<p><strong>ಅಹಮದಾಬಾದ್:</strong> ಆಧ್ಯಾತ್ಮಿಕ ಸಂಸ್ಥೆಯೊಂದಕ್ಕೆ ದೊರೆತಿದ್ದ ವಿದೇಶಿ ದೇಣಿಗೆಯಲ್ಲಿನ ಅವ್ಯವಹಾರದ ಬಗ್ಗೆ ಪ್ರಶ್ನಿಸಿದ್ದ ಅನಿವಾಸಿ ಭಾರತೀಯನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಗೆ ಇಲ್ಲಿನ ಸೆಷನ್ಸ್ ಕೋರ್ಟ್ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ. </p>.<p>84 ಸಾಕ್ಷಿದಾರರ ಹೇಳಿಕೆಗಳು ಮತ್ತು ದಾಖಲೆಗಳನ್ನು ಪರಿಗಣಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಭರತ್ ಯಾದವ್ ಅವರು, 'ಸ್ವಾಧ್ಯಾಯ ಪರಿವಾರ'ದ 10 ಸದಸ್ಯರು ಹತ್ಯೆ ಮತ್ತು ಇತರ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದಾರೆ.</p>.<p>'ಸ್ವಾಧ್ಯಾಯ ಪರಿವಾರ'ದೊಂದಿಗೆ ಸಂಪರ್ಕದಲ್ಲಿದ್ದ ಅನಿವಾಸಿ ಭಾರತೀಯ ಪಂಕಜ್ ತ್ರಿವೇದಿ ಅವರ ಮೇಲೆ 2006ರ ಜೂನ್ 15ರಂದು ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು.</p>.<p>2001ರ ಭುಜ್ ಭೂಕಂಪ ಪರಿಹಾರಕ್ಕಾಗಿ ವಿದೇಶಿ ದೇಣಿಗೆಯನ್ನು ಸಂಗ್ರಹಿಸಲು ತ್ರಿವೇದಿ ಅವರು ಸ್ವಾಧ್ಯಾಯ ಪರಿವಾರಕ್ಕೆ ಸಹಾಯ ಮಾಡಿದ್ದರು. ಬಳಿಕ ಆ ಹಣದ ವಿನಿಯೋಗದ ಬಗ್ಗೆ ತ್ರಿವೇದಿ ಪ್ರಶ್ನಿಸಿದಾಗ ಸಂಸ್ಥೆಯ ಸದಸ್ಯರು ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲೂ ಸಂಸ್ಥೆಯ ಸದಸ್ಯರಿಗೆ ಹಿನ್ನಡೆಯಾದ ಕಾರಣ ಅವರು ದ್ವೇಷದಿಂದ ತ್ರಿವೇದಿ ಅವರನ್ನು ಹತ್ಯೆಗೈದಿದ್ದಾರೆ ಎಂದು ಪ್ಯಾಸಿಕ್ಯೂಷನ್ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್:</strong> ಆಧ್ಯಾತ್ಮಿಕ ಸಂಸ್ಥೆಯೊಂದಕ್ಕೆ ದೊರೆತಿದ್ದ ವಿದೇಶಿ ದೇಣಿಗೆಯಲ್ಲಿನ ಅವ್ಯವಹಾರದ ಬಗ್ಗೆ ಪ್ರಶ್ನಿಸಿದ್ದ ಅನಿವಾಸಿ ಭಾರತೀಯನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಗೆ ಇಲ್ಲಿನ ಸೆಷನ್ಸ್ ಕೋರ್ಟ್ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ. </p>.<p>84 ಸಾಕ್ಷಿದಾರರ ಹೇಳಿಕೆಗಳು ಮತ್ತು ದಾಖಲೆಗಳನ್ನು ಪರಿಗಣಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಭರತ್ ಯಾದವ್ ಅವರು, 'ಸ್ವಾಧ್ಯಾಯ ಪರಿವಾರ'ದ 10 ಸದಸ್ಯರು ಹತ್ಯೆ ಮತ್ತು ಇತರ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದಾರೆ.</p>.<p>'ಸ್ವಾಧ್ಯಾಯ ಪರಿವಾರ'ದೊಂದಿಗೆ ಸಂಪರ್ಕದಲ್ಲಿದ್ದ ಅನಿವಾಸಿ ಭಾರತೀಯ ಪಂಕಜ್ ತ್ರಿವೇದಿ ಅವರ ಮೇಲೆ 2006ರ ಜೂನ್ 15ರಂದು ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು.</p>.<p>2001ರ ಭುಜ್ ಭೂಕಂಪ ಪರಿಹಾರಕ್ಕಾಗಿ ವಿದೇಶಿ ದೇಣಿಗೆಯನ್ನು ಸಂಗ್ರಹಿಸಲು ತ್ರಿವೇದಿ ಅವರು ಸ್ವಾಧ್ಯಾಯ ಪರಿವಾರಕ್ಕೆ ಸಹಾಯ ಮಾಡಿದ್ದರು. ಬಳಿಕ ಆ ಹಣದ ವಿನಿಯೋಗದ ಬಗ್ಗೆ ತ್ರಿವೇದಿ ಪ್ರಶ್ನಿಸಿದಾಗ ಸಂಸ್ಥೆಯ ಸದಸ್ಯರು ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲೂ ಸಂಸ್ಥೆಯ ಸದಸ್ಯರಿಗೆ ಹಿನ್ನಡೆಯಾದ ಕಾರಣ ಅವರು ದ್ವೇಷದಿಂದ ತ್ರಿವೇದಿ ಅವರನ್ನು ಹತ್ಯೆಗೈದಿದ್ದಾರೆ ಎಂದು ಪ್ಯಾಸಿಕ್ಯೂಷನ್ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>