ಇದನ್ನು ಪ್ರಶ್ನಿಸಿಹಿರಿಯ ಸೇನಾ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪಿ.ಕೆ.ಚೌಧರಿಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜೀವ್ ಸಹಾಯಿ ಮತ್ತು ಆಶಾ ಮೆನನ್ ಅವರಿದ್ದ ನ್ಯಾಯಪೀಠವು, ‘ಪ್ರಸ್ತುತ ಯುದ್ಧವೆಂದರೆ, ಪ್ರದೇಶದ ಸ್ವಾಧೀನವಷ್ಟೇ ಅಲ್ಲ. ಒಂದು ರಾಷ್ಟ್ರದ ಆರ್ಥಿಕತೆ ಮೇಲೆ ದಾಳಿ, ದೇಶದೊಳಗೇ ಗಲಭೆ ಸೃಷ್ಟಿಸುವುದೂ ಶತ್ರು ರಾಷ್ಟ್ರಗಳ ಯುದ್ಧದ ಭಾಗವಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ನಂತರದಲ್ಲಿ ಅರ್ಜಿಯನ್ನು ವಜಾಗೊಳಿಸಿತು.