ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ganesh Chaturthi: ಮುಂಬೈನಲ್ಲಿ 66,700ಕ್ಕೂ ಅಧಿಕ ಮೂರ್ತಿಗಳ ವಿಸರ್ಜನೆ –ಬಿಎಂಸಿ

Published 21 ಸೆಪ್ಟೆಂಬರ್ 2023, 4:36 IST
Last Updated 21 ಸೆಪ್ಟೆಂಬರ್ 2023, 4:36 IST
ಅಕ್ಷರ ಗಾತ್ರ

ಮುಂಬೈ: ನಗರದ ವಿವಿಧೆಡೆ ಗುರುವಾರ ಬೆಳಗ್ಗೆ ವರೆಗೆ 66,700ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ.

10 ದಿನಗಳ ವರೆಗೆ ನಡೆಯುವ ಗಣೇಶೋತ್ಸವದ ಅಂಗವಾಗಿ ಗಣೇಶ ಮೂರ್ತಿಗಳನ್ನು ಒಂದೂವರೆ ದಿನ, ಐದು ದಿನ, ಏಳು ದಿನ ಹಾಗೂ ಹತ್ತು ದಿನಗಳ ಬಳಿಕ ನೀರಿನಲ್ಲಿ ಮುಳುಗಿಸುವ ಪ್ರತೀತಿ ಇದೆ.

ಬಿಎಂಸಿ ಅಧಿಕಾರಿಗಳ ಪ್ರಕಾರ, ಸಮುದ್ರ ಹಾಗೂ ಕೃತಕ ಹೊಂಡಗಳೂ ಸೇರಿದಂತೆ ಇತರೆಡೆಗಳಲ್ಲಿ ಗುರುವಾರ ಬೆಳಗ್ಗೆ 6ರ ವರೆಗೆ 66,785 ಮೂರ್ತಿಗಳನ್ನು ಮುಳುಗಿಸಲಾಗಿದೆ. ಈ ಪೈಕಿ 66,435 ಮೂರ್ತಿಗಳು ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದವುಗಳಾಗಿದ್ದು,  ಉಳಿದ 350 ಸಾರ್ವಜನಿಕ ಸ್ಥಳಗಳಲ್ಲಿ ಇರಿಸಿದ್ದವು.

ಸ್ವಾಭಾವಿಕ ನೀರಿನ ಮೂಲಗಳು ಮಲಿನಗೊಳ್ಳುವುದನ್ನು ತಡೆಯಲು ನಗರದಾದ್ಯಂತ ನಿರ್ಮಿಸಲಾಗಿರುವ ಕೃತಕ ಹೊಂಡಗಳಲ್ಲಿ 27,736 ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಇದರಲ್ಲಿ 27,564 ಮನೆಗಳಲ್ಲಿ ಕೂರಿಸಿದ್ದ ಮೂರ್ತಿಗಳಾಗಿದ್ದು, ಉಳಿದವು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದವು.

ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಈ ವರ್ಷ 191 ಕೃತಕ ಹೊಂಡಗಳನ್ನು ತೆರೆದಿರುವ ಬಿಎಂಸಿ, 69 ಸ್ವಾಭಾವಿಕ ಜಲಮೂಲಗಳನ್ನು ಮೀಸಲಿರಿಸಿದೆ.

ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಬಿಎಂಸಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT