<p><strong>ನವದೆಹಲಿ: </strong>ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ಶುಕ್ರವಾರ ಹಿಂಸಾಚಾರ ನಡೆದಿದೆ.</p>.<p>ಸ್ಥಳೀಯರು ಎಂದು ಹೇಳಿಕೊಂಡ ದೊಡ್ಡ ಗುಂಪು ಕೈಯಲ್ಲಿ ದೊಣ್ಣೆ ಮತ್ತಿತರ ಆಯುಧಗಳನ್ನು ಹಿಡಿದು ಪ್ರತಿಭಟನ<br />ಕಾರರನ್ನು ತೆರವು ಮಾಡುವುದಕ್ಕಾಗಿ ಪ್ರತಿಭಟನಾ ಸ್ಥಳಕ್ಕೆ ನುಗ್ಗಿತು. ರೈತರ ಮೇಲೆ ಕಲ್ಲೆಸೆದು, ಅವರ ಡೇರೆಗಳನ್ನು ಕಿತ್ತು ಹಾಕಿತು. ಪ್ರತಿಯಾಗಿ ರೈತರು ಕೂಡ ಈ ಗುಂಪಿನ ಮೇಲೆ ಕಲ್ಲೆಸೆದರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಷೆಲ್ ಸಿಡಿಸಿದ್ದಾರೆ.</p>.<p>ದೆಹಲಿಯ ಅಲಿಪುರ ಪೊಲೀಸ್ ಠಾಣಾಧಿಕಾರಿ ಪ್ರದೀಪ್ ಪಲಿವಾಲ್ ಅವರು ಹಿಂಸಾಚಾರದಲ್ಲಿ ಗಾಯಗೊಂಡಿದ್ದಾರೆ. ವ್ಯಕ್ತಿಯೊಬ್ಬ ಅವರ ಮೇಲೆ ಖಡ್ಗ<br />ದಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತರ ಕೆಲವರು ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಗಣರಾಜ್ಯೋತ್ಸವ ದಿನ ನಡೆದ ಟ್ರ್ಯಾಕ್ಟರ್ ರ್ಯಾಲಿ ಸಂದರ್ಭದಲ್ಲಿ ಪ್ರತಿಭಟನಕಾರರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಹಾಗಾಗಿ ಅವರನ್ನು ಸಿಂಘು ಗಡಿಯಿಂದ ತೆರವು ಮಾಡಬೇಕು ಎಂದು ಸಿಂಘು ಗಡಿಗೆ ನುಗ್ಗಿದ ಗುಂಪು ಹೇಳಿಕೊಂಡಿದೆ.</p>.<p>ಪ್ರತಿಭಟನೆಯ ಸ್ಥಳಕ್ಕೆ ಹೊರಗಿನಿಂದ ಯಾರೂ ಹೋಗದಂತೆ ತಡೆ ಹಾಕಲಾಗಿದೆ. ಹಾಗಿದ್ದರೂ ಗುಂಪು ಒಳಕ್ಕೆ ನುಗ್ಗಿದೆ. ಅವರು ಒಳನುಗ್ಗುವು ನ್ನು ತಡೆಯುವುದಕ್ಕಾಗಿ ರೈತರು ಕೂಡ ತಮ್ಮ ಡೇರೆಗಳಿಂದ ಹೊರಬಂದರು. ಆದರೆ, ರೈತರು ಹೊರಬಾರ<br />ದಂತೆಸ್ವಯಂಸೇವಕರು ತಡೆದರು. ಹೀಗಾಗಿ, ಸಂಘರ್ಷ ಇನ್ನಷ್ಟು ತೀವ್ರಗೊಳ್ಳುವುದು ತಪ್ಪಿತು.ಈ ಗುಂಪು ಪ್ರತಿಭಟನಾ ಸ್ಥಳಕ್ಕೆ ಬರಲು ಪೊಲೀಸರೇ ಅವಕಾಶ ಕೊಟ್ಟಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.</p>.<p>‘ಅವರು ಸ್ಥಳೀಯರಲ್ಲ. ಬಾಡಿಗೆ ಗೂಂಡಾಗಳು. ನಮ್ಮತ್ತ ಕಲ್ಲು ಮತ್ತು ಪೆಟ್ರೋಲ್ ಬಾಂಬ್ಗಳನ್ನು ಎಸೆದರು. ನಮ್ಮ ಟ್ರಾಲಿಗಳನ್ನು ಸುಡಲು ಅವರು ಯತ್ನಿಸಿದರು. ನಾವು ಅವರನ್ನು ತಡೆಯುತ್ತೇವೆ ಮತ್ತು ಇಲ್ಲಿಂದ ಹೋಗುವುದಿಲ್ಲ’ ಎಂದು ಪ್ರತಿಭಟನಕಾರ ಹರ್ಕೀರತ್ ಮಾನ್ ಬೇನಿವಾಲ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ಶುಕ್ರವಾರ ಹಿಂಸಾಚಾರ ನಡೆದಿದೆ.</p>.<p>ಸ್ಥಳೀಯರು ಎಂದು ಹೇಳಿಕೊಂಡ ದೊಡ್ಡ ಗುಂಪು ಕೈಯಲ್ಲಿ ದೊಣ್ಣೆ ಮತ್ತಿತರ ಆಯುಧಗಳನ್ನು ಹಿಡಿದು ಪ್ರತಿಭಟನ<br />ಕಾರರನ್ನು ತೆರವು ಮಾಡುವುದಕ್ಕಾಗಿ ಪ್ರತಿಭಟನಾ ಸ್ಥಳಕ್ಕೆ ನುಗ್ಗಿತು. ರೈತರ ಮೇಲೆ ಕಲ್ಲೆಸೆದು, ಅವರ ಡೇರೆಗಳನ್ನು ಕಿತ್ತು ಹಾಕಿತು. ಪ್ರತಿಯಾಗಿ ರೈತರು ಕೂಡ ಈ ಗುಂಪಿನ ಮೇಲೆ ಕಲ್ಲೆಸೆದರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಷೆಲ್ ಸಿಡಿಸಿದ್ದಾರೆ.</p>.<p>ದೆಹಲಿಯ ಅಲಿಪುರ ಪೊಲೀಸ್ ಠಾಣಾಧಿಕಾರಿ ಪ್ರದೀಪ್ ಪಲಿವಾಲ್ ಅವರು ಹಿಂಸಾಚಾರದಲ್ಲಿ ಗಾಯಗೊಂಡಿದ್ದಾರೆ. ವ್ಯಕ್ತಿಯೊಬ್ಬ ಅವರ ಮೇಲೆ ಖಡ್ಗ<br />ದಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತರ ಕೆಲವರು ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಗಣರಾಜ್ಯೋತ್ಸವ ದಿನ ನಡೆದ ಟ್ರ್ಯಾಕ್ಟರ್ ರ್ಯಾಲಿ ಸಂದರ್ಭದಲ್ಲಿ ಪ್ರತಿಭಟನಕಾರರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಹಾಗಾಗಿ ಅವರನ್ನು ಸಿಂಘು ಗಡಿಯಿಂದ ತೆರವು ಮಾಡಬೇಕು ಎಂದು ಸಿಂಘು ಗಡಿಗೆ ನುಗ್ಗಿದ ಗುಂಪು ಹೇಳಿಕೊಂಡಿದೆ.</p>.<p>ಪ್ರತಿಭಟನೆಯ ಸ್ಥಳಕ್ಕೆ ಹೊರಗಿನಿಂದ ಯಾರೂ ಹೋಗದಂತೆ ತಡೆ ಹಾಕಲಾಗಿದೆ. ಹಾಗಿದ್ದರೂ ಗುಂಪು ಒಳಕ್ಕೆ ನುಗ್ಗಿದೆ. ಅವರು ಒಳನುಗ್ಗುವು ನ್ನು ತಡೆಯುವುದಕ್ಕಾಗಿ ರೈತರು ಕೂಡ ತಮ್ಮ ಡೇರೆಗಳಿಂದ ಹೊರಬಂದರು. ಆದರೆ, ರೈತರು ಹೊರಬಾರ<br />ದಂತೆಸ್ವಯಂಸೇವಕರು ತಡೆದರು. ಹೀಗಾಗಿ, ಸಂಘರ್ಷ ಇನ್ನಷ್ಟು ತೀವ್ರಗೊಳ್ಳುವುದು ತಪ್ಪಿತು.ಈ ಗುಂಪು ಪ್ರತಿಭಟನಾ ಸ್ಥಳಕ್ಕೆ ಬರಲು ಪೊಲೀಸರೇ ಅವಕಾಶ ಕೊಟ್ಟಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.</p>.<p>‘ಅವರು ಸ್ಥಳೀಯರಲ್ಲ. ಬಾಡಿಗೆ ಗೂಂಡಾಗಳು. ನಮ್ಮತ್ತ ಕಲ್ಲು ಮತ್ತು ಪೆಟ್ರೋಲ್ ಬಾಂಬ್ಗಳನ್ನು ಎಸೆದರು. ನಮ್ಮ ಟ್ರಾಲಿಗಳನ್ನು ಸುಡಲು ಅವರು ಯತ್ನಿಸಿದರು. ನಾವು ಅವರನ್ನು ತಡೆಯುತ್ತೇವೆ ಮತ್ತು ಇಲ್ಲಿಂದ ಹೋಗುವುದಿಲ್ಲ’ ಎಂದು ಪ್ರತಿಭಟನಕಾರ ಹರ್ಕೀರತ್ ಮಾನ್ ಬೇನಿವಾಲ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>