ಹಿಂಸಾಚಾರ ಘಟನೆ ಕುರಿತು ಪೊಲೀಸರು, ಬಾಲಕರು ಒಳಗೊಂಡಂತೆ ಸುಮಾರು 170 ಜನರನ್ನು ಅಂದು ವಶಕ್ಕೆ ಪಡೆದಿದ್ದರು. ಹಿಂಸೆಯಲ್ಲಿ ಭಾಗಿಯಾಗಿದ್ದ, ಕಲ್ಲು ತೂರಾಟ ನಡೆಸಿದ್ದ ಆರೋಪದಡಿ ಕೆಲವರಿಗೆ ಸಾರ್ವಜನಿಕವಾಗಿ ಛಡಿ ಏಟು ನೀಡಲಾಗಿತ್ತು. ಅಲ್ಲದೆ ಬಂಧಿತರ ಮೇಲೆ ಪೊಲೀಸರು ಕೊಲೆ, ಕೊಲೆಯತ್ನ, ದೊಂಬಿ ಮತ್ತಿತರ ಆರೋಪಗಳಡಿ ಪ್ರಕರಣವನ್ನು ದಾಖಲಿಸಿದ್ದರು.