಆ ಪಕ್ಷಕ್ಕೆ ತನ್ನ ಶಾಸಕರ ಮೇಲೆ ಹಿಡಿತವೇ ಇಲ್ಲದಂತಾಗಿದೆ. ಅಜೀಂನ ಹೇಳಿಕೆಯನ್ನು ಪಕ್ಷ ಖಂಡಿಸಬೇಕು ಮತ್ತು ಉಚ್ಛಾಟಿಸಬೇಕು’ ಎಂದು ಆಗ್ರಹಿಸಿದ್ದಾರೆ.</p><p>‘ಮೊಘಲ್ ದೊರೆ ಔರಂಗಜೇಬ್ ಒಬ್ಬ ಅದ್ಭುತ ಆಡಳಿತಗಾರ. ಆತ ಮಂದಿರಗಳ ಜತೆಯಲ್ಲಿ ಮಸೀದಿಗಳನ್ನೂ ನೆಲಸಮ ಮಾಡಿದ್ದ. ಮರಾಠಾ ಚಕ್ರವರ್ತಿ ಶಿವಾಜಿ ಮಹಾರಾಜ ಮತ್ತು ಸಾಂಭಾಜಿ ಜೊತೆಗಿನ ಔರಂಗಜೇಬ್ನ ಯುದ್ಧ ರಾಜಕೀಯ ಪ್ರೇರಿತವಾದದ್ದು’ ಎಂದು ಆಜ್ಮಿ ಹೇಳಿಕೆ ನೀಡಿದ್ದರು.</p><p>ಈ ಹೇಳಿಕೆಗಾಗಿ ಮಹಾರಾಷ್ಟ್ರ ವಿಧಾನಸಭೆಯಿಂದ ಆಜ್ಮಿ ಅವರನ್ನು ಅಮಾನತುಗೊಳಿಸಲಾಗಿದೆ. </p><p>ಹೇಳಿಕೆ ವಿವಾದ ಸ್ವರೂಪ ಪಡೆಯುತ್ತಿದ್ದಂತೆ, ‘ತಮ್ಮ ಹೇಳಿಕೆಯನ್ನು ತಿರುಚಲಾಗಿದೆ. ಶಿವಾಜಿ ಅಥವಾ ಸಾಂಭಾಜಿ ಕುರಿತು ತಾನು ಏನನ್ನೂ ಹೇಳಿಲ್ಲ’ ಎಂದು ಸ್ಪಷ್ಟನೆಯನ್ನೂ ನೀಡಿದ್ದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>