<p><strong>ನವದೆಹಲಿ</strong>: ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ನಲ್ಲಿ ಮಧ್ಯಮವರ್ಗದ ತೆರಿಗೆ ಹೊರೆಯನ್ನು ತಗ್ಗಿಸಿದೆ. ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ₹2.5 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಮುಂದಿನ ಹಣಕಾಸು ವರ್ಷದಿಂದ ಈ ಪ್ರಯೋಜನ ದೊರೆಯಲಿದೆ.</p>.<p>ಈ ನಿರ್ಧಾರದಿಂದ ದೇಶದಲ್ಲಿನಅಂದಾಜು 3 ಕೋಟಿಯಷ್ಟು ವೇತನ ವರ್ಗ, ಪಿಂಚಣಿದಾರರು, ಸ್ವ ಉದ್ಯೋಗ ನಡೆಸುತ್ತಿರುವವರು, ಸಣ್ಣ ಉದ್ದಿಮೆ ಹಾಗೂ ಸಣ್ಣ ವರ್ತಕರು, ಹಿರಿಯ ನಾಗರಿಕರಿಗೆ ಮುಂದಿನ ವರ್ಷಕ್ಕೆ₹ 18,500 ಕೋಟಿಗಳಷ್ಟು ತೆರಿಗೆ ಉಳಿತಾಯವಾಗಲಿದೆ ಎಂದು ಅಂದಾಜು ಮಾಡಲಾಗಿದೆ.</p>.<p>ತೆರಿಗೆ ಹಂತ ಮತ್ತು ಪ್ರಮಾಣದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ₹ 5 ಲಕ್ಷದಿಂದ ₹ 10 ಲಕ್ಷದವರೆಗಿನ ಆದಾಯಕ್ಕೆ ಶೇ 20ರಷ್ಟು, ₹ 10 ಲಕ್ಷಕ್ಕಿಂತ ಅಧಿಕ ವರಮಾನಕ್ಕೆ ಶೇ 30ರಷ್ಟು ತೆರಿಗೆಯೇ ಇರಲಿದೆ.</p>.<p><strong>ಯಾವುದಕ್ಕೆಲ್ಲ ವಿನಾಯ್ತಿ:</strong>ಬ್ಯಾಂಕ್ ಮತ್ತು ಅಂಚೆ ಕಚೇರಿ ಠೇವಣಿಗಳ ಮೇಲೆ ಪಡೆಯುವ ಬಡ್ಡಿ ವರಮಾನಕ್ಕೆ ಇದ್ದ ತೆರಿಗೆ ವಿನಾಯ್ತಿ ಮೊತ್ತವನ್ನು ₹ 10 ಸಾವಿರದಿಂದ ₹ 40 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಸಣ್ಣ ಹೂಡಿಕೆದಾರರು ಮತ್ತು ಗೃಹಿಣಿಯರಿಗೆ ಅನುಕೂಲವಾಗಲಿದೆ.</p>.<p>ತೆರಿಗೆ ಪಾವತಿದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಮೌಲ್ಯ ನಿರ್ಧಾರಿತ ಬಾಡಿಗೆ ಮೇಲಿನ ತೆರಿಗೆ ಕಡಿತವನ್ನು ಈಗಿರುವ ₹ 1.80 ಲಕ್ಷದಿಂದ ₹ 2.40 ಲಕ್ಷಕ್ಕೆ ಹೆಚ್ಚಿಸಲುನಿರ್ಧರಿಸಲಾಗಿದೆ.</p>.<p>ಮಾರಾಟವಾಗದೇ ಉಳಿದಿರುವ ವಸತಿ ನಿವೇಶನಗಳಿಗೆ ಎರಡು ವರ್ಷಗಳವರೆಗೆ ತೆರಿಗೆ ವಿನಾಯ್ತಿಯನ್ನು ಪ್ರಸ್ತಾಪಿಸಲಾಗಿದೆ. ಸದ್ಯಕ್ಕೆ ಒಂದು ವರ್ಷದವರೆಗೆ ವಿನಾಯ್ತಿ ಇದೆ.</p>.<p>2020ರ ಮಾರ್ಚ್ 31ರವರೆಗೆ ಗೃಹ ಯೋಜನೆಗೆ ಒಪ್ಪಿಗೆ ಪಡೆದಿದ್ದರೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80–ಐಬಿಎ ಅಡಿ ತೆರಿಗೆ ಪ್ರಯೋಜನ ಸಿಗಲಿದೆ.</p>.<p>**</p>.<p><strong>ಆದಾಯ ತೆರಿಗೆ ಗೊಂದಲ ಬೇಡ</strong></p>.<p>‘ಆದಾಯ ತೆರಿಗೆ ಬಗ್ಗೆ ಸಾಕಷ್ಟು ಜನರಿಗೆ ಗೊಂದಲ ಉಂಟಾಗಿದೆ. ಇಲ್ಲಿ ಒಂದು ಮಾತು ನೆನಪಿನಲ್ಲಿಡಿ. ಬಜೆಟ್ನಲ್ಲಿ ತೆರಿಗೆ ವಿನಾಯ್ತಿ ನೀಡಲಾಗಿದೆಯೇ ಹೊರತು ತೆರಿಗೆ ಮಿತಿಗಳನ್ನು ಬದಲಾಯಿಸಿಲ್ಲ. ಇದರಂತೆ ₹ 5 ಲಕ್ಷ ವರೆಗಿನ ನಿವ್ವಳ ಆದಾಯ ಹೊಂದಿರುವವರು ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ₹ 5 ಲಕ್ಷಕ್ಕಿಂತ ಹೆಚ್ಚು ನಿವ್ವಳ ಆದಾಯ ಹೊಂದಿದ್ದರೆ ತೆರಿಗೆ ಪಾವತಿಸಬೇಕಾಗುತ್ತದೆ. ₹ 5 ಲಕ್ಷದ ವರೆಗಿನ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯ್ತಿ ನೀಡುವುದರಿಂದ ₹ 12,500 ತೆರಿಗೆ ಉಳಿತಾಯವಾಗಲಿದೆ.</p>.<p>₹ 5 ಲಕ್ಷದ ವರೆಗಿನ ಆದಾಯದ ಜತೆಗೆ ₹ 50 ಸಾವಿರದ ಸ್ಟ್ಯಾಂಡರ್ಡ್ ಡಿಡಕ್ಷನ್, ಸೆಕ್ಷನ್ 80 ಸಿ ಅಡಿಯಲ್ಲಿ ₹ 1.5 ಲಕ್ಷ, 80 ಡಿ ಅಡಿಯಲ್ಲಿ ಆರೋಗ್ಯ ವಿಮೆಯ ಲಾಭ, ಸೆಕ್ಷನ್ 80 ಸಿಸಿಡಿ ( 1 ಬಿ) ಅಡಿಯಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ₹ 50 ಸಾವಿರ ವಿನಾಯ್ತಿ, ಗೃಹ ಸಾಲದ ಬಡ್ಡಿ ಮೇಲೆ ವಿನಾಯ್ತಿ ಸಿಗಲಿದೆ. ₹ 5 ಲಕ್ಷ ಮೇಲ್ಪಟ್ಟು ಆದಾಯ ಇರುವವರಿಗೆ ಈ ಹಿಂದೆ ಇದ್ದ ತೆರಿಗೆ ಮಿತಿಗಳು ಮುಂದುವರಿಯಲಿದೆ.</p>.<p>**</p>.<p><strong>ಬಾಡಿಗೆ ಮನೆಗೆ ವಿನಾಯ್ತಿ</strong></p>.<p>ಒಂದಕ್ಕಿಂತ ಹೆಚ್ಚು ಮನೆಗಳಲ್ಲಿ ವಾಸವಿದ್ದರೆ, ಅಂದರೆ ಕುಟುಂಬ ಒಂದು ಕಡೆ ನೆಲೆಸಿದ್ದು, ಯಜಮಾನ ಕೆಲಸಕ್ಕಾಗಿ ಬೇರೆ ಕಡೆ ಮನೆ ಮಾಡಿದ್ದರೆ ಎರಡೂ ಮನೆಗೂ ಬಾಡಿಗೆ ಮೇಲಿನ ತೆರಿಗೆಯಿಂದ ವಿನಾಯ್ತಿ ಸಿಗಲಿದೆ.</p>.<p>ಸ್ಥಿರಾಸ್ತಿ ಮಾರಾಟದಿಂದ ಬರುವ ₹ 2 ಕೋಟಿ ಬಂಡವಾಳ ಗಳಿಕೆಯನ್ನು ಎರಡು ಮನೆಗಳ ಖರೀದಿಗೆ ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಒಂದು ಬಾರಿಗೆ ಮಾತ್ರ ಇದರ ಪ್ರಯೋಜನ ಪಡೆದುಕೊಳ್ಳಬಹುದು.</p>.<p><strong>ಎಂಎಸ್ಎಂಇಗೆ 7 ಸಾವಿರ ಕೋಟಿ</strong></p>.<p>ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ₹7,011 ಕೋಟಿ ಹಣ ನೀಡಲಾಗಿದೆ. ಇದು ಈವರೆಗಿನ ಅತಿ ಹೆಚ್ಚು ಅನುದಾನವಾಗಿದೆ. ಈ ಹಿಂದಿನ ಯಾವುದೇ ಬಜೆಟ್ಗಳಲ್ಲಿ ಇಷ್ಟೊಂದು ಹಣವನ್ನು ನೀಡಿರಲಿಲ್ಲ.</p>.<p>ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಹೂಡಿಕೆಯ ಉದ್ದಿಮೆಗಳಿಗೆ ಈ ಹಣ ನೀಡಲಾಗಿದೆ. ಇದರಿಂದ ದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಬಹುದಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.</p>.<p>ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಗೆ (ಪಿಎಂಇಜಿಪಿ) ₹2,327 ಕೋಟಿ ನೀಡಲಾಗಿದೆ.</p>.<p>ಪಿಎಂಇಜಿಪಿಯಿಂದ ಸುಸ್ಥಿರ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಎಂಎಸ್ಎಂಇಗಳಿಗೆ ಹಣಕಾಸು ಖಾತ್ರಿಗಾಗಿ ಹಣಕಾಸು ಬೆಂಬಲ ಯೋಜನೆಯಡಿ ₹597 ಕೋಟಿ ನೀಡಲಾಗಿದೆ.</p>.<p><strong>₹ 34.17 ಲಕ್ಷ ಕೋಟಿಗೆ ಲೇಖಾನುದಾನ</strong></p>.<p>ಮುಂದಿನ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳ ಕಾಲ ವೆಚ್ಚ ಮಾಡಲು ಕೇಂದ್ರ ಸರ್ಕಾರ ₹ 34.17 ಲಕ್ಷ ಕೋಟಿಗಳ ಲೇಖಾನುದಾನಕ್ಕೆ ಸಂಸತ್ತಿನ ಒಪ್ಪಿಗೆ ಕೇಳಿದೆ.</p>.<p>2019–20ನೆ ಹಣಕಾಸು ವರ್ಷಕ್ಕೆ ಒಟ್ಟು ₹ 97.43 ಲಕ್ಷ ಕೋಟಿ ವೆಚ್ಚ ತಗುಲಿದೆ ಎಂದು ಮಧ್ಯಂತರ ಬಜೆಟ್ನಲ್ಲಿ ಅಂದಾಜಿಸಲಾಗಿದೆ.</p>.<p>ನಿಗದಿತ ಅವಧಿಗೆ ವೆಚ್ಚ ಮಾಡಲು ಮುಂಚಿತವಾಗಿಯೇ ಸಂಸತ್ತು ಅನುಮೋದನೆ ನೀಡುವುದಕ್ಕೆ ಲೇಖಾನುದಾನ ಎನ್ನುತ್ತಾರೆ.</p>.<p>ಲೇಖಾನುದಾನ ಕೋರಿದ ₹ 34.17 ಲಕ್ಷ ಕೋಟಿಯಲ್ಲಿ ₹ 65,366 ಕೋಟಿಗಳನ್ನು ಆಹಾರ ಮತ್ತು ಪಡಿತರ ವಿತರಣೆಗೆ ನಿಗದಿಪಡಿಸಲಾಗಿದೆ. ಗ್ರಾಮೀಣಾಭಿವೃದ್ಧಿಗೆ ₹ 20 ಸಾವಿರ ಕೋಟಿ ಮತ್ತು ರಕ್ಷಣಾ ಸೇವೆಗಳಿಗೆ ₹ 37,423 ಕೋಟಿ ನೀಡಲು ಕೋರಲಾಗಿದೆ.</p>.<p><strong>3 ಬ್ಯಾಂಕ್ಗಳ ನಿರ್ಬಂಧ ಸಡಿಲ</strong></p>.<p>ಬಂಡವಾಳ ನೆರವು ನೀಡುವು ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ವಿಧಿಸಿದ್ದ ಕಠಿಣ ಸ್ವರೂಪದ ನಿರ್ಬಂಧಿತ ಕ್ರಮಗಳಿಂದ (ಪಿಸಿಎ) ಮೂರು ಬ್ಯಾಂಕ್ಗಳನ್ನು ಕೈಬಿಡಲಾಗಿದೆ.</p>.<p>‘ಒಟ್ಟಾರೆ 11 ಬ್ಯಾಂಕ್ಗಳ ವಿರುದ್ಧ ಪಿಸಿಎ ವಿಧಿಸಲಾಗಿತ್ತು. ಅವುಗಳಲ್ಲಿ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮೇಲಿದ್ದ ನಿರ್ಬಂಧಗಳನ್ನು ಆರ್ಬಿಐಕೈಬಿಟ್ಟಿದೆ’ ಎಂದು ಗೋಯಲ್ ತಿಳಿಸಿದ್ದಾರೆ.</p>.<p>‘ಇನ್ನುಳಿದ 8 ಬ್ಯಾಂಕ್ಗಳು ಶೀಘ್ರವೇ ನಿರ್ಬಂಧದಿಂದ ಹೊರಬರುವ ವಿಶ್ವಾಸವಿದೆ’ ಎಂದಿದ್ದಾರೆ.</p>.<p><strong>5 ವರ್ಷದಲ್ಲಿ ₹ 16.96 ಲಕ್ಷ ಕೋಟಿ ಎಫ್ಡಿಐ</strong></p>.<p>ಐದು ವರ್ಷದಲ್ಲಿ ₹ 16.96 ಲಕ್ಷ ಕೋಟಿಯಷ್ಟು ವಿದೇಶಿ ನೇರ ಬಂಡವಾಳ (ಎಫ್ಡಿಐ) ಹರಿದುಬಂದಿದೆ.</p>.<p>ಸೇವೇಗಳು, ಕಂಪ್ಯೂಟರ್ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್, ದೂರಸಂಪರ್ಕ, ವ್ಯಾಪಾರ, ನಿರ್ಮಾಣ, ವಾಹನ ಮತ್ತು ವಿದ್ಯುತ್ ವಲಯಗಳು ಅತಿ ಹೆಚ್ಚಿನ ಎಫ್ಡಿಐ ಆಕರ್ಷಿಸಿವೆ.ಮಾರಿಷಸ್, ಸಿಂಗಪುರ, ನೆದರ್ಲೆಂಡ್ಸ್, ಅಮೆರಿಕ ಮತ್ತು ಜಪಾನ್ ಎಫ್ಡಿಐನ ಪ್ರಮುಖ ಮೂಲಗಳಾಗಿವೆ.</p>.<p><strong>ಗುರಿ ತಲುಪದ ಜಿಎಸ್ಟಿ ಸಂಗ್ರಹ</strong></p>.<p>ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್ಟಿ) ₹ 7.43 ಲಕ್ಷ ಕೋಟಿ ಸಂಗ್ರಹಿಸುವುದಾಗಿ ಬಜೆಟ್ನಲ್ಲಿ ಅಂದಾಜಿಸಲಾಗಿತ್ತು.ಆದರೆ, ಪರಿಷ್ಕೃತ ಅಂದಾಜಿನಲ್ಲಿ₹ 6.43 ಲಕ್ಷ ಕೋಟಿಗೆ ತಗ್ಗಿಸಲಾಗಿದೆ.</p>.<p>10 ತಿಂಗಳಿನಲ್ಲಿ (ಏಪ್ರಿಲ್–ಜನವರಿ) ಕೇಂದ್ರ ಮತ್ತು ರಾಜ್ಯಗಳ ಜಿಎಸ್ಟಿ ಸಂಗ್ರಹ ₹ 9.71 ಲಕ್ಷ ಕೋಟಿಯಷ್ಟಾಗಿದೆ.</p>.<p>ಪ್ರಸಕ್ತ ಹಣಕಾಸು ವರ್ಷದಲ್ಲಿ ತಿಂಗಳ ಸರಾಸರಿ ಜಿಎಸ್ಟಿ ಸಂಗ್ರಹ ₹ 89,700 ಕೋಟಿಯಿಂದ ₹ 97,100 ಕೋಟಿಗೆ ಏರಿಕೆಯಾಗಿದೆ.</p>.<p>ವಿನಾಯ್ತಿ ಮತ್ತು ಕಡಿತದ ಹೊರತಾಗಿಯೂ ವರಮಾನ ಸಂಗ್ರಹ ಉತ್ತೇಜನಕಾರಿಯಾಗಿದೆ ಎಂದು ಗೋಯಲ್ ತಿಳಿಸಿದ್ದಾರೆ.</p>.<p>2019–20ನೇ ಹಣಕಾಸು ವರ್ಷದಲ್ಲಿ ಜಿಎಸ್ಟಿಯಿಂದ ₹ 7.61 ಕೋಟಿ ಸಂಗ್ರಹಿಸುವ ಅಂದಾಜು ಮಾಡಲಾಗಿದೆ.</p>.<p>ಬಡವರು ಮತ್ತು ಮಧ್ಯಮ ವರ್ಗ ಬಳಸುತ್ತಿರುವಬಹುತೇಕ ಅಗತ್ಯ ವಸ್ತುಗಳಲ್ಲಿ ಕೆಲವು ಶೂನ್ಯ ತೆರಿಗೆಯಲ್ಲಿದ್ದರೆ, ಇನ್ನೂ ಕೆಲವು ಶೇ 5 ರ ತೆರಿಗೆಯಲ್ಲಿವೆ.</p>.<p>**</p>.<p><strong>ಬಜೆಟ್–2019: ಪ್ರತಿಕ್ರಿಯೆ</strong></p>.<p>ದೇಶದ ಯುವಜನರು, ರೈತರು ಹಾಗೂ ಬಡವರ ಆಕಾಂಕ್ಷೆಗಳನ್ನು ಈಡೇರಿಸುವ ಮೋದಿ ಸರ್ಕಾರದ ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ.</p>.<p><em><strong>–ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ</strong></em></p>.<p>**</p>.<p>ನೋಟು ರದ್ದು, ಕಪ್ಪು ಹಣ ತಡೆಯಿಂದ ಈವರೆಗೆ ₹1.30 ಲಕ್ಷ ಕೋಟಿ ಅಘೋಷಿತ ಆಸ್ತಿ ಪತ್ತೆಯಾಗಿದೆ. ಅಲ್ಲದೆ ₹50 ಸಾವಿರ ಕೋಟಿ ವಶಕ್ಕೆ ಪಡೆಯಲಾಗಿದೆ.</p>.<p><em><strong>–ಪಿಯೂಷ್ ಗೋಯಲ್, ಹಣಕಾಸು ಸಚಿವ</strong></em></p>.<p><em><strong>**</strong></em></p>.<p>ಕೇಂದ್ರ ಬಜೆಟ್ ಬಿಜೆಪಿ ಪ್ರಣಾಳಿಕೆ ಇದ್ದಂತಿದೆ. ಲೋಕಸಭಾ ಚುನಾವಣೆ ಹತ್ತಿರದಲ್ಲಿರುವಾಗ ಮತದಾರರಿಗೆ ಲಂಚ ನೀಡಲು ಬಿಜೆಪಿ ಈ ಮೂಲಕ ಯತ್ನಿಸಿದೆ. ಇವು ಕೇವಲ ಹುಸಿ ಭರವಸೆಗಳು.</p>.<p><em><strong>–ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ</strong></em></p>.<p><em><strong>**</strong></em></p>.<p>ಇದು ಐತಿಹಾಸಿಕ ಬಜೆಟ್. ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ಸರ್ಕಾರ ಬಯಸಿದ್ದು, ಇದು ಬಜೆಟ್ನ ಧ್ಯೇಯವಾಗಿದೆ.</p>.<p><em><strong>–ರಾಜನಾಥ ಸಿಂಗ್, ಕೇಂದ್ರ ಗೃಹ ಸಚಿವ</strong></em></p>.<p>**</p>.<p>ಲೋಕಸಭಾ ಚುನಾವಣೆ ದೃಷ್ಟಿಯಿಂದ ಮಂಡಿಸಿರುವ ಬಜೆಟ್ ಇದು. ಆರ್ಥಿಕತೆಯನ್ನು ಸರಿದೂಗಿಸುವಲ್ಲಿ ಆಗಿರುವ ಭಾರಿ ವೈಫಲ್ಯವನ್ನು ಮರೆಮಾಚುವ ಯತ್ನ ಇಲ್ಲಿದೆ.</p>.<p><em><strong>–ಡಿ. ರಾಜಾ, ಸಿಪಿಐ ಮುಖಂಡ</strong></em></p>.<p>**</p>.<p>ಮಧ್ಯಮವರ್ಗಕ್ಕೆ ತೆರಿಗೆ ಮಿತಿ ಏರಿಸಿರುವುದನ್ನು ಸ್ವಾಗತಿಸುತ್ತೇನೆ. ತಿಂಗಳಿಗೆ 500 ರೂಪಾಯಿಯಲ್ಲಿ ರೈತರು ಗೌರವಯುತ ಜೀವನ ನಿರ್ವಹಿಸಲು ಸಾಧ್ಯವೇ?</p>.<p><strong><em>–ಶಶಿ ತರೂರ್, ಕಾಂಗ್ರೆಸ್ ಮುಖಂಡ</em></strong></p>.<p><strong><em>**</em></strong></p>.<p>ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಹರಿಸಿರುವುದು ಸ್ವಾಗತಾರ್ಹ. ಮಾರುಕಟ್ಟೆ ಸಂಪರ್ಕ, ಉಗ್ರಾಣ, ಕೃಷಿ ಉತ್ಪನ್ನ ಸಂಕ್ಷರಣೆಗೆ ಒತ್ತು ಒಳ್ಳೆಯ ಕ್ರಮ.</p>.<p><strong><em>–ಎಚ್.ಕೆ. ಭನ್ವಾಲಾ, ನಬಾರ್ಡ್ ಮುಖ್ಯಸ್ಥ</em></strong></p>.<p><strong>ಇವನ್ನೂ ಓದಿ...</strong></p>.<p>*<a href="https://www.prajavani.net/stories/national/budget-2019-tax-rebate-611560.html"><strong>ನಿಮ್ಮ ಆದಾಯಕ್ಕೂ ಇದೆಯೇ ತೆರಿಗೆ ವಿನಾಯಿತಿ? ಬಜೆಟ್ ಬಳಿಕ ಆಗಿದ್ದೇನು?</strong></a></p>.<p><strong>*<a href="https://www.prajavani.net/stories/national/budget-2019-rashtriya-gokul-611559.html">ರಾಷ್ಟ್ರೀಯ ಕಾಮಧೇನು ಆಯೋಗ ರಚನೆ, ಗೋಕುಲ ಮಿಷನ್ಗೆ ₹750 ಕೋಟಿ</a></strong></p>.<p><strong>*<a href="https://cms.prajavani.net/stories/national/www.prajavani.net/stories/national/central-budget-2019-welfare-611548.html">ಮಧ್ಯಮ ವರ್ಗ, ರೈತ, ಕಾರ್ಮಿಕರಿಗೆ ಬಜೆಟ್ನಲ್ಲಿ ಏನೇನಿದೆ? ಇಲ್ಲಿದೆ ಮಾಹಿತಿ</a></strong></p>.<p><strong>*<a href="https://www.prajavani.net/stories/national/pradhan-mantri-kisan-samman-611531.html" target="_blank">‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಸ್ಥಾಪನೆ, ರೈತರ ಖಾತೆಗೆ ₹6 ಸಾವಿರ</a></strong></p>.<p><strong>*<a href="https://www.prajavani.net/stories/national/central-budget-2019-scst-fund-611566.html">ಎಸ್ಸಿ, ಎಸ್ಟಿ ಅನುದಾನ ಗಣನೀಯ ಪ್ರಮಾಣದಲ್ಲಿ ಹೆಚ್ಚಳ</a></strong></p>.<p><strong>*<a href="https://www.prajavani.net/stories/national/budget-education-2019-611572.html">ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ: ₹93 ಸಾವಿರ ಕೋಟಿ ಅನುದಾನ</a></strong></p>.<p><strong>*<a href="https://www.prajavani.net/stories/national/incam-tax-businesses-less-rs-5-611534.html" target="_blank">ವೇತನದಾರರಿಗೆ ಬಜೆಟ್ ಬೋನಸ್: ₹ 5 ಲಕ್ಷ ವರೆಗೆ ತೆರಿಗೆ ವಿನಾಯ್ತಿ</a></strong></p>.<p><strong>*<a href="https://www.prajavani.net/stories/national/union-budget-2019-defence-611546.html" target="_blank">ಕೇಂದ್ರ ಬಜೆಟ್ 2019: ರಕ್ಷಣಾ ವೆಚ್ಚ ₹3 ಲಕ್ಷ ಕೋಟಿಗೆ ಏರಿಕೆ</a></strong></p>.<p><strong>*<a href="https://www.prajavani.net/stories/national/railway-budget-2019-highlights-611537.html" target="_blank">ರೈಲ್ವೆಗೆ ₹1.6 ಲಕ್ಷ ಕೋಟಿ: ಕಾವಲುರಹಿತ ಕ್ರಾಸಿಂಗ್ಗಳು ಬಂದ್</a></strong></p>.<p><strong>*<a href="https://www.prajavani.net/stories/national/piyush-goyal-presents-interim-611528.html" target="_blank">ಹೆಚ್ಚಿದೆ ಆದಾಯ, ಪ್ರಕಾಶಿಸುತ್ತಿದೆ ಭಾರತ: ಪೀಯೂಷ್ ಗೋಯಲ್</a></strong></p>.<p><strong>*<a href="https://www.prajavani.net/stories/national/central-budget-2019-pradhan-611530.html" target="_blank">ಅಸಂಘಟಿತ ವಲಯದ ಕಾರ್ಮಿಕರಿಗಾಗಿ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ಧನ್’</a></strong></p>.<p>*<a href="https://cms.prajavani.net/stories/national/www.prajavani.net/stories/national/10-lakh-patients-treated-so-611543.html"><strong>ಆಯುಷ್ಮಾನ್ ಭಾರತ್ಯೋಜನೆಯಡಿ 10 ಲಕ್ಷ ಜನರಿಗೆ ಚಿಕಿತ್ಸೆ</strong></a></p>.<p><strong>*<a href="https://www.prajavani.net/business/commerce-news/budget-reactions-siddaramiah-611536.html" target="_blank">ನಾನು ರೂಪಿಸಿದ್ದ ಯೋಜನೆಯ ಅರ್ಧ ಕಾಪಿ ಹೊಡೆದಿದ್ದಾರೆ: ಸಿದ್ದರಾಮಯ್ಯ ಆರೋಪ</a></strong></p>.<p>*<a href="https://cms.prajavani.net/stories/national/www.prajavani.net/stories/national/central-budget-2019%C2%A0artificial-611553.html"><strong>ಕೃತಕ ಬುದ್ಧಿಮತ್ತೆ ಕೇಂದ್ರ ಸ್ಥಾಪನೆ, ಲಕ್ಷ ಡಿಜಿಟಲ್ ಗ್ರಾಮ ನಿರ್ಮಾಣಕ್ಕೆ ಒತ್ತು</strong></a></p>.<p><strong>*<a href="https://www.prajavani.net/stories/national/central-budget-2019-opinion-611557.html">ಕೇಂದ್ರ ಬಜೆಟ್ 2019: ಇವರು ಹೀಗಂದರು...</a></strong></p>.<p><strong>*</strong><a href="https://www.prajavani.net/op-ed/opinion/way-understand-budget-611574.html"><strong>ಈ ಬಜೆಟ್ ಅರ್ಥ ಮಾಡಿಕೊಳ್ಳಬೇಕಿರುವುದು ಹೀಗೆ...</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ನಲ್ಲಿ ಮಧ್ಯಮವರ್ಗದ ತೆರಿಗೆ ಹೊರೆಯನ್ನು ತಗ್ಗಿಸಿದೆ. ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ₹2.5 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಮುಂದಿನ ಹಣಕಾಸು ವರ್ಷದಿಂದ ಈ ಪ್ರಯೋಜನ ದೊರೆಯಲಿದೆ.</p>.<p>ಈ ನಿರ್ಧಾರದಿಂದ ದೇಶದಲ್ಲಿನಅಂದಾಜು 3 ಕೋಟಿಯಷ್ಟು ವೇತನ ವರ್ಗ, ಪಿಂಚಣಿದಾರರು, ಸ್ವ ಉದ್ಯೋಗ ನಡೆಸುತ್ತಿರುವವರು, ಸಣ್ಣ ಉದ್ದಿಮೆ ಹಾಗೂ ಸಣ್ಣ ವರ್ತಕರು, ಹಿರಿಯ ನಾಗರಿಕರಿಗೆ ಮುಂದಿನ ವರ್ಷಕ್ಕೆ₹ 18,500 ಕೋಟಿಗಳಷ್ಟು ತೆರಿಗೆ ಉಳಿತಾಯವಾಗಲಿದೆ ಎಂದು ಅಂದಾಜು ಮಾಡಲಾಗಿದೆ.</p>.<p>ತೆರಿಗೆ ಹಂತ ಮತ್ತು ಪ್ರಮಾಣದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ₹ 5 ಲಕ್ಷದಿಂದ ₹ 10 ಲಕ್ಷದವರೆಗಿನ ಆದಾಯಕ್ಕೆ ಶೇ 20ರಷ್ಟು, ₹ 10 ಲಕ್ಷಕ್ಕಿಂತ ಅಧಿಕ ವರಮಾನಕ್ಕೆ ಶೇ 30ರಷ್ಟು ತೆರಿಗೆಯೇ ಇರಲಿದೆ.</p>.<p><strong>ಯಾವುದಕ್ಕೆಲ್ಲ ವಿನಾಯ್ತಿ:</strong>ಬ್ಯಾಂಕ್ ಮತ್ತು ಅಂಚೆ ಕಚೇರಿ ಠೇವಣಿಗಳ ಮೇಲೆ ಪಡೆಯುವ ಬಡ್ಡಿ ವರಮಾನಕ್ಕೆ ಇದ್ದ ತೆರಿಗೆ ವಿನಾಯ್ತಿ ಮೊತ್ತವನ್ನು ₹ 10 ಸಾವಿರದಿಂದ ₹ 40 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಸಣ್ಣ ಹೂಡಿಕೆದಾರರು ಮತ್ತು ಗೃಹಿಣಿಯರಿಗೆ ಅನುಕೂಲವಾಗಲಿದೆ.</p>.<p>ತೆರಿಗೆ ಪಾವತಿದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಮೌಲ್ಯ ನಿರ್ಧಾರಿತ ಬಾಡಿಗೆ ಮೇಲಿನ ತೆರಿಗೆ ಕಡಿತವನ್ನು ಈಗಿರುವ ₹ 1.80 ಲಕ್ಷದಿಂದ ₹ 2.40 ಲಕ್ಷಕ್ಕೆ ಹೆಚ್ಚಿಸಲುನಿರ್ಧರಿಸಲಾಗಿದೆ.</p>.<p>ಮಾರಾಟವಾಗದೇ ಉಳಿದಿರುವ ವಸತಿ ನಿವೇಶನಗಳಿಗೆ ಎರಡು ವರ್ಷಗಳವರೆಗೆ ತೆರಿಗೆ ವಿನಾಯ್ತಿಯನ್ನು ಪ್ರಸ್ತಾಪಿಸಲಾಗಿದೆ. ಸದ್ಯಕ್ಕೆ ಒಂದು ವರ್ಷದವರೆಗೆ ವಿನಾಯ್ತಿ ಇದೆ.</p>.<p>2020ರ ಮಾರ್ಚ್ 31ರವರೆಗೆ ಗೃಹ ಯೋಜನೆಗೆ ಒಪ್ಪಿಗೆ ಪಡೆದಿದ್ದರೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80–ಐಬಿಎ ಅಡಿ ತೆರಿಗೆ ಪ್ರಯೋಜನ ಸಿಗಲಿದೆ.</p>.<p>**</p>.<p><strong>ಆದಾಯ ತೆರಿಗೆ ಗೊಂದಲ ಬೇಡ</strong></p>.<p>‘ಆದಾಯ ತೆರಿಗೆ ಬಗ್ಗೆ ಸಾಕಷ್ಟು ಜನರಿಗೆ ಗೊಂದಲ ಉಂಟಾಗಿದೆ. ಇಲ್ಲಿ ಒಂದು ಮಾತು ನೆನಪಿನಲ್ಲಿಡಿ. ಬಜೆಟ್ನಲ್ಲಿ ತೆರಿಗೆ ವಿನಾಯ್ತಿ ನೀಡಲಾಗಿದೆಯೇ ಹೊರತು ತೆರಿಗೆ ಮಿತಿಗಳನ್ನು ಬದಲಾಯಿಸಿಲ್ಲ. ಇದರಂತೆ ₹ 5 ಲಕ್ಷ ವರೆಗಿನ ನಿವ್ವಳ ಆದಾಯ ಹೊಂದಿರುವವರು ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ₹ 5 ಲಕ್ಷಕ್ಕಿಂತ ಹೆಚ್ಚು ನಿವ್ವಳ ಆದಾಯ ಹೊಂದಿದ್ದರೆ ತೆರಿಗೆ ಪಾವತಿಸಬೇಕಾಗುತ್ತದೆ. ₹ 5 ಲಕ್ಷದ ವರೆಗಿನ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯ್ತಿ ನೀಡುವುದರಿಂದ ₹ 12,500 ತೆರಿಗೆ ಉಳಿತಾಯವಾಗಲಿದೆ.</p>.<p>₹ 5 ಲಕ್ಷದ ವರೆಗಿನ ಆದಾಯದ ಜತೆಗೆ ₹ 50 ಸಾವಿರದ ಸ್ಟ್ಯಾಂಡರ್ಡ್ ಡಿಡಕ್ಷನ್, ಸೆಕ್ಷನ್ 80 ಸಿ ಅಡಿಯಲ್ಲಿ ₹ 1.5 ಲಕ್ಷ, 80 ಡಿ ಅಡಿಯಲ್ಲಿ ಆರೋಗ್ಯ ವಿಮೆಯ ಲಾಭ, ಸೆಕ್ಷನ್ 80 ಸಿಸಿಡಿ ( 1 ಬಿ) ಅಡಿಯಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ₹ 50 ಸಾವಿರ ವಿನಾಯ್ತಿ, ಗೃಹ ಸಾಲದ ಬಡ್ಡಿ ಮೇಲೆ ವಿನಾಯ್ತಿ ಸಿಗಲಿದೆ. ₹ 5 ಲಕ್ಷ ಮೇಲ್ಪಟ್ಟು ಆದಾಯ ಇರುವವರಿಗೆ ಈ ಹಿಂದೆ ಇದ್ದ ತೆರಿಗೆ ಮಿತಿಗಳು ಮುಂದುವರಿಯಲಿದೆ.</p>.<p>**</p>.<p><strong>ಬಾಡಿಗೆ ಮನೆಗೆ ವಿನಾಯ್ತಿ</strong></p>.<p>ಒಂದಕ್ಕಿಂತ ಹೆಚ್ಚು ಮನೆಗಳಲ್ಲಿ ವಾಸವಿದ್ದರೆ, ಅಂದರೆ ಕುಟುಂಬ ಒಂದು ಕಡೆ ನೆಲೆಸಿದ್ದು, ಯಜಮಾನ ಕೆಲಸಕ್ಕಾಗಿ ಬೇರೆ ಕಡೆ ಮನೆ ಮಾಡಿದ್ದರೆ ಎರಡೂ ಮನೆಗೂ ಬಾಡಿಗೆ ಮೇಲಿನ ತೆರಿಗೆಯಿಂದ ವಿನಾಯ್ತಿ ಸಿಗಲಿದೆ.</p>.<p>ಸ್ಥಿರಾಸ್ತಿ ಮಾರಾಟದಿಂದ ಬರುವ ₹ 2 ಕೋಟಿ ಬಂಡವಾಳ ಗಳಿಕೆಯನ್ನು ಎರಡು ಮನೆಗಳ ಖರೀದಿಗೆ ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಒಂದು ಬಾರಿಗೆ ಮಾತ್ರ ಇದರ ಪ್ರಯೋಜನ ಪಡೆದುಕೊಳ್ಳಬಹುದು.</p>.<p><strong>ಎಂಎಸ್ಎಂಇಗೆ 7 ಸಾವಿರ ಕೋಟಿ</strong></p>.<p>ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ₹7,011 ಕೋಟಿ ಹಣ ನೀಡಲಾಗಿದೆ. ಇದು ಈವರೆಗಿನ ಅತಿ ಹೆಚ್ಚು ಅನುದಾನವಾಗಿದೆ. ಈ ಹಿಂದಿನ ಯಾವುದೇ ಬಜೆಟ್ಗಳಲ್ಲಿ ಇಷ್ಟೊಂದು ಹಣವನ್ನು ನೀಡಿರಲಿಲ್ಲ.</p>.<p>ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಹೂಡಿಕೆಯ ಉದ್ದಿಮೆಗಳಿಗೆ ಈ ಹಣ ನೀಡಲಾಗಿದೆ. ಇದರಿಂದ ದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಬಹುದಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.</p>.<p>ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಗೆ (ಪಿಎಂಇಜಿಪಿ) ₹2,327 ಕೋಟಿ ನೀಡಲಾಗಿದೆ.</p>.<p>ಪಿಎಂಇಜಿಪಿಯಿಂದ ಸುಸ್ಥಿರ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಎಂಎಸ್ಎಂಇಗಳಿಗೆ ಹಣಕಾಸು ಖಾತ್ರಿಗಾಗಿ ಹಣಕಾಸು ಬೆಂಬಲ ಯೋಜನೆಯಡಿ ₹597 ಕೋಟಿ ನೀಡಲಾಗಿದೆ.</p>.<p><strong>₹ 34.17 ಲಕ್ಷ ಕೋಟಿಗೆ ಲೇಖಾನುದಾನ</strong></p>.<p>ಮುಂದಿನ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳ ಕಾಲ ವೆಚ್ಚ ಮಾಡಲು ಕೇಂದ್ರ ಸರ್ಕಾರ ₹ 34.17 ಲಕ್ಷ ಕೋಟಿಗಳ ಲೇಖಾನುದಾನಕ್ಕೆ ಸಂಸತ್ತಿನ ಒಪ್ಪಿಗೆ ಕೇಳಿದೆ.</p>.<p>2019–20ನೆ ಹಣಕಾಸು ವರ್ಷಕ್ಕೆ ಒಟ್ಟು ₹ 97.43 ಲಕ್ಷ ಕೋಟಿ ವೆಚ್ಚ ತಗುಲಿದೆ ಎಂದು ಮಧ್ಯಂತರ ಬಜೆಟ್ನಲ್ಲಿ ಅಂದಾಜಿಸಲಾಗಿದೆ.</p>.<p>ನಿಗದಿತ ಅವಧಿಗೆ ವೆಚ್ಚ ಮಾಡಲು ಮುಂಚಿತವಾಗಿಯೇ ಸಂಸತ್ತು ಅನುಮೋದನೆ ನೀಡುವುದಕ್ಕೆ ಲೇಖಾನುದಾನ ಎನ್ನುತ್ತಾರೆ.</p>.<p>ಲೇಖಾನುದಾನ ಕೋರಿದ ₹ 34.17 ಲಕ್ಷ ಕೋಟಿಯಲ್ಲಿ ₹ 65,366 ಕೋಟಿಗಳನ್ನು ಆಹಾರ ಮತ್ತು ಪಡಿತರ ವಿತರಣೆಗೆ ನಿಗದಿಪಡಿಸಲಾಗಿದೆ. ಗ್ರಾಮೀಣಾಭಿವೃದ್ಧಿಗೆ ₹ 20 ಸಾವಿರ ಕೋಟಿ ಮತ್ತು ರಕ್ಷಣಾ ಸೇವೆಗಳಿಗೆ ₹ 37,423 ಕೋಟಿ ನೀಡಲು ಕೋರಲಾಗಿದೆ.</p>.<p><strong>3 ಬ್ಯಾಂಕ್ಗಳ ನಿರ್ಬಂಧ ಸಡಿಲ</strong></p>.<p>ಬಂಡವಾಳ ನೆರವು ನೀಡುವು ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ವಿಧಿಸಿದ್ದ ಕಠಿಣ ಸ್ವರೂಪದ ನಿರ್ಬಂಧಿತ ಕ್ರಮಗಳಿಂದ (ಪಿಸಿಎ) ಮೂರು ಬ್ಯಾಂಕ್ಗಳನ್ನು ಕೈಬಿಡಲಾಗಿದೆ.</p>.<p>‘ಒಟ್ಟಾರೆ 11 ಬ್ಯಾಂಕ್ಗಳ ವಿರುದ್ಧ ಪಿಸಿಎ ವಿಧಿಸಲಾಗಿತ್ತು. ಅವುಗಳಲ್ಲಿ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮೇಲಿದ್ದ ನಿರ್ಬಂಧಗಳನ್ನು ಆರ್ಬಿಐಕೈಬಿಟ್ಟಿದೆ’ ಎಂದು ಗೋಯಲ್ ತಿಳಿಸಿದ್ದಾರೆ.</p>.<p>‘ಇನ್ನುಳಿದ 8 ಬ್ಯಾಂಕ್ಗಳು ಶೀಘ್ರವೇ ನಿರ್ಬಂಧದಿಂದ ಹೊರಬರುವ ವಿಶ್ವಾಸವಿದೆ’ ಎಂದಿದ್ದಾರೆ.</p>.<p><strong>5 ವರ್ಷದಲ್ಲಿ ₹ 16.96 ಲಕ್ಷ ಕೋಟಿ ಎಫ್ಡಿಐ</strong></p>.<p>ಐದು ವರ್ಷದಲ್ಲಿ ₹ 16.96 ಲಕ್ಷ ಕೋಟಿಯಷ್ಟು ವಿದೇಶಿ ನೇರ ಬಂಡವಾಳ (ಎಫ್ಡಿಐ) ಹರಿದುಬಂದಿದೆ.</p>.<p>ಸೇವೇಗಳು, ಕಂಪ್ಯೂಟರ್ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್, ದೂರಸಂಪರ್ಕ, ವ್ಯಾಪಾರ, ನಿರ್ಮಾಣ, ವಾಹನ ಮತ್ತು ವಿದ್ಯುತ್ ವಲಯಗಳು ಅತಿ ಹೆಚ್ಚಿನ ಎಫ್ಡಿಐ ಆಕರ್ಷಿಸಿವೆ.ಮಾರಿಷಸ್, ಸಿಂಗಪುರ, ನೆದರ್ಲೆಂಡ್ಸ್, ಅಮೆರಿಕ ಮತ್ತು ಜಪಾನ್ ಎಫ್ಡಿಐನ ಪ್ರಮುಖ ಮೂಲಗಳಾಗಿವೆ.</p>.<p><strong>ಗುರಿ ತಲುಪದ ಜಿಎಸ್ಟಿ ಸಂಗ್ರಹ</strong></p>.<p>ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್ಟಿ) ₹ 7.43 ಲಕ್ಷ ಕೋಟಿ ಸಂಗ್ರಹಿಸುವುದಾಗಿ ಬಜೆಟ್ನಲ್ಲಿ ಅಂದಾಜಿಸಲಾಗಿತ್ತು.ಆದರೆ, ಪರಿಷ್ಕೃತ ಅಂದಾಜಿನಲ್ಲಿ₹ 6.43 ಲಕ್ಷ ಕೋಟಿಗೆ ತಗ್ಗಿಸಲಾಗಿದೆ.</p>.<p>10 ತಿಂಗಳಿನಲ್ಲಿ (ಏಪ್ರಿಲ್–ಜನವರಿ) ಕೇಂದ್ರ ಮತ್ತು ರಾಜ್ಯಗಳ ಜಿಎಸ್ಟಿ ಸಂಗ್ರಹ ₹ 9.71 ಲಕ್ಷ ಕೋಟಿಯಷ್ಟಾಗಿದೆ.</p>.<p>ಪ್ರಸಕ್ತ ಹಣಕಾಸು ವರ್ಷದಲ್ಲಿ ತಿಂಗಳ ಸರಾಸರಿ ಜಿಎಸ್ಟಿ ಸಂಗ್ರಹ ₹ 89,700 ಕೋಟಿಯಿಂದ ₹ 97,100 ಕೋಟಿಗೆ ಏರಿಕೆಯಾಗಿದೆ.</p>.<p>ವಿನಾಯ್ತಿ ಮತ್ತು ಕಡಿತದ ಹೊರತಾಗಿಯೂ ವರಮಾನ ಸಂಗ್ರಹ ಉತ್ತೇಜನಕಾರಿಯಾಗಿದೆ ಎಂದು ಗೋಯಲ್ ತಿಳಿಸಿದ್ದಾರೆ.</p>.<p>2019–20ನೇ ಹಣಕಾಸು ವರ್ಷದಲ್ಲಿ ಜಿಎಸ್ಟಿಯಿಂದ ₹ 7.61 ಕೋಟಿ ಸಂಗ್ರಹಿಸುವ ಅಂದಾಜು ಮಾಡಲಾಗಿದೆ.</p>.<p>ಬಡವರು ಮತ್ತು ಮಧ್ಯಮ ವರ್ಗ ಬಳಸುತ್ತಿರುವಬಹುತೇಕ ಅಗತ್ಯ ವಸ್ತುಗಳಲ್ಲಿ ಕೆಲವು ಶೂನ್ಯ ತೆರಿಗೆಯಲ್ಲಿದ್ದರೆ, ಇನ್ನೂ ಕೆಲವು ಶೇ 5 ರ ತೆರಿಗೆಯಲ್ಲಿವೆ.</p>.<p>**</p>.<p><strong>ಬಜೆಟ್–2019: ಪ್ರತಿಕ್ರಿಯೆ</strong></p>.<p>ದೇಶದ ಯುವಜನರು, ರೈತರು ಹಾಗೂ ಬಡವರ ಆಕಾಂಕ್ಷೆಗಳನ್ನು ಈಡೇರಿಸುವ ಮೋದಿ ಸರ್ಕಾರದ ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ.</p>.<p><em><strong>–ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ</strong></em></p>.<p>**</p>.<p>ನೋಟು ರದ್ದು, ಕಪ್ಪು ಹಣ ತಡೆಯಿಂದ ಈವರೆಗೆ ₹1.30 ಲಕ್ಷ ಕೋಟಿ ಅಘೋಷಿತ ಆಸ್ತಿ ಪತ್ತೆಯಾಗಿದೆ. ಅಲ್ಲದೆ ₹50 ಸಾವಿರ ಕೋಟಿ ವಶಕ್ಕೆ ಪಡೆಯಲಾಗಿದೆ.</p>.<p><em><strong>–ಪಿಯೂಷ್ ಗೋಯಲ್, ಹಣಕಾಸು ಸಚಿವ</strong></em></p>.<p><em><strong>**</strong></em></p>.<p>ಕೇಂದ್ರ ಬಜೆಟ್ ಬಿಜೆಪಿ ಪ್ರಣಾಳಿಕೆ ಇದ್ದಂತಿದೆ. ಲೋಕಸಭಾ ಚುನಾವಣೆ ಹತ್ತಿರದಲ್ಲಿರುವಾಗ ಮತದಾರರಿಗೆ ಲಂಚ ನೀಡಲು ಬಿಜೆಪಿ ಈ ಮೂಲಕ ಯತ್ನಿಸಿದೆ. ಇವು ಕೇವಲ ಹುಸಿ ಭರವಸೆಗಳು.</p>.<p><em><strong>–ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ</strong></em></p>.<p><em><strong>**</strong></em></p>.<p>ಇದು ಐತಿಹಾಸಿಕ ಬಜೆಟ್. ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ಸರ್ಕಾರ ಬಯಸಿದ್ದು, ಇದು ಬಜೆಟ್ನ ಧ್ಯೇಯವಾಗಿದೆ.</p>.<p><em><strong>–ರಾಜನಾಥ ಸಿಂಗ್, ಕೇಂದ್ರ ಗೃಹ ಸಚಿವ</strong></em></p>.<p>**</p>.<p>ಲೋಕಸಭಾ ಚುನಾವಣೆ ದೃಷ್ಟಿಯಿಂದ ಮಂಡಿಸಿರುವ ಬಜೆಟ್ ಇದು. ಆರ್ಥಿಕತೆಯನ್ನು ಸರಿದೂಗಿಸುವಲ್ಲಿ ಆಗಿರುವ ಭಾರಿ ವೈಫಲ್ಯವನ್ನು ಮರೆಮಾಚುವ ಯತ್ನ ಇಲ್ಲಿದೆ.</p>.<p><em><strong>–ಡಿ. ರಾಜಾ, ಸಿಪಿಐ ಮುಖಂಡ</strong></em></p>.<p>**</p>.<p>ಮಧ್ಯಮವರ್ಗಕ್ಕೆ ತೆರಿಗೆ ಮಿತಿ ಏರಿಸಿರುವುದನ್ನು ಸ್ವಾಗತಿಸುತ್ತೇನೆ. ತಿಂಗಳಿಗೆ 500 ರೂಪಾಯಿಯಲ್ಲಿ ರೈತರು ಗೌರವಯುತ ಜೀವನ ನಿರ್ವಹಿಸಲು ಸಾಧ್ಯವೇ?</p>.<p><strong><em>–ಶಶಿ ತರೂರ್, ಕಾಂಗ್ರೆಸ್ ಮುಖಂಡ</em></strong></p>.<p><strong><em>**</em></strong></p>.<p>ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಹರಿಸಿರುವುದು ಸ್ವಾಗತಾರ್ಹ. ಮಾರುಕಟ್ಟೆ ಸಂಪರ್ಕ, ಉಗ್ರಾಣ, ಕೃಷಿ ಉತ್ಪನ್ನ ಸಂಕ್ಷರಣೆಗೆ ಒತ್ತು ಒಳ್ಳೆಯ ಕ್ರಮ.</p>.<p><strong><em>–ಎಚ್.ಕೆ. ಭನ್ವಾಲಾ, ನಬಾರ್ಡ್ ಮುಖ್ಯಸ್ಥ</em></strong></p>.<p><strong>ಇವನ್ನೂ ಓದಿ...</strong></p>.<p>*<a href="https://www.prajavani.net/stories/national/budget-2019-tax-rebate-611560.html"><strong>ನಿಮ್ಮ ಆದಾಯಕ್ಕೂ ಇದೆಯೇ ತೆರಿಗೆ ವಿನಾಯಿತಿ? ಬಜೆಟ್ ಬಳಿಕ ಆಗಿದ್ದೇನು?</strong></a></p>.<p><strong>*<a href="https://www.prajavani.net/stories/national/budget-2019-rashtriya-gokul-611559.html">ರಾಷ್ಟ್ರೀಯ ಕಾಮಧೇನು ಆಯೋಗ ರಚನೆ, ಗೋಕುಲ ಮಿಷನ್ಗೆ ₹750 ಕೋಟಿ</a></strong></p>.<p><strong>*<a href="https://cms.prajavani.net/stories/national/www.prajavani.net/stories/national/central-budget-2019-welfare-611548.html">ಮಧ್ಯಮ ವರ್ಗ, ರೈತ, ಕಾರ್ಮಿಕರಿಗೆ ಬಜೆಟ್ನಲ್ಲಿ ಏನೇನಿದೆ? ಇಲ್ಲಿದೆ ಮಾಹಿತಿ</a></strong></p>.<p><strong>*<a href="https://www.prajavani.net/stories/national/pradhan-mantri-kisan-samman-611531.html" target="_blank">‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಸ್ಥಾಪನೆ, ರೈತರ ಖಾತೆಗೆ ₹6 ಸಾವಿರ</a></strong></p>.<p><strong>*<a href="https://www.prajavani.net/stories/national/central-budget-2019-scst-fund-611566.html">ಎಸ್ಸಿ, ಎಸ್ಟಿ ಅನುದಾನ ಗಣನೀಯ ಪ್ರಮಾಣದಲ್ಲಿ ಹೆಚ್ಚಳ</a></strong></p>.<p><strong>*<a href="https://www.prajavani.net/stories/national/budget-education-2019-611572.html">ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ: ₹93 ಸಾವಿರ ಕೋಟಿ ಅನುದಾನ</a></strong></p>.<p><strong>*<a href="https://www.prajavani.net/stories/national/incam-tax-businesses-less-rs-5-611534.html" target="_blank">ವೇತನದಾರರಿಗೆ ಬಜೆಟ್ ಬೋನಸ್: ₹ 5 ಲಕ್ಷ ವರೆಗೆ ತೆರಿಗೆ ವಿನಾಯ್ತಿ</a></strong></p>.<p><strong>*<a href="https://www.prajavani.net/stories/national/union-budget-2019-defence-611546.html" target="_blank">ಕೇಂದ್ರ ಬಜೆಟ್ 2019: ರಕ್ಷಣಾ ವೆಚ್ಚ ₹3 ಲಕ್ಷ ಕೋಟಿಗೆ ಏರಿಕೆ</a></strong></p>.<p><strong>*<a href="https://www.prajavani.net/stories/national/railway-budget-2019-highlights-611537.html" target="_blank">ರೈಲ್ವೆಗೆ ₹1.6 ಲಕ್ಷ ಕೋಟಿ: ಕಾವಲುರಹಿತ ಕ್ರಾಸಿಂಗ್ಗಳು ಬಂದ್</a></strong></p>.<p><strong>*<a href="https://www.prajavani.net/stories/national/piyush-goyal-presents-interim-611528.html" target="_blank">ಹೆಚ್ಚಿದೆ ಆದಾಯ, ಪ್ರಕಾಶಿಸುತ್ತಿದೆ ಭಾರತ: ಪೀಯೂಷ್ ಗೋಯಲ್</a></strong></p>.<p><strong>*<a href="https://www.prajavani.net/stories/national/central-budget-2019-pradhan-611530.html" target="_blank">ಅಸಂಘಟಿತ ವಲಯದ ಕಾರ್ಮಿಕರಿಗಾಗಿ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ಧನ್’</a></strong></p>.<p>*<a href="https://cms.prajavani.net/stories/national/www.prajavani.net/stories/national/10-lakh-patients-treated-so-611543.html"><strong>ಆಯುಷ್ಮಾನ್ ಭಾರತ್ಯೋಜನೆಯಡಿ 10 ಲಕ್ಷ ಜನರಿಗೆ ಚಿಕಿತ್ಸೆ</strong></a></p>.<p><strong>*<a href="https://www.prajavani.net/business/commerce-news/budget-reactions-siddaramiah-611536.html" target="_blank">ನಾನು ರೂಪಿಸಿದ್ದ ಯೋಜನೆಯ ಅರ್ಧ ಕಾಪಿ ಹೊಡೆದಿದ್ದಾರೆ: ಸಿದ್ದರಾಮಯ್ಯ ಆರೋಪ</a></strong></p>.<p>*<a href="https://cms.prajavani.net/stories/national/www.prajavani.net/stories/national/central-budget-2019%C2%A0artificial-611553.html"><strong>ಕೃತಕ ಬುದ್ಧಿಮತ್ತೆ ಕೇಂದ್ರ ಸ್ಥಾಪನೆ, ಲಕ್ಷ ಡಿಜಿಟಲ್ ಗ್ರಾಮ ನಿರ್ಮಾಣಕ್ಕೆ ಒತ್ತು</strong></a></p>.<p><strong>*<a href="https://www.prajavani.net/stories/national/central-budget-2019-opinion-611557.html">ಕೇಂದ್ರ ಬಜೆಟ್ 2019: ಇವರು ಹೀಗಂದರು...</a></strong></p>.<p><strong>*</strong><a href="https://www.prajavani.net/op-ed/opinion/way-understand-budget-611574.html"><strong>ಈ ಬಜೆಟ್ ಅರ್ಥ ಮಾಡಿಕೊಳ್ಳಬೇಕಿರುವುದು ಹೀಗೆ...</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>