<p><strong>ಮುಂಬೈ</strong>: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಸಮೀಪ ಇಂದು (ಭಾನುವಾರ, ಜೂನ್ 15) ಬೆಳಿಗ್ಗೆ ಸಂಭವಿಸಿರುವ ಹೆಲಿಕಾಪ್ಟರ್ ಅಪಘಾತದ ತನಿಖೆಯನ್ನು 'ವಿಮಾನ ಅಪಘಾತ ತನಿಖಾ ಸಂಸ್ಥೆ' (ಎಎಐಬಿ) ನಡೆಸಲಿದೆ.</p><p>'ಆರ್ಯನ್ ಗ್ರೂಪ್'ಗೆ ಸೇರಿದ ಬೆಲ್–407 ಹೆಲಿಕಾಪ್ಟರ್ ಪತನಗೊಂಡು ಶಿಶು, ಪೈಲಟ್ ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.</p><p>'ಕೇದಾರನಾಥದಿಂದ ಗುಪ್ತಕಾಶಿಯತ್ತ ಹೊರಟಿದ್ದ ಹೆಲಿಕಾಪ್ಟರ್ನಲ್ಲಿ ಒಂದು ಶಿಶು ಹಾಗೂ ಐವರು ಪ್ರಯಾಣಿಕರು, ಒಬ್ಬರು ಸಿಬ್ಬಂದಿ ಇದ್ದರು. ಬೆಳಿಗ್ಗೆ 5.20ರ ಸುಮಾರಿಗೆ ಗೌರಿಕುಂಡದ ಸಮೀಪ ಅಪಘಾತ ಸಂಭವಿಸಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ದುರಂತಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ ನಾಗರಿಕ ವಿಮಾನಯಾನ ಸಚಿವಾಲಯ, ಅಪಘಾತದ ತನಿಖೆಯನ್ನು ಎಎಐಬಿ ನಡೆಸಲಿದೆ ಎಂದು ತಿಳಿಸಿದೆ.</p><p>ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ), ಮುಂಜಾಗ್ರತಾ ಕ್ರಮವಾಗಿ ಚಾರ್ ಧಾಮ್ನತ್ತ ಚಲಿಸುವ ಹೆಲಿಕಾಪ್ಟರ್ಗಳ ಸಂಚಾರವನ್ನು ಮಿತಿಗೊಳಿಸಿದೆ.</p><p>ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ 'AI-171' ಪತನಗೊಂಡು 275ಕ್ಕೂ ಹೆಚ್ಚು ಮಂದಿ ಮೃತಪಟ್ಟ ದುರಂತ ಇತ್ತೀಚೆಗೆ ಸಂಭವಿಸಿತ್ತು. ಅದರ ಬೆನ್ನಲ್ಲೇ ಇದೀಗ, ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ.</p><p>ಏರ್ ಇಂಡಿಯಾ ವಿಮಾನ ಪತನದ ತನಿಖೆ ಹೊಣೆಯನ್ನೂ ಎಎಐಬಿಗೆ ವಹಿಸಲಾಗಿದೆ.</p>.ಕೇದಾರನಾಥ ಬಳಿ ಹೆಲಿಕಾಪ್ಟರ್ ಅಪಘಾತ; ಪೈಲಟ್ ಸೇರಿ 7 ಮಂದಿ ಸಾವು.PHOTOS |ಕೇದಾರನಾಥ ಬಳಿ ಹೆಲಿಕಾಪ್ಟರ್ ಅಪಘಾತ: ಚಿತ್ರಗಳಲ್ಲಿ ನೋಡಿ ದುರಂತದ ಭೀಕರತೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಸಮೀಪ ಇಂದು (ಭಾನುವಾರ, ಜೂನ್ 15) ಬೆಳಿಗ್ಗೆ ಸಂಭವಿಸಿರುವ ಹೆಲಿಕಾಪ್ಟರ್ ಅಪಘಾತದ ತನಿಖೆಯನ್ನು 'ವಿಮಾನ ಅಪಘಾತ ತನಿಖಾ ಸಂಸ್ಥೆ' (ಎಎಐಬಿ) ನಡೆಸಲಿದೆ.</p><p>'ಆರ್ಯನ್ ಗ್ರೂಪ್'ಗೆ ಸೇರಿದ ಬೆಲ್–407 ಹೆಲಿಕಾಪ್ಟರ್ ಪತನಗೊಂಡು ಶಿಶು, ಪೈಲಟ್ ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.</p><p>'ಕೇದಾರನಾಥದಿಂದ ಗುಪ್ತಕಾಶಿಯತ್ತ ಹೊರಟಿದ್ದ ಹೆಲಿಕಾಪ್ಟರ್ನಲ್ಲಿ ಒಂದು ಶಿಶು ಹಾಗೂ ಐವರು ಪ್ರಯಾಣಿಕರು, ಒಬ್ಬರು ಸಿಬ್ಬಂದಿ ಇದ್ದರು. ಬೆಳಿಗ್ಗೆ 5.20ರ ಸುಮಾರಿಗೆ ಗೌರಿಕುಂಡದ ಸಮೀಪ ಅಪಘಾತ ಸಂಭವಿಸಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ದುರಂತಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ ನಾಗರಿಕ ವಿಮಾನಯಾನ ಸಚಿವಾಲಯ, ಅಪಘಾತದ ತನಿಖೆಯನ್ನು ಎಎಐಬಿ ನಡೆಸಲಿದೆ ಎಂದು ತಿಳಿಸಿದೆ.</p><p>ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ), ಮುಂಜಾಗ್ರತಾ ಕ್ರಮವಾಗಿ ಚಾರ್ ಧಾಮ್ನತ್ತ ಚಲಿಸುವ ಹೆಲಿಕಾಪ್ಟರ್ಗಳ ಸಂಚಾರವನ್ನು ಮಿತಿಗೊಳಿಸಿದೆ.</p><p>ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ 'AI-171' ಪತನಗೊಂಡು 275ಕ್ಕೂ ಹೆಚ್ಚು ಮಂದಿ ಮೃತಪಟ್ಟ ದುರಂತ ಇತ್ತೀಚೆಗೆ ಸಂಭವಿಸಿತ್ತು. ಅದರ ಬೆನ್ನಲ್ಲೇ ಇದೀಗ, ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ.</p><p>ಏರ್ ಇಂಡಿಯಾ ವಿಮಾನ ಪತನದ ತನಿಖೆ ಹೊಣೆಯನ್ನೂ ಎಎಐಬಿಗೆ ವಹಿಸಲಾಗಿದೆ.</p>.ಕೇದಾರನಾಥ ಬಳಿ ಹೆಲಿಕಾಪ್ಟರ್ ಅಪಘಾತ; ಪೈಲಟ್ ಸೇರಿ 7 ಮಂದಿ ಸಾವು.PHOTOS |ಕೇದಾರನಾಥ ಬಳಿ ಹೆಲಿಕಾಪ್ಟರ್ ಅಪಘಾತ: ಚಿತ್ರಗಳಲ್ಲಿ ನೋಡಿ ದುರಂತದ ಭೀಕರತೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>