<p><strong>ಕೊಯಮತ್ತೂರು:</strong> ತಮಿಳುನಾಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಕೊಯಮತ್ತೂರು ಮತ್ತು ನೀಲಗಿರಿ ಜಿಲ್ಲೆಗಳ ವಿವಿಧ ಅಣೆಕಟ್ಟುಗಳಿಂದ ಹೆಚ್ಚಿನ ಪ್ರಮಾಣದ ಹೆಚ್ಚುವರಿ ನೀರನ್ನು ಭವಾನಿ ನದಿಗೆ ಬಿಡಲಾಗುವುದೆಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.</p><p>ಭವಾನಿ ನದಿಯ ಸುತ್ತಾಮುತ್ತಲಿನ ಸತ್ಯಮಂಗಲಂ, ಗೋಬಿಚೆಟ್ಟಿಪಾಳ್ಯಂ ಗ್ರಾಮದ ಜನರಿಗೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ತಾಣಗಳಲ್ಲಿ ನೆಲೆಸಲು ಈಗಾಗಲೇ ಸೂಚಿಸಲಾಗಿದೆ. </p><p>ಅಣೆಕಟ್ಟುಗೆ 6,937 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಆ ಸಮಯದಲ್ಲಿ ನೀರಿನ ಮಟ್ಟ 101.71 ಅಡಿ ಹಾಗೂ ಸಂಗ್ರಹ 30.08 ಟಿಎಂಸಿ ಇತ್ತು. ನೀರಿನ ಒಳಹರಿವು ಮತ್ತು ಸಂಗ್ರಹದಲ್ಲಿ ತಕ್ಷಣದ ಹೆಚ್ಚಳ ಸಂಭವಿಸಬಹುದು, </p><p>ಸತ್ಯಮಂಗಲಂ ಮತ್ತು ಗೋಬಿಚೆಟ್ಟಿಪಾಳ್ಯಂ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ 1,500 ಕ್ಯೂಸೆಕ್ಗಳನ್ನು ಎಲ್ಬಿಪಿ ಕಾಲುವೆಗೆ, 800 ಕ್ಯೂಸೆಕ್ಗಳನ್ನು ತಡಪಲ್ಲಿ ಮತ್ತು ಅರಕ್ಕನ್ಕೊಟ್ಟೈ ಕಾಲುವೆಗಳಿಗೆ, 400 ಕ್ಯೂಸೆಕ್ಗಳನ್ನು ಕಾಳಿಂಗರಾಯನ್ ಕಾಲುವೆಗೆ ಮತ್ತು 100 ಕ್ಯೂಸೆಕ್ಗಳನ್ನು ಭವಾನಿ ನದಿಗೆ ಬಿಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಯಮತ್ತೂರು:</strong> ತಮಿಳುನಾಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಕೊಯಮತ್ತೂರು ಮತ್ತು ನೀಲಗಿರಿ ಜಿಲ್ಲೆಗಳ ವಿವಿಧ ಅಣೆಕಟ್ಟುಗಳಿಂದ ಹೆಚ್ಚಿನ ಪ್ರಮಾಣದ ಹೆಚ್ಚುವರಿ ನೀರನ್ನು ಭವಾನಿ ನದಿಗೆ ಬಿಡಲಾಗುವುದೆಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.</p><p>ಭವಾನಿ ನದಿಯ ಸುತ್ತಾಮುತ್ತಲಿನ ಸತ್ಯಮಂಗಲಂ, ಗೋಬಿಚೆಟ್ಟಿಪಾಳ್ಯಂ ಗ್ರಾಮದ ಜನರಿಗೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ತಾಣಗಳಲ್ಲಿ ನೆಲೆಸಲು ಈಗಾಗಲೇ ಸೂಚಿಸಲಾಗಿದೆ. </p><p>ಅಣೆಕಟ್ಟುಗೆ 6,937 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಆ ಸಮಯದಲ್ಲಿ ನೀರಿನ ಮಟ್ಟ 101.71 ಅಡಿ ಹಾಗೂ ಸಂಗ್ರಹ 30.08 ಟಿಎಂಸಿ ಇತ್ತು. ನೀರಿನ ಒಳಹರಿವು ಮತ್ತು ಸಂಗ್ರಹದಲ್ಲಿ ತಕ್ಷಣದ ಹೆಚ್ಚಳ ಸಂಭವಿಸಬಹುದು, </p><p>ಸತ್ಯಮಂಗಲಂ ಮತ್ತು ಗೋಬಿಚೆಟ್ಟಿಪಾಳ್ಯಂ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ 1,500 ಕ್ಯೂಸೆಕ್ಗಳನ್ನು ಎಲ್ಬಿಪಿ ಕಾಲುವೆಗೆ, 800 ಕ್ಯೂಸೆಕ್ಗಳನ್ನು ತಡಪಲ್ಲಿ ಮತ್ತು ಅರಕ್ಕನ್ಕೊಟ್ಟೈ ಕಾಲುವೆಗಳಿಗೆ, 400 ಕ್ಯೂಸೆಕ್ಗಳನ್ನು ಕಾಳಿಂಗರಾಯನ್ ಕಾಲುವೆಗೆ ಮತ್ತು 100 ಕ್ಯೂಸೆಕ್ಗಳನ್ನು ಭವಾನಿ ನದಿಗೆ ಬಿಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>