ನಿರೀಕ್ಷಣಾ ಜಾಮೀನು ಅರ್ಜಿ ತ್ವರಿತ ವಿಚಾರಣೆಗೆ ಚಿದಂಬರಂ ಆಗ್ರಹ: (ನವದೆಹಲಿ ವರದಿ): ಇಲ್ಲಿನ ನ್ಯಾಯಾಲಯದಲ್ಲಿರುವ ಏರ್ಸೆಲ್– ಮ್ಯಾಕ್ಸಿಸ್ ಪ್ರಕರಣದ ವಿಚಾರಣೆಯನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ವಿಳಂಬ ಮಾಡುತ್ತಿವೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು ಸೋಮವಾರ ಆರೋಪಿಸಿದ್ದಾರೆ. ಚಿದಂಬರಂ ಹಾಗೂ ಪುತ್ರ ಕಾರ್ತಿ ಅವರನ್ನು ಮಾರ್ಚ್ 8 ರವರೆಗೆ ಬಂಧಿಸದಂತೆ ನ್ಯಾಯಾಲಯ ಈಗಾಗಲೇ ತಿಳಿಸಿದೆ.