<p><strong>ಚೆನ್ನೈ:</strong> ಕೆಟ್ಟ ನೆರೆಹೊರೆಯವರಿಂದ ತನ್ನ ನಾಗರಿಕರನ್ನು ರಕ್ಷಿಸುವ ಎಲ್ಲಾ ಹಕ್ಕು ಭಾರತಕ್ಕಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಶುಕ್ರವಾರ ಹೇಳಿದ್ದಾರೆ. </p><p>ಐಐಟಿ ಮದ್ರಾಸ್ನಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ಅವರು ಮಾತನಾಡಿದ್ದಾರೆ. </p><p>ಭಯೋತ್ಪಾದನೆಯನ್ನು ಸಲಹುವ ದೇಶವು, ಭಾರತದ ಬಳಿ ನೀರು ಕೊಡಿ ಎಂದು ಕೇಳಬಾರದು. ನಮ್ಮ ಹಕ್ಕುಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ನಮಗೆ ಯಾವ ದೇಶವೂ ಕೂಡ ಉಪದೇಶ ನೀಡಬೇಕಾಗಿಲ್ಲ ಎಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ. </p><p>ಭಾರತವು ಒಳ್ಳೆಯ ನೆರೆಹೊರೆಯವರಿಗೆ ಒಳಿತನ್ನೇ ಬಯಸುತ್ತದೆ. ಆ ದೇಶಗಳಿಗೆ ಹೂಡಿಕೆ, ಸಹಾಯ ಮತ್ತು ಸಹಕಾರ ನೀಡುತ್ತದೆ. ನಮ್ಮ ಮಿತ್ರರಾಷ್ಟ್ರಗಳಿಗೆ ಕೋವಿಡ್ ಸಮಯದಲ್ಲಿ ವ್ಯಾಕ್ಸಿನ್ ನೀಡಿರುವುದು, ಉಕ್ರೇನ್ ಸಂಘರ್ಷದ ವೇಳೆ ಆಹಾರ ಮತ್ತು ಇಂಧನ ಪೂರೈಕೆ, ಶ್ರೀಲಂಕಾವು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸಮಯದಲ್ಲಿ 4 ಬಿಲಿಯನ್ ಅಮೆರಿಕನ್ ಡಾಲರ್ ಸಹಾಯ ಮಾಡಿದ್ದೆವು ಎಂದು ಹೇಳಿದ್ದಾರೆ. </p><p>ಸಾಮಾನ್ಯ ಜನರು ರಾಜತಾಂತ್ರಿಕತೆಯನ್ನು ರಾಕೆಟ್ ಸೈನ್ಸ್ ಎಂದು ತಿಳಿದುಕೊಂಡಿದ್ದಾರೆ. ಆದರೆ ಅದು ಕೇವಲ ಸಾಮಾನ್ಯ ಜ್ಞಾನವಷ್ಟೇ. ನಿಮ್ಮ ಜೊತೆ ಚೆನ್ನಾಗಿರುವ, ನಿಮಗೆ ಹಾನಿ ಮಾಡದ ನೆರೆಹೊರೆಯವರೊಂದಿಗೆ ನೀವು ಚೆನ್ನಾಗಿಯೇ ಇರುತ್ತೀರಿ. ಆದರೆ, ನಿಮಗೆ ತೊಂದರೆ ಕೊಡುವ ನೆರೆಹೊರೆಯವರೊಂದಿಗೆ ಆ ಬಾಂಧವ್ಯ ಸಾಧ್ಯವಿಲ್ಲ. ಒಂದು ದೇಶದ ವಿದೇಶಾಂಗ ನೀತಿಗೂ ಕೂಡ ಇದು ಅನ್ವಯವಾಗುತ್ತದೆ ಎಂದಿದ್ದಾರೆ. </p><p>ಆಧುನಿಕ ಕಾಲದಲ್ಲೂ ಕೆಲವೇ ದೇಶಗಳು ಮಾತ್ರ ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡಿವೆ. ಅದರಲ್ಲಿ ಭಾರತವೂ ಒಂದು. ನಾವು ವಸುಧೈವ ಕುಟುಂಬಕಂ ಎನ್ನುವ ವಾಕ್ಯದಲ್ಲಿ ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ. </p><p>‘ಐಐಟಿಎಂ ಗ್ಲೋಬಲ್ ರಿಸರ್ಚ್ ಫೌಂಡೇಶನ್’ ಅನ್ನು ಜೈಶಂಕರ್ ಅವರು ಉದ್ಘಾಟಿಸಿದರು.</p>.<div><blockquote>ಭಾರತದ ಉದ್ದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದನ್ನು ತಪ್ಪಿಸಲು ಇತರ ದೇಶಗಳೊಂದಿಗೆ ಸಂವಹನ ನಡೆಸುವುದು ಮುಖ್ಯ</blockquote><span class="attribution">ಎಸ್. ಜೈಶಂಕರ್ ವಿದೇಶಾಂಗ ಸಚಿವ</span></div>.<p><strong>ಬಾಂಗ್ಲಾದೊಂದಿಗೆ ಸ್ನೇಹ</strong></p><p> ‘ಬಾಂಗ್ಲಾದೇಶದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರ ರಚನೆಯಾದ ಬಳಿಕ ಆ ದೇಶದೊಂದಿಗಿನ ಬಾಂಧವ್ಯವನ್ನು ಹಿಂದಿನಂತೆಯೇ ಮುಂದುವರಿಸಲು ಸ್ನೇಹ ಹಸ್ತ ಚಾಚಲಾಗುವುದು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಕೆಟ್ಟ ನೆರೆಹೊರೆಯವರಿಂದ ತನ್ನ ನಾಗರಿಕರನ್ನು ರಕ್ಷಿಸುವ ಎಲ್ಲಾ ಹಕ್ಕು ಭಾರತಕ್ಕಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಶುಕ್ರವಾರ ಹೇಳಿದ್ದಾರೆ. </p><p>ಐಐಟಿ ಮದ್ರಾಸ್ನಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ಅವರು ಮಾತನಾಡಿದ್ದಾರೆ. </p><p>ಭಯೋತ್ಪಾದನೆಯನ್ನು ಸಲಹುವ ದೇಶವು, ಭಾರತದ ಬಳಿ ನೀರು ಕೊಡಿ ಎಂದು ಕೇಳಬಾರದು. ನಮ್ಮ ಹಕ್ಕುಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ನಮಗೆ ಯಾವ ದೇಶವೂ ಕೂಡ ಉಪದೇಶ ನೀಡಬೇಕಾಗಿಲ್ಲ ಎಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ. </p><p>ಭಾರತವು ಒಳ್ಳೆಯ ನೆರೆಹೊರೆಯವರಿಗೆ ಒಳಿತನ್ನೇ ಬಯಸುತ್ತದೆ. ಆ ದೇಶಗಳಿಗೆ ಹೂಡಿಕೆ, ಸಹಾಯ ಮತ್ತು ಸಹಕಾರ ನೀಡುತ್ತದೆ. ನಮ್ಮ ಮಿತ್ರರಾಷ್ಟ್ರಗಳಿಗೆ ಕೋವಿಡ್ ಸಮಯದಲ್ಲಿ ವ್ಯಾಕ್ಸಿನ್ ನೀಡಿರುವುದು, ಉಕ್ರೇನ್ ಸಂಘರ್ಷದ ವೇಳೆ ಆಹಾರ ಮತ್ತು ಇಂಧನ ಪೂರೈಕೆ, ಶ್ರೀಲಂಕಾವು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸಮಯದಲ್ಲಿ 4 ಬಿಲಿಯನ್ ಅಮೆರಿಕನ್ ಡಾಲರ್ ಸಹಾಯ ಮಾಡಿದ್ದೆವು ಎಂದು ಹೇಳಿದ್ದಾರೆ. </p><p>ಸಾಮಾನ್ಯ ಜನರು ರಾಜತಾಂತ್ರಿಕತೆಯನ್ನು ರಾಕೆಟ್ ಸೈನ್ಸ್ ಎಂದು ತಿಳಿದುಕೊಂಡಿದ್ದಾರೆ. ಆದರೆ ಅದು ಕೇವಲ ಸಾಮಾನ್ಯ ಜ್ಞಾನವಷ್ಟೇ. ನಿಮ್ಮ ಜೊತೆ ಚೆನ್ನಾಗಿರುವ, ನಿಮಗೆ ಹಾನಿ ಮಾಡದ ನೆರೆಹೊರೆಯವರೊಂದಿಗೆ ನೀವು ಚೆನ್ನಾಗಿಯೇ ಇರುತ್ತೀರಿ. ಆದರೆ, ನಿಮಗೆ ತೊಂದರೆ ಕೊಡುವ ನೆರೆಹೊರೆಯವರೊಂದಿಗೆ ಆ ಬಾಂಧವ್ಯ ಸಾಧ್ಯವಿಲ್ಲ. ಒಂದು ದೇಶದ ವಿದೇಶಾಂಗ ನೀತಿಗೂ ಕೂಡ ಇದು ಅನ್ವಯವಾಗುತ್ತದೆ ಎಂದಿದ್ದಾರೆ. </p><p>ಆಧುನಿಕ ಕಾಲದಲ್ಲೂ ಕೆಲವೇ ದೇಶಗಳು ಮಾತ್ರ ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡಿವೆ. ಅದರಲ್ಲಿ ಭಾರತವೂ ಒಂದು. ನಾವು ವಸುಧೈವ ಕುಟುಂಬಕಂ ಎನ್ನುವ ವಾಕ್ಯದಲ್ಲಿ ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ. </p><p>‘ಐಐಟಿಎಂ ಗ್ಲೋಬಲ್ ರಿಸರ್ಚ್ ಫೌಂಡೇಶನ್’ ಅನ್ನು ಜೈಶಂಕರ್ ಅವರು ಉದ್ಘಾಟಿಸಿದರು.</p>.<div><blockquote>ಭಾರತದ ಉದ್ದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದನ್ನು ತಪ್ಪಿಸಲು ಇತರ ದೇಶಗಳೊಂದಿಗೆ ಸಂವಹನ ನಡೆಸುವುದು ಮುಖ್ಯ</blockquote><span class="attribution">ಎಸ್. ಜೈಶಂಕರ್ ವಿದೇಶಾಂಗ ಸಚಿವ</span></div>.<p><strong>ಬಾಂಗ್ಲಾದೊಂದಿಗೆ ಸ್ನೇಹ</strong></p><p> ‘ಬಾಂಗ್ಲಾದೇಶದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರ ರಚನೆಯಾದ ಬಳಿಕ ಆ ದೇಶದೊಂದಿಗಿನ ಬಾಂಧವ್ಯವನ್ನು ಹಿಂದಿನಂತೆಯೇ ಮುಂದುವರಿಸಲು ಸ್ನೇಹ ಹಸ್ತ ಚಾಚಲಾಗುವುದು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>