<p><strong>ಪಟ್ನಾ:</strong> ನೇಮಕಾತಿ ಪತ್ರ ವಿತರಣೆ ವೇಳೆ ಆಯುಷ್ ವೈದ್ಯೆಯೊಬ್ಬರು ಧರಿಸಿದ್ದ ಹಿಜಾಬ್ ಅನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಳಚಲು ಯತ್ನಿಸಿದ್ದು ವಿವಾದಕ್ಕೆ ಕಾರಣವಾಗಿದೆ.</p>.ಕೆಲವೇ ದಿನಗಳಲ್ಲಿ ಬಿಹಾರ CM ನಿತೀಶ್ ಅಧಿಕಾರದಿಂದ ಕೆಳಕ್ಕೆ ಇಳಿಯಲಿದ್ದಾರೆ: ಪಾಂಡೆ.<p>ಇದರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಮುಖ್ಯಮಂತ್ರಿ ಸಚಿವಾಲಯ ‘ಸಂವಾದ’ದಲ್ಲಿ ಹೊಸದಾಗಿ ನೇಮಕಗೊಂಡ 1 ಸಾವಿರಕ್ಕೂ ಅಧಿಕ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಈ ಘಟನೆ ಸಂಭವಿಸಿದೆ.</p><p>ವಿಡಿಯೊದ ನೈಜತೆ ಬಗ್ಗೆ ಖಚಿತವಿಲ್ಲ.</p>.ಭ್ರಷ್ಟರು, ಅಪರಾಧಿಗಳಿಂದ ತುಂಬಿದ ನಿತೀಶ್ ಸಂಪುಟ: ಪ್ರಶಾಂತ್ ಕಿಶೋರ್ ಟೀಕೆ.<p>ಮುಖ್ಯಮಂತ್ರಿ ಕಚೇರಿಯ ಮಾಹಿತಿ ಪ್ರಕಾರ, 685 ಆಯುರ್ವೇದ ವೈದ್ಯರು, 393 ಹೋಮಿಯೋಪಥಿ ಹಾಗೂ 205 ಯೂನಾನಿ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ.</p><p>ಈ ಪೈಕಿ 10 ಮಂದಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇಮಕಾತಿ ಪತ್ರ ವಿತರಿಸಿದ್ದು, ಉಳಿದವರಿಗೆ ಆನ್ಲೈನ್ನಲ್ಲಿ ನೀಡಲಾಗಿದೆ.</p>.MLAಯೂ ಅಲ್ಲ; MLCಯೂ ಅಲ್ಲ; ಆದರೂ ನಿತೀಶ್ ಸಂಪುಟದಲ್ಲಿ ಸಚಿವ: ಯಾರು ಈ ದೀಪಕ್.<p>ನುಸ್ರತ್ ಪರ್ವೀನ್ ಎನ್ನುವವರು ಮುಖ ಮುಚ್ಚಿ ಹಿಜಾಬ್ ಧರಿಸಿ ನೇಮಕಾತಿ ಪತ್ರ ಸ್ವೀಕರಿಸಲು ಬಂದಿದ್ದಾರೆ. ಈ ವೇಳೆ ನಿತೀಶ್ ‘ಇದೇನು?’ ಎಂದು ಹೇಳಿ ಹಿಜಾಬ್ ಅನ್ನು ಕಳಚಲು ಯತ್ನಿಸಿದ್ದಾರೆ.</p><p>ಇದರಿಂದ ಗೊಂದಲಕ್ಕೀಡಾದ ನುಸ್ರತ್ರನ್ನು ಅಲ್ಲಿದ್ದ ಅಧಿಕಾರಿಯೊಬ್ಬರು ತರಾತುರಿಯಲ್ಲಿ ಪಕ್ಕಕ್ಕೆ ಎಳೆಯುವುದು ಹಾಗೂ ನಿತೀಶ್ ಕುಮಾರ್ ಅವರನ್ನು ಪಕ್ಕದಲ್ಲಿ ನಿಂತಿದ್ದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ತಡೆಯಲು ಯತ್ನಿಸುವುದು ವಿಡಿಯೊದಲ್ಲಿ ದಾಖಲಾಗಿದೆ.</p>.Bihar Cabinet: ನಿತೀಶ್ ಸಂಪುಟ ಸೇರಿದ ಚಿನ್ನದ ಹುಡುಗಿ; ಯಾರು ಈ ಶ್ರೇಯಸಿ ಸಿಂಗ್?.<p>ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆರ್ಜೆಡಿ ಹಾಗೂ ಕಾಂಗ್ರೆಸ್, ನಿತೀಶ್ ಕುಮಾರ್ ಅವರ ಮಾನಸಿಕ ಆರೋಗ್ಯ ಸರಿ ಇಲ್ಲ ಎನ್ನುವುದರ ಪ್ರತೀಕ ಎಂದು ಕಿಡಿ ಕಾರಿವೆ.</p> .'ಪಲ್ಟು ರಾಮ್'ನಿಂದ 'ಸುಶಾಸನ ಬಾಬು'ವರೆಗೆ.. ದೀರ್ಘಾವಧಿ CMಗಳ ಪಟ್ಟಿಯಲ್ಲಿ ನಿತೀಶ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ:</strong> ನೇಮಕಾತಿ ಪತ್ರ ವಿತರಣೆ ವೇಳೆ ಆಯುಷ್ ವೈದ್ಯೆಯೊಬ್ಬರು ಧರಿಸಿದ್ದ ಹಿಜಾಬ್ ಅನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಳಚಲು ಯತ್ನಿಸಿದ್ದು ವಿವಾದಕ್ಕೆ ಕಾರಣವಾಗಿದೆ.</p>.ಕೆಲವೇ ದಿನಗಳಲ್ಲಿ ಬಿಹಾರ CM ನಿತೀಶ್ ಅಧಿಕಾರದಿಂದ ಕೆಳಕ್ಕೆ ಇಳಿಯಲಿದ್ದಾರೆ: ಪಾಂಡೆ.<p>ಇದರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಮುಖ್ಯಮಂತ್ರಿ ಸಚಿವಾಲಯ ‘ಸಂವಾದ’ದಲ್ಲಿ ಹೊಸದಾಗಿ ನೇಮಕಗೊಂಡ 1 ಸಾವಿರಕ್ಕೂ ಅಧಿಕ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಈ ಘಟನೆ ಸಂಭವಿಸಿದೆ.</p><p>ವಿಡಿಯೊದ ನೈಜತೆ ಬಗ್ಗೆ ಖಚಿತವಿಲ್ಲ.</p>.ಭ್ರಷ್ಟರು, ಅಪರಾಧಿಗಳಿಂದ ತುಂಬಿದ ನಿತೀಶ್ ಸಂಪುಟ: ಪ್ರಶಾಂತ್ ಕಿಶೋರ್ ಟೀಕೆ.<p>ಮುಖ್ಯಮಂತ್ರಿ ಕಚೇರಿಯ ಮಾಹಿತಿ ಪ್ರಕಾರ, 685 ಆಯುರ್ವೇದ ವೈದ್ಯರು, 393 ಹೋಮಿಯೋಪಥಿ ಹಾಗೂ 205 ಯೂನಾನಿ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ.</p><p>ಈ ಪೈಕಿ 10 ಮಂದಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇಮಕಾತಿ ಪತ್ರ ವಿತರಿಸಿದ್ದು, ಉಳಿದವರಿಗೆ ಆನ್ಲೈನ್ನಲ್ಲಿ ನೀಡಲಾಗಿದೆ.</p>.MLAಯೂ ಅಲ್ಲ; MLCಯೂ ಅಲ್ಲ; ಆದರೂ ನಿತೀಶ್ ಸಂಪುಟದಲ್ಲಿ ಸಚಿವ: ಯಾರು ಈ ದೀಪಕ್.<p>ನುಸ್ರತ್ ಪರ್ವೀನ್ ಎನ್ನುವವರು ಮುಖ ಮುಚ್ಚಿ ಹಿಜಾಬ್ ಧರಿಸಿ ನೇಮಕಾತಿ ಪತ್ರ ಸ್ವೀಕರಿಸಲು ಬಂದಿದ್ದಾರೆ. ಈ ವೇಳೆ ನಿತೀಶ್ ‘ಇದೇನು?’ ಎಂದು ಹೇಳಿ ಹಿಜಾಬ್ ಅನ್ನು ಕಳಚಲು ಯತ್ನಿಸಿದ್ದಾರೆ.</p><p>ಇದರಿಂದ ಗೊಂದಲಕ್ಕೀಡಾದ ನುಸ್ರತ್ರನ್ನು ಅಲ್ಲಿದ್ದ ಅಧಿಕಾರಿಯೊಬ್ಬರು ತರಾತುರಿಯಲ್ಲಿ ಪಕ್ಕಕ್ಕೆ ಎಳೆಯುವುದು ಹಾಗೂ ನಿತೀಶ್ ಕುಮಾರ್ ಅವರನ್ನು ಪಕ್ಕದಲ್ಲಿ ನಿಂತಿದ್ದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ತಡೆಯಲು ಯತ್ನಿಸುವುದು ವಿಡಿಯೊದಲ್ಲಿ ದಾಖಲಾಗಿದೆ.</p>.Bihar Cabinet: ನಿತೀಶ್ ಸಂಪುಟ ಸೇರಿದ ಚಿನ್ನದ ಹುಡುಗಿ; ಯಾರು ಈ ಶ್ರೇಯಸಿ ಸಿಂಗ್?.<p>ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆರ್ಜೆಡಿ ಹಾಗೂ ಕಾಂಗ್ರೆಸ್, ನಿತೀಶ್ ಕುಮಾರ್ ಅವರ ಮಾನಸಿಕ ಆರೋಗ್ಯ ಸರಿ ಇಲ್ಲ ಎನ್ನುವುದರ ಪ್ರತೀಕ ಎಂದು ಕಿಡಿ ಕಾರಿವೆ.</p> .'ಪಲ್ಟು ರಾಮ್'ನಿಂದ 'ಸುಶಾಸನ ಬಾಬು'ವರೆಗೆ.. ದೀರ್ಘಾವಧಿ CMಗಳ ಪಟ್ಟಿಯಲ್ಲಿ ನಿತೀಶ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>