<p><strong>ನಾಗ್ಪುರ: </strong>ಮಹಾರಾಷ್ಟ್ರದ ಭಂಡಾರ ಆಸ್ಪತ್ರೆಯ ಬೆಂಕಿ ದುರಂತದಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.</p>.<p>ಭಾನಾರ್ಕರ್ ದಂಪತಿಗೆ 14 ವರ್ಷಗಳ ಬಳಿಕ ಮುದ್ದಾದ ಹೆಣ್ಣು ಮಗಳು ಜನಿಸಿದ್ದಳು. ಇದಕ್ಕೂ ಮುನ್ನ ಮೂರು ಬಾರಿ ಮಗು ಜನಿಸುವ ಮುನ್ನವೇ ಮೃತಪಟ್ಟಿತ್ತು. ಆದರೆ ಈಗ ದಂಪತಿಯು 14 ವರ್ಷಗಳ ಬಳಿಕ ಜನಿಸಿದ ಮಗಳನ್ನು ಆಸ್ಪತ್ರೆ ದುರಂತದಲ್ಲಿ ಕಳೆದುಕೊಂಡಿದ್ದಾರೆ.</p>.<p>ಶನಿವಾರ ಸಂಭವಿಸಿದ ಈ ಬೆಂಕಿ ಅವಘಡದಲ್ಲಿ ಭಾನಾರ್ಕರ್ ದಂಪತಿಯ ಮಗಳು ಸೇರಿದಂತೆ ಒಟ್ಟು 10 ನವಜಾತ ಶಿಶುಗಳು ಮೃತಪಟ್ಟಿದೆ.</p>.<p>ಹಿರ್ಕನ್ಯಾ ಭಾನಾರ್ಕರ್ ಅವರು ಜನವರಿ 6ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗರ್ಭಾವಸ್ಥೆಯ ಏಳನೇ ತಿಂಗಳಲ್ಲಿ ಮಗು ಹುಟ್ಟಿದ್ದಳು. ಅಲ್ಲದೆ ಮಗು ಕಡಿಮೆ ತೂಕವನ್ನು ಹೊಂದಿದ್ದ ಕಾರಣ, ಮಗುವನ್ನು ನವಜಾತ ಶಿಶು ನಿಗಾ ಘಟಕದಲ್ಲಿ ಇರಿಸಲಾಗಿತ್ತು.</p>.<p>‘ಈ ರೀತಿಯ ಪರಿಸ್ಥಿತಿ ಯಾರಿಗೂ ಎದುರಾಗಬಾರದು. ಮಕ್ಕಳು ಬದುಕಿ, ಆಟವಾಡುತ್ತಿರಬೇಕು’ ಎಂದು ಹಿರ್ಕನ್ಯಾ ಭಾನಾರ್ಕರ್ ಅವರು ಬೇಸರ ವ್ಯಕ್ತಪಡಿಸಿದರು.</p>.<p>ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರ ಮಕ್ಕಳನ್ನು ಕಳೆದುಕೊಂಡ ಪೋಷಕರನ್ನು ಭೇಟಿಯಾಗಿ ಸಾಂತ್ವನ ನೀಡಿದರು. ಈ ವೇಳೆ ಅವಘಡದ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.</p>.<p>ಈ ಬಳಿಕ ಮಾಧ್ಯಮದವರಲ್ಲಿ ಮಾತನಾಡಿದ ಅವರು,‘ ಈ ಘಟನೆ ಮನಸ್ಸಿಗೆ ಅಘಾತವನ್ನು ನೀಡಿದೆ. ನಾನು ಇವತ್ತು ಪೋಷಕರನ್ನು ಭೇಟಿಯಾದೆ. ಅವರಿಗೆ ಸಮಾಧಾನ ಮಾಡಲು ನನ್ನ ಬಳಿ ಯಾವುದೇ ಶಬ್ಧಗಳಿರಲಿಲ್ಲ. ನಾನು ಘಟನಾ ಸ್ಥಳವನ್ನು ಪರಿಶೀಲಿಸಿದ್ದೇನೆ’ ಎಂದರು.</p>.<p>ಠಾಕ್ರೆ ಅವರು ಆಸ್ಪತ್ರೆ ಸಿಬ್ಬಂದಿ ಜತೆಗೂ ಈ ಬಗ್ಗೆ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗ್ಪುರ: </strong>ಮಹಾರಾಷ್ಟ್ರದ ಭಂಡಾರ ಆಸ್ಪತ್ರೆಯ ಬೆಂಕಿ ದುರಂತದಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.</p>.<p>ಭಾನಾರ್ಕರ್ ದಂಪತಿಗೆ 14 ವರ್ಷಗಳ ಬಳಿಕ ಮುದ್ದಾದ ಹೆಣ್ಣು ಮಗಳು ಜನಿಸಿದ್ದಳು. ಇದಕ್ಕೂ ಮುನ್ನ ಮೂರು ಬಾರಿ ಮಗು ಜನಿಸುವ ಮುನ್ನವೇ ಮೃತಪಟ್ಟಿತ್ತು. ಆದರೆ ಈಗ ದಂಪತಿಯು 14 ವರ್ಷಗಳ ಬಳಿಕ ಜನಿಸಿದ ಮಗಳನ್ನು ಆಸ್ಪತ್ರೆ ದುರಂತದಲ್ಲಿ ಕಳೆದುಕೊಂಡಿದ್ದಾರೆ.</p>.<p>ಶನಿವಾರ ಸಂಭವಿಸಿದ ಈ ಬೆಂಕಿ ಅವಘಡದಲ್ಲಿ ಭಾನಾರ್ಕರ್ ದಂಪತಿಯ ಮಗಳು ಸೇರಿದಂತೆ ಒಟ್ಟು 10 ನವಜಾತ ಶಿಶುಗಳು ಮೃತಪಟ್ಟಿದೆ.</p>.<p>ಹಿರ್ಕನ್ಯಾ ಭಾನಾರ್ಕರ್ ಅವರು ಜನವರಿ 6ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗರ್ಭಾವಸ್ಥೆಯ ಏಳನೇ ತಿಂಗಳಲ್ಲಿ ಮಗು ಹುಟ್ಟಿದ್ದಳು. ಅಲ್ಲದೆ ಮಗು ಕಡಿಮೆ ತೂಕವನ್ನು ಹೊಂದಿದ್ದ ಕಾರಣ, ಮಗುವನ್ನು ನವಜಾತ ಶಿಶು ನಿಗಾ ಘಟಕದಲ್ಲಿ ಇರಿಸಲಾಗಿತ್ತು.</p>.<p>‘ಈ ರೀತಿಯ ಪರಿಸ್ಥಿತಿ ಯಾರಿಗೂ ಎದುರಾಗಬಾರದು. ಮಕ್ಕಳು ಬದುಕಿ, ಆಟವಾಡುತ್ತಿರಬೇಕು’ ಎಂದು ಹಿರ್ಕನ್ಯಾ ಭಾನಾರ್ಕರ್ ಅವರು ಬೇಸರ ವ್ಯಕ್ತಪಡಿಸಿದರು.</p>.<p>ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರ ಮಕ್ಕಳನ್ನು ಕಳೆದುಕೊಂಡ ಪೋಷಕರನ್ನು ಭೇಟಿಯಾಗಿ ಸಾಂತ್ವನ ನೀಡಿದರು. ಈ ವೇಳೆ ಅವಘಡದ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.</p>.<p>ಈ ಬಳಿಕ ಮಾಧ್ಯಮದವರಲ್ಲಿ ಮಾತನಾಡಿದ ಅವರು,‘ ಈ ಘಟನೆ ಮನಸ್ಸಿಗೆ ಅಘಾತವನ್ನು ನೀಡಿದೆ. ನಾನು ಇವತ್ತು ಪೋಷಕರನ್ನು ಭೇಟಿಯಾದೆ. ಅವರಿಗೆ ಸಮಾಧಾನ ಮಾಡಲು ನನ್ನ ಬಳಿ ಯಾವುದೇ ಶಬ್ಧಗಳಿರಲಿಲ್ಲ. ನಾನು ಘಟನಾ ಸ್ಥಳವನ್ನು ಪರಿಶೀಲಿಸಿದ್ದೇನೆ’ ಎಂದರು.</p>.<p>ಠಾಕ್ರೆ ಅವರು ಆಸ್ಪತ್ರೆ ಸಿಬ್ಬಂದಿ ಜತೆಗೂ ಈ ಬಗ್ಗೆ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>