ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ಮಹಾತ್ಮ ಗಾಂಧಿ ಅವರನ್ನು ಜಗತ್ತು ಪೂಜಿಸುತ್ತದೆ. ಯಾರು ಪುರುಷ, ಯುಗಪುರುಷ ಮತ್ತು ಮಹಾಪುರುಷ ಎಂದು ಇತಿಹಾಸ ಹಾಗೂ ಜನರು ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.
ಸೋಮವಾರ ಜೈನ ಧರ್ಮಗುರು ಹಾಗೂ ತತ್ವಜ್ಞಾನಿ ಶ್ರೀಮದ್ ರಾಜಚಂದ್ರ ಅವರ ಜ್ಮನ ದಿನಾಚರಣೆಯಲ್ಲಿ ಮಾತನಾಡಿದ ಜಗದೀಪ್ ಧನಕರ್, ‘ಮಹಾತ್ಮ ಗಾಂಧಿ ಅವರು ಸತ್ಯಾಗ್ರಹ ಮತ್ತು ಅಹಿಂಸಾ ಮಾರ್ಗದ ಮೂಲಕ ಬ್ರಿಟಿಷರ ಗುಲಾಮಗಿರಿಯಿಂದ ನಮ್ಮನ್ನು ಸ್ವತಂತ್ರಗೊಳಿಸಿದರು. ಅದೇ ರೀತಿಯಲ್ಲಿ ಭಾರತದ ಯಶಸ್ವಿ ಪ್ರಧಾನಿ, ನರೇಂದ್ರ ಮೋದಿ ಅವರು ನಾವು ಯಾವಾಗಲೂ ಇರಬೇಕೆಂದು ಬಯಸಿದ ಹಾದಿಯಲ್ಲಿ ನಮ್ಮನ್ನು ಕರೆದೊಯ್ದಿದ್ದಾರೆ’ ಎಂದು ಅವರು ಹೇಳಿದ್ದರು
‘ಮಹಾತ್ಮ ಗಾಂಧಿ ಅವರು ಕಳೆದ ಶತಮಾನದ ಮಹಾಪುರಷರಾಗಿದ್ದರು. ಈ ಶತಮಾನದ ಯುಗಪುರಷ ನರೇಂದ್ರ ಮೋದಿಯವರಾಗಿದ್ದಾರೆ ಎಂದು ನಾನು ಹೇಳಲು ಬಯಸುತ್ತೇನೆ’ ಎಂದು ಧನಕರ್ ತಿಳಿಸಿದ್ದರು.