<p><strong>ನವದೆಹಲಿ:</strong> 1971ರ ಯುದ್ಧ ಸಂದರ್ಭದಲ್ಲಿ ಪಾಕಿಸ್ತಾನದ ಸೆರೆಯಿಂದ ಧೈರ್ಯದಿಂದ ಪಾರಾಗಿ ಬಂದಿದ್ದ ಭಾರತೀಯ ವಾಯು ಪಡೆಯ ಅನುಭವಿ, ಸಾಹಸಿ ನಿವೃತ್ತ ಗ್ರೂಪ್ ಕ್ಯಾಪ್ಟನ್ ಡಿ.ಕೆ.ಪಾರುಲ್ಕರ್ ಅವರು ನಿಧನರಾಗಿದ್ದಾರೆ ಎಂದು ಐಎಎಫ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.</p>.<p>‘ಪಾರುಲ್ಕರ್ ಅವರು ಅತ್ಯಂತ ಚತುರ, ಸಾಹಸಿಯಾಗಿದ್ದರು. ಅವರ ನಿಧನಕ್ಕೆ ವಾಯುಪಡೆಯ ಎಲ್ಲ ಸಿಬ್ಬಂದಿಯೂ ಶ್ರದ್ಧಾಂಜಲಿ ಸಲ್ಲಿಸುತ್ತೇವೆ‘ ಎಂದು ‘ಎಕ್ಸ್’ನಲ್ಲಿ ಐಎಎಫ್ ಸ್ಮರಿಸಿಕೊಂಡಿದೆ.</p>.<p>1963ರಲ್ಲಿ ವಾಯುಪಡೆ ಸೇವೆಗೆ ಸೇರಿದ್ದ ಪಾರುಲ್ಕರ್, 1965ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಭಾಗಿಯಾಗಿದ್ದರು. ಅವರ ವಿಮಾನಕ್ಕೆ ಶತ್ರು ದಾಳಿ ನಡೆಸಿದಾಗ ಬಲಭುಜಕ್ಕೆ ಗಾಯವಾಗಿತ್ತು. ಆದರೂ ವಿಮಾನವನ್ನು ವಾಯುನೆಲೆಗೆ ವಾಪಾಸ್ ತಂದಿದ್ದರು.</p>.<p>1971ರ ಸಮರದ ವೇಳೆ ವಿಂಗ್ ಕಮಾಂಡರ್ ಆಗಿದ್ದ ಅವರು ಯುದ್ಧ ಕೈದಿ ಎಂದು ಘೋಷಿಸಲ್ಪಟ್ಟಿದ್ದರು. ಆನಂತರ ತನ್ನ ಇಬ್ಬರು ಸಹೋದ್ಯೋಗಿಗಳೊಂದಿಗೆ ಪಾಕಿಸ್ತಾನ ಯುದ್ಧ ಕೈದಿಗಳ ಶಿಬಿರದಿಂದ ಪಾರಾಗಿ ಬಂದಿದ್ದರು ಎಂದು ವಾಯುಪಡೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> 1971ರ ಯುದ್ಧ ಸಂದರ್ಭದಲ್ಲಿ ಪಾಕಿಸ್ತಾನದ ಸೆರೆಯಿಂದ ಧೈರ್ಯದಿಂದ ಪಾರಾಗಿ ಬಂದಿದ್ದ ಭಾರತೀಯ ವಾಯು ಪಡೆಯ ಅನುಭವಿ, ಸಾಹಸಿ ನಿವೃತ್ತ ಗ್ರೂಪ್ ಕ್ಯಾಪ್ಟನ್ ಡಿ.ಕೆ.ಪಾರುಲ್ಕರ್ ಅವರು ನಿಧನರಾಗಿದ್ದಾರೆ ಎಂದು ಐಎಎಫ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.</p>.<p>‘ಪಾರುಲ್ಕರ್ ಅವರು ಅತ್ಯಂತ ಚತುರ, ಸಾಹಸಿಯಾಗಿದ್ದರು. ಅವರ ನಿಧನಕ್ಕೆ ವಾಯುಪಡೆಯ ಎಲ್ಲ ಸಿಬ್ಬಂದಿಯೂ ಶ್ರದ್ಧಾಂಜಲಿ ಸಲ್ಲಿಸುತ್ತೇವೆ‘ ಎಂದು ‘ಎಕ್ಸ್’ನಲ್ಲಿ ಐಎಎಫ್ ಸ್ಮರಿಸಿಕೊಂಡಿದೆ.</p>.<p>1963ರಲ್ಲಿ ವಾಯುಪಡೆ ಸೇವೆಗೆ ಸೇರಿದ್ದ ಪಾರುಲ್ಕರ್, 1965ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಭಾಗಿಯಾಗಿದ್ದರು. ಅವರ ವಿಮಾನಕ್ಕೆ ಶತ್ರು ದಾಳಿ ನಡೆಸಿದಾಗ ಬಲಭುಜಕ್ಕೆ ಗಾಯವಾಗಿತ್ತು. ಆದರೂ ವಿಮಾನವನ್ನು ವಾಯುನೆಲೆಗೆ ವಾಪಾಸ್ ತಂದಿದ್ದರು.</p>.<p>1971ರ ಸಮರದ ವೇಳೆ ವಿಂಗ್ ಕಮಾಂಡರ್ ಆಗಿದ್ದ ಅವರು ಯುದ್ಧ ಕೈದಿ ಎಂದು ಘೋಷಿಸಲ್ಪಟ್ಟಿದ್ದರು. ಆನಂತರ ತನ್ನ ಇಬ್ಬರು ಸಹೋದ್ಯೋಗಿಗಳೊಂದಿಗೆ ಪಾಕಿಸ್ತಾನ ಯುದ್ಧ ಕೈದಿಗಳ ಶಿಬಿರದಿಂದ ಪಾರಾಗಿ ಬಂದಿದ್ದರು ಎಂದು ವಾಯುಪಡೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>