ಈ ಬಗ್ಗೆ ಟ್ವೀಟ್ ಮಾಡಿರುವ ಒವೈಸಿ, ‘ರಾಹುಲ್ ಮತ್ತು ಕಾಂಗ್ರೆಸ್ ಹಿಂದುತ್ವಕ್ಕಾಗಿ ಭೂಮಿ ಹದ ಮಾಡಿವೆ. ಈಗ ಅವರು ‘ಬಹುಸಂಖ್ಯಾತ ವಾದ’ದ ಬೆಳೆ ಬೆಳೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಹಿಂದೂಗಳನ್ನು ಅಧಿಕಾರಕ್ಕೆ ತರುವುದು 2021ರ ಅವರ 'ಜಾತ್ಯತೀತ' ಕಾರ್ಯಸೂಚಿಯೂ ಆಗಿದೆ. ವಾಹ್...! ಭಾರತವು ಭಾರತೀಯರಿಗೆ ಸೇರಿದ್ದು. ಹಿಂದುಗಳಿಗೆ ಮಾತ್ರ ಸೇರಿದ್ದಲ್ಲ. ಹಲವು ನಂಬುಗೆಗಳನ್ನು ಹೊಂದಿರುವ, ನಂಬುಗೆಗಳನ್ನೇ ಹೊಂದದ ಎಲ್ಲ ಜನರದ್ದು’ ಎಂದು ಅವರು ಹೇಳಿದ್ದಾರೆ.