ಆದರೆ, ತೈಲ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವುದೇ ಕ್ರಮವಹಿಸಲು ವಿಫಲವಾಗಿದೆ ಎಂದು ಆರೋಪಿ ಕಾಂಗ್ರೆಸ್ ನೇತೃತ್ವದಲ್ಲಿ ಸೋಮವಾರ(ಸೆ.10) ದೇಶವ್ಯಾಪಿ ಬಂದ್ ಕರೆ ನೀಡಲಾಗಿದೆ. ಬಂದ್ಗೆ ಜೆಡಿಎಸ್, ಎಂಡಿಎಂಕೆ, ಎನ್ಸಿಪಿ, ಡಿಎಂಕೆ ಹಾಗೂ ಸಮಾಜವಾದಿ ಪಕ್ಷ ಬೆಂಬಲ ಸೂಚಿಸಿವೆ. ತೈಲ ದರ ಏರಿಕೆ, ರೈತರ ಸಮಸ್ಯೆ ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ಮುಂದಿಟ್ಟು ಎಡ ಪಕ್ಷಗಳು ಇದೇ ದಿನ ಪ್ರತ್ಯೇಕವಾಗಿ ಬಂದ್ಗೆ ಕರೆ ನೀಡಿವೆ.