<p><strong>ರೌರ್ಕೆಲಾ:</strong> ಒಡಿಶಾದ ಸುಂದರಗಢ ಜಿಲ್ಲೆಯಲ್ಲಿ ಕಲ್ಲು ಕ್ವಾರಿಗೆ ಸ್ಫೋಟಕ ಸಾಗಿಸುತ್ತಿದ್ದ ಲಾರಿಯನ್ನು ಶಂಕಿತ ಮಾವೋವಾದಿಗಳು ಮಂಗಳವಾರ ಲೂಟಿ ಮಾಡಿದ್ದಾರೆ.</p>.ಛತ್ತೀಸಗಢ: ಭದ್ರತಾ ಸಿಬ್ಬಂದಿ ಮುಂದೆ ಶರಣಾದ 18 ನಕ್ಸಲರು.<p>ಕೆ. ಬಲಾಂಗ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡು ದಾರಿಯಲ್ಲಿ ಸುಮಾರು 200 ಪೊಟ್ಟಣ ಜಿಲೆಟಿನ್ ಸಾಗಿಸುತ್ತಿದ್ದ ಲಾರಿಯನ್ನು ಶಸ್ತ್ರಸಜ್ಜಿತ, ಮುಸುಕುಧಾರಿ ಗುಂಪೊಂದು ಅಡ್ಡಗಟ್ಟಿ ಲೂಟಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.</p><p>ಜಾರ್ಖಂಡ್ನ ಪೂರ್ವ ಸಿಂಗ್ಭುಮ್ನ ಸರಾಂಡ ಅರಣ್ಯದ ಸಮೀಪ ಘಟನೆ ನಡೆದಿದ್ದು, ನಕ್ಸಲ್ ಪೀಡಿತ ಪ್ರದೇಶವೂ ಹೌದು.</p><p>ಸ್ಫೋಟಕ ತುಂಬಿದ್ದ ಲಾರಿಯು ಬಂಕೊದಿಂದ ಬಡಂಗಾವ್ಗೆ ತೆರಳುತ್ತಿತ್ತು.</p>.ಛತ್ತೀಸಗಢ: ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ನಕ್ಸಲರು ಹತ.<p>ಚಾಲಕನ ಹಣೆಗೆ ಬಂದೂಕು ಇರಿಸಿ ಲಾರಿಯಲ್ಲಿದ್ದ ಸ್ಫೋಟಕಗಳನ್ನು ದೋಚಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.</p><p>ಈ ಬಗ್ಗೆ ಮಾಹಿತಿ ಬಯಸಿ ಒಡಿಶಾ ಡಿಜಿಪಿ ವೈ.ಬಿ. ಖುರಾನಿಯಾ ಅವರನ್ನು ಸಂಪರ್ಕಿಸಲಾಗಿದ್ದು, ಘಟನೆಯಲ್ಲಿ ಮಾವೋವಾದಿಗಳ ಕೈವಾಡವನ್ನು ಅವರು ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲ.</p>.ಛತ್ತೀಸಗಢ | ದಂಪತಿ ಸೇರಿದಂತೆ 19 ನಕ್ಸಲರು ಶರಣು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರೌರ್ಕೆಲಾ:</strong> ಒಡಿಶಾದ ಸುಂದರಗಢ ಜಿಲ್ಲೆಯಲ್ಲಿ ಕಲ್ಲು ಕ್ವಾರಿಗೆ ಸ್ಫೋಟಕ ಸಾಗಿಸುತ್ತಿದ್ದ ಲಾರಿಯನ್ನು ಶಂಕಿತ ಮಾವೋವಾದಿಗಳು ಮಂಗಳವಾರ ಲೂಟಿ ಮಾಡಿದ್ದಾರೆ.</p>.ಛತ್ತೀಸಗಢ: ಭದ್ರತಾ ಸಿಬ್ಬಂದಿ ಮುಂದೆ ಶರಣಾದ 18 ನಕ್ಸಲರು.<p>ಕೆ. ಬಲಾಂಗ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡು ದಾರಿಯಲ್ಲಿ ಸುಮಾರು 200 ಪೊಟ್ಟಣ ಜಿಲೆಟಿನ್ ಸಾಗಿಸುತ್ತಿದ್ದ ಲಾರಿಯನ್ನು ಶಸ್ತ್ರಸಜ್ಜಿತ, ಮುಸುಕುಧಾರಿ ಗುಂಪೊಂದು ಅಡ್ಡಗಟ್ಟಿ ಲೂಟಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.</p><p>ಜಾರ್ಖಂಡ್ನ ಪೂರ್ವ ಸಿಂಗ್ಭುಮ್ನ ಸರಾಂಡ ಅರಣ್ಯದ ಸಮೀಪ ಘಟನೆ ನಡೆದಿದ್ದು, ನಕ್ಸಲ್ ಪೀಡಿತ ಪ್ರದೇಶವೂ ಹೌದು.</p><p>ಸ್ಫೋಟಕ ತುಂಬಿದ್ದ ಲಾರಿಯು ಬಂಕೊದಿಂದ ಬಡಂಗಾವ್ಗೆ ತೆರಳುತ್ತಿತ್ತು.</p>.ಛತ್ತೀಸಗಢ: ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ನಕ್ಸಲರು ಹತ.<p>ಚಾಲಕನ ಹಣೆಗೆ ಬಂದೂಕು ಇರಿಸಿ ಲಾರಿಯಲ್ಲಿದ್ದ ಸ್ಫೋಟಕಗಳನ್ನು ದೋಚಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.</p><p>ಈ ಬಗ್ಗೆ ಮಾಹಿತಿ ಬಯಸಿ ಒಡಿಶಾ ಡಿಜಿಪಿ ವೈ.ಬಿ. ಖುರಾನಿಯಾ ಅವರನ್ನು ಸಂಪರ್ಕಿಸಲಾಗಿದ್ದು, ಘಟನೆಯಲ್ಲಿ ಮಾವೋವಾದಿಗಳ ಕೈವಾಡವನ್ನು ಅವರು ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲ.</p>.ಛತ್ತೀಸಗಢ | ದಂಪತಿ ಸೇರಿದಂತೆ 19 ನಕ್ಸಲರು ಶರಣು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>