<p><strong>ಮುಂಬೈ</strong>: ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಕೆಲವು ಗ್ರಾಮಗಳ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ, ಪರಿಹಾರವಾಗಿ ಕೇವಲ ₹3 ಪಾವತಿಯಾಗಿದೆ. ಇನ್ನು ಕೆಲವರಿಗೆ ₹21 ದೊರೆತಿದೆ. </p>.<p>‘ಅತಿವೃಷ್ಠಿಯಿಂದ ಸಂಕಷ್ಟದಲ್ಲಿರುವ ನಮಗೆ ದೀಪಾವಳಿಗೆ ಮುನ್ನ ಕೇಂದ್ರ ಸರ್ಕಾರ ವಿಮಾ ಪರಿಹಾರವಾಗಿ ₹3 ಪಾವತಿಸುವ ಮೂಲಕ ಅವಮಾನ ಮಾಡಿದೆ ಎಂದು ರೈತರು ಆರೋಪಿಸಿದರು. ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ತಮಗೆ ಬಂದಿರುವ ವಿಮೆ ಪರಿಹಾರವನ್ನು ಚೆಕ್ ರೂಪದಲ್ಲಿ ಸರ್ಕಾರಕ್ಕೇ ಮರಳಿಸಿ ಆಕ್ರೋಶ ವ್ಯಕ್ತಪಡಿಸಿದರು.</p>.<p class="bodytext">‘ದಿನೊಡಾ, ಕಸವಾ ಮತ್ತು ಕುಟಾಸ ಗ್ರಾಮಗಳಲ್ಲಿ ಮಳೆಯಿಂದ ಬೆಳೆ ಸಂಪೂರ್ಣ ಹಾನಿಯಾಗಿದೆ. ಇಲ್ಲಿ ಹೆಚ್ಚಿನ ರೈತರ ಖಾತೆಗಳಿಗೆ ₹3ರಿಂದ ₹21 ಪಾವತಿಯಾಗಿದೆ ಎಂದು ದಿನೊಡಾ ಗ್ರಾಮದ ರೈತರೊಬ್ಬರು ದೂರಿದರು. </p>.<p class="bodytext">‘ರೈತರನ್ನು ಗೌರವಿಸುವುದು ನಿಮಗೆ ತಿಳಿದಿಲ್ಲ. ಆದರೆ, ಅವರನ್ನು ಅವಮಾನಿಸಬೇಡಿ. ವಿಮೆ ಪರಿಹಾರವನ್ನು ಅವರು ಕೇಂದ್ರ ಸರ್ಕಾರಕ್ಕೇ ಮರಳಿಸಿದ್ದಾರೆ’ ಎಂದು ಕಾಂಗ್ರೆಸ್ ಯುವ ಘಟಕದ ವಕ್ತಾರ ಕಪಿಲ್ ಧೋಕೆ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಕೆಲವು ಗ್ರಾಮಗಳ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ, ಪರಿಹಾರವಾಗಿ ಕೇವಲ ₹3 ಪಾವತಿಯಾಗಿದೆ. ಇನ್ನು ಕೆಲವರಿಗೆ ₹21 ದೊರೆತಿದೆ. </p>.<p>‘ಅತಿವೃಷ್ಠಿಯಿಂದ ಸಂಕಷ್ಟದಲ್ಲಿರುವ ನಮಗೆ ದೀಪಾವಳಿಗೆ ಮುನ್ನ ಕೇಂದ್ರ ಸರ್ಕಾರ ವಿಮಾ ಪರಿಹಾರವಾಗಿ ₹3 ಪಾವತಿಸುವ ಮೂಲಕ ಅವಮಾನ ಮಾಡಿದೆ ಎಂದು ರೈತರು ಆರೋಪಿಸಿದರು. ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ತಮಗೆ ಬಂದಿರುವ ವಿಮೆ ಪರಿಹಾರವನ್ನು ಚೆಕ್ ರೂಪದಲ್ಲಿ ಸರ್ಕಾರಕ್ಕೇ ಮರಳಿಸಿ ಆಕ್ರೋಶ ವ್ಯಕ್ತಪಡಿಸಿದರು.</p>.<p class="bodytext">‘ದಿನೊಡಾ, ಕಸವಾ ಮತ್ತು ಕುಟಾಸ ಗ್ರಾಮಗಳಲ್ಲಿ ಮಳೆಯಿಂದ ಬೆಳೆ ಸಂಪೂರ್ಣ ಹಾನಿಯಾಗಿದೆ. ಇಲ್ಲಿ ಹೆಚ್ಚಿನ ರೈತರ ಖಾತೆಗಳಿಗೆ ₹3ರಿಂದ ₹21 ಪಾವತಿಯಾಗಿದೆ ಎಂದು ದಿನೊಡಾ ಗ್ರಾಮದ ರೈತರೊಬ್ಬರು ದೂರಿದರು. </p>.<p class="bodytext">‘ರೈತರನ್ನು ಗೌರವಿಸುವುದು ನಿಮಗೆ ತಿಳಿದಿಲ್ಲ. ಆದರೆ, ಅವರನ್ನು ಅವಮಾನಿಸಬೇಡಿ. ವಿಮೆ ಪರಿಹಾರವನ್ನು ಅವರು ಕೇಂದ್ರ ಸರ್ಕಾರಕ್ಕೇ ಮರಳಿಸಿದ್ದಾರೆ’ ಎಂದು ಕಾಂಗ್ರೆಸ್ ಯುವ ಘಟಕದ ವಕ್ತಾರ ಕಪಿಲ್ ಧೋಕೆ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>