<p><strong>ಮುಂಬೈ</strong>: ವಿಚಾರವಾದಿ, ಎಡಪಂಥೀಯ ನಾಯಕ ಗೋವಿಂದ ಪಾನ್ಸರೆ ಅವರ ಕುಟುಂಬ ಸದಸ್ಯರು ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಭಯೋತ್ಪಾದನೆ ನಿಗ್ರಹ ಪಡೆಗೆ (ಎಟಿಎಸ್) ಪತ್ರ ಬರೆದಿದ್ದು, ಪಾನ್ಸರೆ ಹತ್ಯೆ ಕೃತ್ಯಕ್ಕೆ ಸಂಬಂಧಿಸಿದಂತೆ ಸನಾತನ ಸಂಸ್ಥಾ ಸಂಘಟನೆಯ ಪಾತ್ರ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.</p>.<p>ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ವಿಚಾರವಾದಿಗಳ ಹತ್ಯೆಗೆ ಹಿಂದುತ್ವ ಪರ ಸಂಘಟನೆಯಾದ ಸನಾತನ ಸಂಸ್ಥೆಯು ಕಾರ್ಯತಂತ್ರ ಹಾಗೂ ಪೂರ್ವಯೋಜನೆಯನ್ನು ರೂಪಿಸುತ್ತಿತ್ತು ಎಂಬ ಅಂಶವು ಪೊಲೀಸರ ತನಿಖೆಯಿಂದ ಬಯಲಾಗಿದೆ ಎಂಬುದನ್ನೂ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.</p>.<p>ಸನಾತನ ಸಂಸ್ಥೆಯ ಸ್ಥಾಪಕ ಡಾ.ಜಯಂತ್ ಅಠವಳೆ ಅವರ ಪಾತ್ರ ಕುರಿತಂತೆಯೂ ತನಿಖೆ ನಡೆಸಬೇಕು ಎಂದು ಎಟಿಎಸ್ ವರಿಷ್ಠಾಧಿಕಾರಿ ಜಯಂತ್ ಮೀನಾ ಅವರಿಗೆ ಬರೆದಿರುವ 68 ಪುಟಗಳ ಪತ್ರದಲ್ಲಿ ಒತ್ತಾಯಿಸಿದೆ.</p>.<p>ಕುಟುಂಬದ ಸದಸ್ಯರಾದ ಡಾ. ಮೇಘಾ ಪಾನ್ಸರೆ, ಸ್ಮಿತಾ ಪಾನ್ಸರೆ, ಕಬೀರ್ ಪಾನ್ಸರೆ ಅವರ ಪತ್ರ ಬರೆದಿದ್ದಾರೆ.</p>.<p>ಕಾಮ್ರೆಡ್ ಪಾನ್ಸರೆ ಅವರನ್ನು ಅವರ ಜಾತ್ಯಾತೀತತೆ, ವಿಚಾರಪರತೆ, ಸಮಾನತೆ, ನಿರ್ಲಕ್ಷ್ಯಿತ ವರ್ಗದ ಏಳಿಗೆಗಾಗಿ ತೋರುತ್ತಿದ್ದ ಆಸಕ್ತಿಯ ಹಿನ್ನೆಲೆಯಲ್ಲಿ ಸನಾತನ ಸಂಸ್ಥಾ, ಹಿಂದೂ ಜಾಗೃತಿ ಸಮಿತಿಯಂತಹ ಬಲಪಂಥೀಯ ಚಿಂತನೆಯ ಹಿಂದುತ್ವ ಸಂಘಟನೆಗಳು ಕಟುವಾಗಿ ವಿರೋಧಿಸುತ್ತಿದ್ದವು ಎಂಬುದನ್ನು ಉಲ್ಲೇಖಿಸಲಾಗಿದೆ. </p>.<p>ಪಾನ್ಸರೆ ಹತ್ಯೆ ಪ್ರಕರಣದ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಆರಂಭಿಸುವುದರ ಪೂರ್ವದಲ್ಲಿ ಈ ಪತ್ರ ಬರೆಯಲಾಗಿದೆ. ಬಾಂಬೆ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಎಟಿಎಸ್ಗೆ ವಹಿಸಿತ್ತು.</p>.<p>ಸನಾತನ ಸಂಸ್ಥಾದ ಸ್ಥಾಪಕ ಡಾ. ಜಯಂತ ಅಠವಳೆ, ಅದರ ನಾಯಕ ವೀರೇಂಧ್ರ ಮರಾಠೆ ಹಾಗೂ ಪದಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.</p>.<p>ಪಾನ್ಸರೆ, ಡಾ. ನರೇಂದ್ರ ದಾಬೋಲ್ಕರ್, ಪ್ರೊ.ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣಗಳಿಗೆ ಪರಸ್ಪರ ಸಂಬಂಧವಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ವಿಚಾರವಾದಿ, ಎಡಪಂಥೀಯ ನಾಯಕ ಗೋವಿಂದ ಪಾನ್ಸರೆ ಅವರ ಕುಟುಂಬ ಸದಸ್ಯರು ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಭಯೋತ್ಪಾದನೆ ನಿಗ್ರಹ ಪಡೆಗೆ (ಎಟಿಎಸ್) ಪತ್ರ ಬರೆದಿದ್ದು, ಪಾನ್ಸರೆ ಹತ್ಯೆ ಕೃತ್ಯಕ್ಕೆ ಸಂಬಂಧಿಸಿದಂತೆ ಸನಾತನ ಸಂಸ್ಥಾ ಸಂಘಟನೆಯ ಪಾತ್ರ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.</p>.<p>ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ವಿಚಾರವಾದಿಗಳ ಹತ್ಯೆಗೆ ಹಿಂದುತ್ವ ಪರ ಸಂಘಟನೆಯಾದ ಸನಾತನ ಸಂಸ್ಥೆಯು ಕಾರ್ಯತಂತ್ರ ಹಾಗೂ ಪೂರ್ವಯೋಜನೆಯನ್ನು ರೂಪಿಸುತ್ತಿತ್ತು ಎಂಬ ಅಂಶವು ಪೊಲೀಸರ ತನಿಖೆಯಿಂದ ಬಯಲಾಗಿದೆ ಎಂಬುದನ್ನೂ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.</p>.<p>ಸನಾತನ ಸಂಸ್ಥೆಯ ಸ್ಥಾಪಕ ಡಾ.ಜಯಂತ್ ಅಠವಳೆ ಅವರ ಪಾತ್ರ ಕುರಿತಂತೆಯೂ ತನಿಖೆ ನಡೆಸಬೇಕು ಎಂದು ಎಟಿಎಸ್ ವರಿಷ್ಠಾಧಿಕಾರಿ ಜಯಂತ್ ಮೀನಾ ಅವರಿಗೆ ಬರೆದಿರುವ 68 ಪುಟಗಳ ಪತ್ರದಲ್ಲಿ ಒತ್ತಾಯಿಸಿದೆ.</p>.<p>ಕುಟುಂಬದ ಸದಸ್ಯರಾದ ಡಾ. ಮೇಘಾ ಪಾನ್ಸರೆ, ಸ್ಮಿತಾ ಪಾನ್ಸರೆ, ಕಬೀರ್ ಪಾನ್ಸರೆ ಅವರ ಪತ್ರ ಬರೆದಿದ್ದಾರೆ.</p>.<p>ಕಾಮ್ರೆಡ್ ಪಾನ್ಸರೆ ಅವರನ್ನು ಅವರ ಜಾತ್ಯಾತೀತತೆ, ವಿಚಾರಪರತೆ, ಸಮಾನತೆ, ನಿರ್ಲಕ್ಷ್ಯಿತ ವರ್ಗದ ಏಳಿಗೆಗಾಗಿ ತೋರುತ್ತಿದ್ದ ಆಸಕ್ತಿಯ ಹಿನ್ನೆಲೆಯಲ್ಲಿ ಸನಾತನ ಸಂಸ್ಥಾ, ಹಿಂದೂ ಜಾಗೃತಿ ಸಮಿತಿಯಂತಹ ಬಲಪಂಥೀಯ ಚಿಂತನೆಯ ಹಿಂದುತ್ವ ಸಂಘಟನೆಗಳು ಕಟುವಾಗಿ ವಿರೋಧಿಸುತ್ತಿದ್ದವು ಎಂಬುದನ್ನು ಉಲ್ಲೇಖಿಸಲಾಗಿದೆ. </p>.<p>ಪಾನ್ಸರೆ ಹತ್ಯೆ ಪ್ರಕರಣದ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಆರಂಭಿಸುವುದರ ಪೂರ್ವದಲ್ಲಿ ಈ ಪತ್ರ ಬರೆಯಲಾಗಿದೆ. ಬಾಂಬೆ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಎಟಿಎಸ್ಗೆ ವಹಿಸಿತ್ತು.</p>.<p>ಸನಾತನ ಸಂಸ್ಥಾದ ಸ್ಥಾಪಕ ಡಾ. ಜಯಂತ ಅಠವಳೆ, ಅದರ ನಾಯಕ ವೀರೇಂಧ್ರ ಮರಾಠೆ ಹಾಗೂ ಪದಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.</p>.<p>ಪಾನ್ಸರೆ, ಡಾ. ನರೇಂದ್ರ ದಾಬೋಲ್ಕರ್, ಪ್ರೊ.ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣಗಳಿಗೆ ಪರಸ್ಪರ ಸಂಬಂಧವಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>