<p><strong>ಬೆತಿಯಾ:</strong> 'ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೊಸ ಸಂಪುಟವು ಭ್ರಷ್ಟರು, ಕ್ರಿಮಿನಲ್ ನಾಯಕರಿಂದಲೇ ತುಂಬಿಕೊಂಡಿದೆ' ಎಂದು ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಆರೋಪಿಸಿದ್ದಾರೆ. </p><p>ಬಿಹಾರದಲ್ಲಿ ನೂತನ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮದ ವೇಳೆ ಪಶ್ಚಿಮ ಚಂಪಾರಣ್ಯ ಗಾಂಧಿ ಆಶ್ರಮದಲ್ಲಿ ಪ್ರಶಾಂತ್ ಕಿಶೋರ್ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದರು. </p><p>'ಪಕ್ಷವು ಹೊಸ ವರ್ಷದಲ್ಲಿ 'ಬಿಹಾರ ನವ ನಿರ್ಮಾಣ ಸಂಕಲ್ಪ ಯಾತ್ರೆ'ಯನ್ನು ಕೈಗೊಳ್ಳಲಿದೆ. ಯಾತ್ರೆಯು ಜನವರಿ 15ರಂದು ಆರಂಭವಾಗಲಿದೆ. ಈ ಸಂದರ್ಭದಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಸರ್ಕಾರದ ಜನ ವಿರೋಧಿ ನೀತಿ ಬಗ್ಗೆ ಜಾಗೃತಿ ಮೂಡಿಸಲಿದ್ದೇವೆ' ಎಂದು ಹೇಳಿದ್ದಾರೆ. </p><p>'ಬಿಹಾರ ಸರ್ಕಾರವು ಭ್ರಷ್ಟರು, ಅಪರಾಧಿಗಳಿಂದ ತುಂಬಿಕೊಂಡಿದೆ. ಇದು ಜನರಿಗೆ ಕಪಾಳ ಮೋಕ್ಷ ಮಾಡಿದಂತಾಗಿದೆ. ಗಾಯದ ಮೇಲೆ ಉಪ್ಪು ಸವರಿದಂತಾಗಿದೆ' ಪ್ರಶಾಂತ್ ಟೀಕಿಸಿದ್ದಾರೆ. </p><p>'ಸಂಪುಟಕ್ಕೆ ಸೇರಿಸಿದ ನಾಯಕರನ್ನು ನೋಡಿದರೆ ಬಿಹಾರದ ಬಗ್ಗೆ ಪ್ರಧಾನಿ, ಗೃಹ ಸಚಿವರು ಹಾಗೂ ಸಿಎಂ ನಿತೀಶ್ಗೆ ಕಿಂಚಿತ್ತು ಕಾಳಜಿ ಇಲ್ಲ' ಎಂದು ಆರೋಪಿಸಿದ್ದಾರೆ. </p><p>'ಒಂದು ಕೋಟಿಗೂ ಅಧಿಕ ಮಹಿಳೆಯರಿಗೆ ₹10 ಸಾವಿರ ವರ್ಗಾಯಿಸುವ ಮೂಲಕ ಮತವನ್ನು ಖರೀದಿಸಲಾಗಿದೆ. ನಾನು ಏನಾದರೂ ಸುಳ್ಳು ಹೇಳುತ್ತಿದ್ದರೆ ಸರ್ಕಾರವು ನನ್ನನ್ನು ಜೈಲಿಗೆ ತಳ್ಳಬಹುದು' ಎಂದು ಸವಾಲು ಹಾಕಿದ್ದಾರೆ. </p><p>'ರಾಜ್ಯದ ತುರ್ತು ನಿಧಿ ಹಾಗೂ ಸರ್ಕಾರದ ಯೋಜನೆಗಾಗಿ ಮೀಸಲಿರಿಸಿದ್ದ ಹಣವನ್ನು ವರ್ಗಾಯಿಸಲಾಗಿದೆ' ಎಂದು ಪ್ರಶಾಂತ್ ಆರೋಪಿಸಿದ್ದಾರೆ. </p>.ನಿತೀಶ್ ಸಂಪುಟದ 26 ಸಚಿವರಲ್ಲಿ 10 ಮಂದಿ ರಾಜಕೀಯ ಹಿನ್ನೆಲೆಯ ಕುಟುಂಬದ ಕುಡಿಗಳು!.Bihar Govt Formation 2025 |CM ನಿತೀಶ್ ಕುಮಾರ್ ಸಂಪುಟದ ಸಚಿವರ ಪಟ್ಟಿ ಇಲ್ಲಿದೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆತಿಯಾ:</strong> 'ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೊಸ ಸಂಪುಟವು ಭ್ರಷ್ಟರು, ಕ್ರಿಮಿನಲ್ ನಾಯಕರಿಂದಲೇ ತುಂಬಿಕೊಂಡಿದೆ' ಎಂದು ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಆರೋಪಿಸಿದ್ದಾರೆ. </p><p>ಬಿಹಾರದಲ್ಲಿ ನೂತನ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮದ ವೇಳೆ ಪಶ್ಚಿಮ ಚಂಪಾರಣ್ಯ ಗಾಂಧಿ ಆಶ್ರಮದಲ್ಲಿ ಪ್ರಶಾಂತ್ ಕಿಶೋರ್ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದರು. </p><p>'ಪಕ್ಷವು ಹೊಸ ವರ್ಷದಲ್ಲಿ 'ಬಿಹಾರ ನವ ನಿರ್ಮಾಣ ಸಂಕಲ್ಪ ಯಾತ್ರೆ'ಯನ್ನು ಕೈಗೊಳ್ಳಲಿದೆ. ಯಾತ್ರೆಯು ಜನವರಿ 15ರಂದು ಆರಂಭವಾಗಲಿದೆ. ಈ ಸಂದರ್ಭದಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಸರ್ಕಾರದ ಜನ ವಿರೋಧಿ ನೀತಿ ಬಗ್ಗೆ ಜಾಗೃತಿ ಮೂಡಿಸಲಿದ್ದೇವೆ' ಎಂದು ಹೇಳಿದ್ದಾರೆ. </p><p>'ಬಿಹಾರ ಸರ್ಕಾರವು ಭ್ರಷ್ಟರು, ಅಪರಾಧಿಗಳಿಂದ ತುಂಬಿಕೊಂಡಿದೆ. ಇದು ಜನರಿಗೆ ಕಪಾಳ ಮೋಕ್ಷ ಮಾಡಿದಂತಾಗಿದೆ. ಗಾಯದ ಮೇಲೆ ಉಪ್ಪು ಸವರಿದಂತಾಗಿದೆ' ಪ್ರಶಾಂತ್ ಟೀಕಿಸಿದ್ದಾರೆ. </p><p>'ಸಂಪುಟಕ್ಕೆ ಸೇರಿಸಿದ ನಾಯಕರನ್ನು ನೋಡಿದರೆ ಬಿಹಾರದ ಬಗ್ಗೆ ಪ್ರಧಾನಿ, ಗೃಹ ಸಚಿವರು ಹಾಗೂ ಸಿಎಂ ನಿತೀಶ್ಗೆ ಕಿಂಚಿತ್ತು ಕಾಳಜಿ ಇಲ್ಲ' ಎಂದು ಆರೋಪಿಸಿದ್ದಾರೆ. </p><p>'ಒಂದು ಕೋಟಿಗೂ ಅಧಿಕ ಮಹಿಳೆಯರಿಗೆ ₹10 ಸಾವಿರ ವರ್ಗಾಯಿಸುವ ಮೂಲಕ ಮತವನ್ನು ಖರೀದಿಸಲಾಗಿದೆ. ನಾನು ಏನಾದರೂ ಸುಳ್ಳು ಹೇಳುತ್ತಿದ್ದರೆ ಸರ್ಕಾರವು ನನ್ನನ್ನು ಜೈಲಿಗೆ ತಳ್ಳಬಹುದು' ಎಂದು ಸವಾಲು ಹಾಕಿದ್ದಾರೆ. </p><p>'ರಾಜ್ಯದ ತುರ್ತು ನಿಧಿ ಹಾಗೂ ಸರ್ಕಾರದ ಯೋಜನೆಗಾಗಿ ಮೀಸಲಿರಿಸಿದ್ದ ಹಣವನ್ನು ವರ್ಗಾಯಿಸಲಾಗಿದೆ' ಎಂದು ಪ್ರಶಾಂತ್ ಆರೋಪಿಸಿದ್ದಾರೆ. </p>.ನಿತೀಶ್ ಸಂಪುಟದ 26 ಸಚಿವರಲ್ಲಿ 10 ಮಂದಿ ರಾಜಕೀಯ ಹಿನ್ನೆಲೆಯ ಕುಟುಂಬದ ಕುಡಿಗಳು!.Bihar Govt Formation 2025 |CM ನಿತೀಶ್ ಕುಮಾರ್ ಸಂಪುಟದ ಸಚಿವರ ಪಟ್ಟಿ ಇಲ್ಲಿದೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>