‘ಸ್ವಾತಂತ್ರ್ಯದ ನಂತರ ಪಾಕಿಸ್ತಾನದಲ್ಲೇ ವಾಸಿಸುವ ಕುರಿತು ಗಾಂಧಿ ಪಠಾಣ್ ನಾಯಕ ಅಬ್ದುಲ್ ಘಫರ್ ಖಾನ್ ಅವರ ಬಳಿ 1947 ಮೇ 31ರಂದು ಹೇಳಿದ್ದರು. ದೇಶದ ವಿಭಜನೆಯಲ್ಲಿ ನನಗೆ ನಂಬಿಕೆ ಇಲ್ಲ. ನಾನು ಯಾರ ಅನುಮತಿಯನ್ನೂ ಪಡೆಯುವುದಿಲ್ಲ. ಪಾಕಿಸ್ತಾನ ರಚನೆಯಾದರೆ ನಾನು ಅಲ್ಲಿಯೇ ಹೋಗಿ ವಾಸಿಸುತ್ತೇನೆ. ನನಗೆ ಏನು ಮಾಡುತ್ತಾರೊ ನೋಡೋಣ, ನನ್ನನ್ನು ಕೊಂದರೆ ಸಾವನ್ನು ನಗುಮೊಗದಿಂದ ಅಪ್ಪಿಕೊಳ್ಳುತ್ತೇನೆ ಎಂದು ಗಾಂಧೀಜಿ ಹೇಳಿದ್ದರು’ ಎಂದು ಕೃತಿಯಲ್ಲಿಉಲ್ಲೇಖಿಸಲಾಗಿದೆ.