ರಾಯಪುರ ಮೂಲದ ಪತ್ರಕರ್ತಅವೇಶ್ ತಿವಾರಿ ಎಂಬುವರು ಸೋಮವಾರ ರಾತ್ರಿ ಕಬೀರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಫೇಸ್ಬುಕ್ ಕಾರ್ಯನಿರ್ವಾಹಕ ಅಧಿಕಾರಿ ಅಂಕಿದಾಸ್, ಬಳಕೆದಾರರಾದ ರಾಮ್ ಸಾಹು, ವಿವೇಕ್ ಸಿನ್ಹಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು , ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಯಾದವ್ ತಿಳಿಸಿದರು.